ನೌಕರರಿಗೆ ಸೆಟಲ್ ಮೆಂಟ್ ಮಾಡದ ಕಾರ್ಖಾನೆ… ಪೆಟ್ರೋಲ್ ಬಾಟಲ್ ಹಿಡಿದು ಆತ್ಮಹತ್ಯೆ ಬೆದರಿಕೆ…
- CrimeMysore
- August 28, 2023
- No Comment
- 65
![](https://tv10kannada.com/wp-content/uploads/2023/08/IMG_20230828_155352-1024x581.jpg)
ನೌಕರರಿಗೆ ಸೆಟಲ್ ಮೆಂಟ್ ಮಾಡದ ಕಾರ್ಖಾನೆ… ಪೆಟ್ರೋಲ್ ಬಾಟಲ್ ಹಿಡಿದು ಆತ್ಮಹತ್ಯೆ ಬೆದರಿಕೆ…
ನಂಜನಗೂಡು,ಆ28,Tv10 ಕನ್ನಡ
22 ವರ್ಷಗಳಿಂದ ಕೆಲಸ ಮಾಡಿದ ಇಬ್ಬರು ನೌಕರರಿಗೆ ಸೆಟಲ್ ಮೆಂಟ್ ಮಾಡಲು ವಿಳಂಬ ಧೋರಣೆ ತೋರಿದ ಕಾರ್ಖಾನೆ ವಿರುದ್ದ ಆಕ್ರೋಷ ವ್ಯಕ್ತವಾಗಿಧ. ಕಾರ್ಖಾನೆ ಮುಂದೆ ಪೆಟ್ರೋಲ್ ತುಂಬಿರುವ ಬಾಟಲ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ.
ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ನ್ಯೂ ಹಾರಿಜನ್ ಕಾರ್ಖಾನೆ ಮುಂಭಾಗ ಪ್ರತಿಭಟನೆಗೆ ಇಳಿದಿದ್ದಾರೆ.ಸೆಟಲ್ ಮೆಂಟ್ ಮಾಡದಿದ್ದಲ್ಲಿ ಆತ್ಮಹತ್ಯೆಯೇ ದಾರಿ ಎಂದು ನೋವನ್ನ ವ್ಯಕ್ತಪಡಿಸಿದ್ದಾರೆ.
ನಮ್ಮ ಸಾವಿಗೆ ಕಾರ್ಖಾನೆಯ ಮಾಲೀಕರೇ ಹೊಣೆಗಾರರು ಎಂದು ಆರೋಪಿಸಿದ್ದಾರೆ. ದಿನಗೂಲಿ ನೌಕರರಾಗಿ ದುಡಿಯುತ್ತಿರುವ ಸುರೇಶ್ ಮತ್ತು ನಾಗಣ್ಣ ಪೆಟ್ರೋಲ್ ಬಾಟಲಿ ಹಿಡಿದು ಆತ್ಮಹತ್ಯೆಗೆ ನಿರ್ಧರಿಸಿರುವ ಕಾರ್ಮಿಕರು. ಶಾಸಕ ದರ್ಶನ್ ಧ್ರುವನಾರಾಯಣ್ ರವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.ಕಳೆದ 22 ವರ್ಷಗಳಿಂದ ದಿನಗೂಲಿ ನೌಕರರಾಗಿ ದುಡಿದಿರುವ ಇಬ್ಬರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿ ಇಲ್ಲದಿದ್ದಲ್ಲಿ ಸೆಟಲ್ ಮೆಂಟ್ ಮಾಡಿಕೊಳ್ಳುವಂತೆ ಆಡಳಿತಮಂಡಳಿ ಸೂಚಿಸಿದೆ. ಆಡಳಿತ ಮಂಡಳಿಯ ಸೂಚನೆಯಂತೆ ಸೆಟಲ್ ಮೆಂಟ್ ಮಾಡದೆ ಸತಾಯಿಸುತ್ತಿರುವ ಹಿನ್ನಲೆ ಬೇಸತ್ತ ನೌಕರರಿಬ್ಬರು ಪೆಟ್ರೋಲ್ ಬಾಟಲ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ…