
ನಂಜನಗೂಡು:ಒತ್ತುವರಿಯಾಗಿದ್ದ ಸ್ಮಶಾನದ ಜಮೀನು ತೆರುವು…
- TV10 Kannada Exclusive
- August 24, 2023
- No Comment
- 187
ನಂಜನಗೂಡು:ಒತ್ತುವರಿಯಾಗಿದ್ದ ಸ್ಮಶಾನದ ಜಮೀನು ತೆರುವು…
ನಂಜನಗೂಡು,ಆ24,Tv10 ಕನ್ನಡ
ನಂಜನಗೂಡು ತಾಲೂಕಿನಲ್ಲಿ ಒತ್ತುವರಿಯಾಗಿದ್ದ ಸ್ಮಶಾನದ ಜಮೀನು ತೆರುವುಗೊಳಿಸಲಾಗಿದೆ.ನಂಜನಗೂಡು ತಾಲೂಕು ಕಸಬಾ ಹೋಬಳಿ ಕೊಂಗಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 6/1 ಮತ್ತು 6/2 ಸರ್ಕಾರಿ ಜಮೀನು ಹಾಗೂ ಸಾರ್ವಜನಿಕ ಸ್ಮಶಾನ ದ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು.ಸಂಭಂಧ ಪಟ್ಟ ದಾಖಲೆಗಳನ್ನ ಪರಿಶೀಲಿಸಿದ ಅಧಿಕಾರಿಗಳು ಅಕ್ರಮವಾಗಿ ಒತ್ತುವರಿ ದನ್ನ ಖಚಿತಪಡಿಸಿಕೊಂಡು ತೆರುವುಗೊಳಿಸಿದ್ದಾರೆ.ಮೈಸೂರು ಉಪ ವಿಭಾಗ ಅಧಿಕಾರಿಗಳಾದ ರಕ್ಷಿತ್ ರವರ ಆದೇಶದ ಮೇರೆಗೆ ತಹಸಿಲ್ದಾರ್ ರವರಾದ ಶಿವಕುಮಾರ್ ಕಾಸುನೂರು ರವರ ನೇತೃತ್ವದಲ್ಲಿ RI ಹರೀಶ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಅರ್ಜುನ್ ರಾಯ್ ರವರುಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ…