ಗಜಪಯಣಕ್ಕೆ ವಿದ್ಯುಕ್ತ ಚಾಲನೆ…ಮೈಸೂರಿನತ್ತ ಸಾಗಿದ ಗಜಪಡೆ…

ಗಜಪಯಣಕ್ಕೆ ವಿದ್ಯುಕ್ತ ಚಾಲನೆ…ಮೈಸೂರಿನತ್ತ ಸಾಗಿದ ಗಜಪಡೆ…

ಮೈಸೂರು,ಸೆ1,Tv10 ಕನ್ನಡ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕಳೆಕಟ್ಟಲಿದೆ.ದಸರಾ ಹಿನ್ನೆಲೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಕವಾಗಿ ಗಜಪಯಣಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ. ಮಹದೇವಪ್ಪ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಗಜಪಡೆಗೆ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು.
ಬೆಳಿಗ್ಗೆ 9:45 ರಿಂದ 10:15 ರ ತುಲಾ ಲಗ್ನದಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.ನಂತರ ಆನೆಗಳಿಗೆ ಕಬ್ಬು, ಬೆಲ್ಲವನ್ನು ಆನೆಗಳಿಗೆ ನೀಡಲಾಯಿತು.
ಮೊದಲ ಹಂತದಲ್ಲಿ ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ಧನಂಜಯ, ಗೋಪಿ, ವಿಜಯ, ಪಾರ್ಥ ಸಾರಥಿ ಹಾಗೂ ವರಲಕ್ಷ್ಮಿ ಸೇರಿ ಒಟ್ಟು 9 ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಿತು.
ಸ್ಥಳೀಯ ಶಾಸಕ ಹರೀಶ್ ಗೌಡ, ಎಂಎಲ್ ಸಿ ಮಂಜೇಗೌಡ ಅರಣ್ಯ ಇಲಾಖೆಯ ಅಧಿಕಾರಿ ವರ್ಗದ ಮತ್ತು ಜಿಲ್ಲಾಧಿಕಾರಿ ರಾಜೇಂದ್ರ ಅವವರುಗಳು ಇಂದಿನ ಕಾರ್ಯಕ್ರಮಲ್ಲಿ ಭಾಗವಹಿಸಿದ್ದರು…

Spread the love

Related post

ಮೈಸೂರು ಅಭಿವೃದ್ದಿ ಪ್ರಾಧಿಕಾರ ಅಧೀಕ್ಷಕ ಅಭಿಯಂತರ ಮುರಳೀಧರ್ ಎತ್ತಂಗಡಿ…ಮಾತೃಇಲಾಖೆಗೆ ವರ್ಗಾವಣೆ ಆದೇಶ…

ಮೈಸೂರು ಅಭಿವೃದ್ದಿ ಪ್ರಾಧಿಕಾರ ಅಧೀಕ್ಷಕ ಅಭಿಯಂತರ ಮುರಳೀಧರ್ ಎತ್ತಂಗಡಿ…ಮಾತೃಇಲಾಖೆಗೆ ವರ್ಗಾವಣೆ ಆದೇಶ…

ಮೈಸೂರು ಅಭಿವೃದ್ದಿ ಪ್ರಾಧಿಕಾರ ಅಧೀಕ್ಷಕ ಅಭಿಯಂತರ ಮುರಳೀಧರ್ ಎತ್ತಂಗಡಿ…ಮಾತೃಇಲಾಖೆಗೆ ವರ್ಗಾವಣೆ ಆದೇಶ… ಮೈಸೂರು,ನ27,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಅಧೀಕ್ಷಕರಾಗಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಮುರಳಿಧರ್ ಎಂ.ರವರನ್ನ ಅವರ…
ಭಾರತದ ಸಂವಿಧಾನ ಪ್ರಪಂಚದಲ್ಲಿ ಬಲಿಷ್ಠ ಸಂವಿಧಾನ- ಸಿ.ಆರ್ ದಿನೇಶ್

ಭಾರತದ ಸಂವಿಧಾನ ಪ್ರಪಂಚದಲ್ಲಿ ಬಲಿಷ್ಠ ಸಂವಿಧಾನ- ಸಿ.ಆರ್ ದಿನೇಶ್

ಭಾರತದ ಸಂವಿಧಾನ ಪ್ರಪಂಚದಲ್ಲಿ ಬಲಿಷ್ಠ ಸಂವಿಧಾನ- ಸಿ.ಆರ್ ದಿನೇಶ್ ಭಾರತದ ಸಂವಿಧಾನವು ಪ್ರಪಂಚದಲ್ಲಿಯೇ ಬಲಿಷ್ಠ ಸಂವಿದಾನವಾಗಿದೆ. ಭಾರತದ ಶಕ್ತಿ ಅದರ ಸಂವಿಧಾನ. ಸಂವಿಧಾನವೇ ದೇಶದ ಆತ್ಮ ಮತ್ತು ಪ್ರಜಾಪ್ರಭುತ್ವದ…
ಮೈಸೂರಿನಲ್ಲಿ ಬಿತ್ತು ಮತ್ತೊಂದು ಹೆಣ…ಸ್ನೇಹಿತನಿಂದಲೇ ಹತ್ಯೆ…

ಮೈಸೂರಿನಲ್ಲಿ ಬಿತ್ತು ಮತ್ತೊಂದು ಹೆಣ…ಸ್ನೇಹಿತನಿಂದಲೇ ಹತ್ಯೆ…

ಮೈಸೂರಿನಲ್ಲಿ ಬಿತ್ತು ಮತ್ತೊಂದು ಹೆಣ…ಸ್ನೇಹಿತನಿಂದಲೇ ಹತ್ಯೆ… ಮೈಸೂರು,ನ26,Tv10 ಕನ್ನಡ ಮೈಸೂರಿನಲ್ಲಿ ಮತ್ತೊಂದು ಹೆಣ ಉರುಳಿಬಿದ್ದಿದೆ.ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ.ಮೈಸೂರಿನ ಶಾಂತಿನಗರದ ಚೌಕಂಡಿಯಲ್ಲಿ ಘಟನೆ ನಡೆದಿದೆ.ಸೈಯದ್…

Leave a Reply

Your email address will not be published. Required fields are marked *