ಬಸ್ ಕಂಡಕ್ಟರ್ ಹಾಗೂ ಯುವತಿಯರಿಗೆ ಧಂಕಿ…ಇಬ್ಬರು ಕಿಡಿಗೇಡಿಗಳು ಅಂದರ್…
- Crime
- August 29, 2023
- No Comment
- 84
ನಂಜನಗೂಡು,ಆ29,Tv10 ಕನ್ನಡ
ಚಲಿಸುತ್ತಿದ್ದ ಕೆ.ಎಸ್ ಆರ್.ಟಿ.ಸಿ.ಬಸ್ ಅಡ್ಡಗಟ್ಟಿ ನಿಲ್ಲಿಸಿ ಪ್ರಯಾಣಿಸುತ್ತಿದ್ದ ಓರ್ವ ಯುವಕನ ಮೇಲೆ ಹಲ್ಲೆ ಮಾಡುತ್ತಿದ್ದ ವರ್ತನೆಯನ್ನ ಪ್ರಶ್ನಿಸಿದ ಕಂಡಕ್ಟರ್ ಜೊತೆ ಹಾಗೂ ಕೆಲವು ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ ಇಬ್ಬರು ಕಿಡಿಗೇಡಿಗಳ ಹೆಡೆಮುರಿ ಕಟ್ಟುವಲ್ಲಿ ಹುಲ್ಲಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ನಂಜನಗೂಡು ತಾಲೂಕು ಕುರಿಹುಂಡಿ ಗ್ರಾಮದ ಶ್ರೀನಿವಾಸ್ ನಾಯಕ್ ಹಾಗೂ ಕೀರ್ತಿ ಬಂಧಿತ ಕಿಡಿಗೇಡಿಗಳು.ಕೆ.ಎಸ್.ಆರ್.ಟಿ.ಸಿ.ಬಸ್ ನಿರ್ವಾಹಕ ಪ್ರದೀಪ್ ನಾಯಕ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಹುಲ್ಲಹಳ್ಳಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.ಜುಲೈ 13 ರಂದು ಹುಲ್ಲಹಳ್ಳಿಯಿಂದ ಆಕಳ ಗ್ರಾಮಕ್ಕೆ ಕೆ.ಎಸ್.ಆರ್.ಟಿ.ಸಿ.ಬಸ್ ಪ್ರಯಾಣಿಕರನ್ನ ಕರೆದೊಯ್ಯುತ್ತಿದ್ದ ವೇಳೆ ಬೈಕ್ ನಿಂದ ಬಂದ ಮೂವರು ಬಸ್ ನ್ನ ಅಡ್ಡಗಟ್ಟಿ .ಓರ್ವ ಯುವಕ ಒಳಗೆ ಪ್ರವೇಶಿಸಿ ಏಕಾಏಕಿ ಭದ್ರ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾನೆ.ಇದನ್ನ ಪ್ರಶ್ನಿಸಿದ ಕಂಡಕ್ಟರ್ ಗೆ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದಾನೆ.ಕೆಲವು ಯುವತಿಯರಿಗೂ ನಿಂದಿಸಿದ್ದಾನೆ.ನಂತರ ತನ್ನ ಸ್ನೇಹಿತರ ಸಹಾಯದಿಂದ ಮತ್ತೆ ಬಸ್ ಮುಂದೆ ಸಾಗದಂತೆ ಅಡ್ಡಿಪಡಿಸಿ ಕಿರೀಕ್ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.ಒಟ್ಟು 5 ಮಂದಿ ಸೇರಿ ಕಂಡಕ್ಟರ್ ಗೆ ಧಂಕಿ ಹಾಕಿದ್ದಾರೆ.ಶ್ರೀನಿವಾಸ್,ಕೀರ್ತಿ,ಕೃಷ್ಣಮೂರ್ತಿ,ಕುಮಾರ್ ಹಾಗೂ ಪ್ರಜ್ವಲ್ ಎಂಬುವರು ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರಿಕ್ ಮಾಡಿದ್ದಾರೆ.ನಂತರ ನಿರ್ವಾಹಕ ಪ್ರದೀಪ್ ನಾಯಕ್ ತನ್ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಹುಲ್ಲಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಹುಲ್ಲಹಳ್ಳಿ ಠಾಣಾ ಪೊಲೀಸರು 5 ಮಂದಿ ಪೈಕಿ ಶ್ರೀನಿವಾಸ್ ಹಾಗೂ ಕೀರ್ತಿಯನ್ನ ಬಂಧಿಸಿದ್ದಾರೆ.ಉಳಿದ ಇಬ್ಬರು ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ.ಸಧ್ಯ ಕಂಡಕ್ಟರ್ ಹಾಗೂ ಯುವತಿಯರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದೆ…