ಮೈಸೂರು:ಬಿಸಿಎಂ ಹಾಸ್ಟೆಲ್ ಹೆಣ್ಣುಮಕ್ಕಳಿಗೆ ಟಾರ್ಚರ್…ಸಿಎಂ ಗೆ ಪತ್ರ ಬರೆದ್ರೂ ಡೋಂಟ್ ಕೇರ್…ವಿಧ್ಯಾರ್ಥಿನಿಯರ ಗೋಳು ಕೇಳುವವರಾರು…?

ಮೈಸೂರು:ಬಿಸಿಎಂ ಹಾಸ್ಟೆಲ್ ಹೆಣ್ಣುಮಕ್ಕಳಿಗೆ ಟಾರ್ಚರ್…ಸಿಎಂ ಗೆ ಪತ್ರ ಬರೆದ್ರೂ ಡೋಂಟ್ ಕೇರ್…ವಿಧ್ಯಾರ್ಥಿನಿಯರ ಗೋಳು ಕೇಳುವವರಾರು…?

ಮೈಸೂರು,ಆ28,Tv10 ಕನ್ನಡ

ಮೈಸೂರಿನ ಗಾಯಿತ್ರಿಪುರಂ ನಲ್ಲಿರುವ ಬಿಸಿಎಂ ಹಾಸ್ಟೆಲ್ ನಲ್ಲಿರುವ ವಿಧ್ಯಾರ್ಥಿನಿಯರ ಗೋಳು ಕೇಳುವವರೇ ಇಲ್ಲದಂತಾಗಿದೆ.ಅಲ್ಲಿನ ಸಿಬ್ಬಂದಿಗಳ ದೌರ್ಜನ್ಯಕ್ಕೆ ವಿಧ್ಯಾರ್ಥನಿಯರು ಹೈರಾಣರಾಗಿದ್ದಾರೆ.ಬಡತನದ ಬೇಗೆಯಲ್ಲಿ ವಿವಿದ ಭಾಗಗಳಿಂದ ಓದಲು ಬಂದ ವಿಧ್ಯಾರ್ಥಿನಿಯರು ಸಿಬ್ಬಂದಿಗಳ ಟಾರ್ಚರ್ ಗೆ ತತ್ತರಿಸಿದ್ದಾರೆ.ವಿಧ್ಯಾರ್ಥಿನಿಯರ ನೆರವಿಗೆ ಆರ್.ಟಿ.ಐ.ಕಾರ್ಯಕರ್ತರೊಬ್ಬರು ಬಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಸಿಬ್ಬಂದಿಗಳು ಕ್ಯಾರೆ ಎನ್ನುತ್ತಿಲ್ಲ.ಅಲ್ಲಿನ ಫೋಟೋಗಳು ವಿಧ್ಯಾರ್ಥಿನಿಯರ ಬವಣೆಯನ್ನ ಪ್ರದರ್ಶಿಸುತ್ತಿದೆ

ಸಿಬ್ಬಂದಿಗಳು ಮಾಡಬೇಕಾದ ಕೆಲಸಗಳನ್ನ ವಿಧ್ಯಾರ್ಥಿನಿಯರು ಮಾಡಬೇಕಾದ ದುಃಸ್ಥಿತಿ ಇಲ್ಲಿಯದು.ಹಾಸ್ಟೆಲ್ ಸ್ವಚ್ಛಗೊಳಿಸುವುದು,ಅಡಿಗೆ ಕೆಲಸ ಮಾಡಿಸುವುದು,ಪಾತ್ರೆಗಳನ್ನ ತೊಳೆಸುವುದು,ಮುಖ್ಯವಾಗಿ ಶೌಚಾಲಯಗಳನ್ನೂ ಸಹ ಸ್ವಚ್ಛಗೊಳಿಸುವ ಕೆಲಸಗಳನ್ನ ವಿಧ್ಯಾರ್ಥಿನಿಯರೇ ಮಾಡುತ್ತಿದ್ದಾರೆ.ಇದು ಸಾಲದೆಂಬಂತೆ ಊಟ ನೀಡದೆ ಸತಾಯಿಸುತ್ತಿರುವುದೂ ಸಹ ಕೇಳಿ ಬರುತ್ತಿದೆ.ಕುಂಟುನೆಪ ನೀಡಿ ಊಟ ಹಾಕದೆ ತೊಂದರೆ ಕೊಡುತ್ತಿದ್ದಾರೆ.ಈ ಬಗ್ಗೆ ಯಾವುದೇ ವಿಧ್ಯಾರ್ಥಿನಿಯರು ಪ್ರಶ್ನಿಸಲು ಧೈರ್ಯ ಸಾಲದೇ ಹೆದರಿ ಕಾಲ ದೂಡುತ್ತಿದ್ದಾರೆ.ಮೈಸೂರಿನ

ಆರ್.ಟಿ.ಐ.ಕಾರ್ಯಕರ್ತ ಮೋಹನ್ ಕುಮಾರ್ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ರವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಉಡಾಫೆ ವರ್ತನೆ ತೋರುತ್ತಿರುವ ಸಿಬ್ಬಂದಿಗಳು ಯಾರಿಗೆ ಬೇಕಾದ್ರೂ ದೂರು ನೀಡುವಂತೆ ನಿರ್ಲಕ್ಷಿಸುತ್ತಿರುವುದಾಗಿ ಆರೋಪ ಕೇಳಿ ಬಂದಿದೆ.ಸಂಭಂಧಪಟ್ಟ ಅಧಿಕಾರಿಗಳು ಕೂಡಲೇ ಹಾಸ್ಟೆಲ್ ಗೆ ಭೇಟಿ ನೀಡಿ ವಿಧ್ಯಾರ್ಥಿನಿಯರ ನೆರವಿಗೆ ಧಾವಿಸಬೇಕಿದೆ…

Spread the love

Related post

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ…
ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು…
ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ…

ನಂಜನಗೂಡು,ಜು4,Tv10 ಕನ್ನಡ ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ…

Leave a Reply

Your email address will not be published. Required fields are marked *