
ಲೋಕಾಯುಕ್ತ ಬಲೆಗೆ ಆಹಾರ ಸುರಕ್ಷತಾ ಅಧಿಕಾರಿ…ಎರಡನೇ ಬಾರಿ ಸಿಕ್ಕಿಬಿದ್ದ ಲಂಚಬಾಕ…
- Crime
- September 15, 2023
- No Comment
- 415
ಮೈಸೂರು,ಸೆ15,Tv10 ಕನ್ನಡ
ಅಂಗಡಿ ಲೈಸೆನ್ಸ್ ನವೀಕರಿಸಲು 7 ಸಾವಿರ ಲಂಚ ಪಡೆದ ಆಹಾರ ಸುರಕ್ಷತಾ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಮೈಸೂರಿನ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಲೋಕೇಶ್ ಲೋಕಾಯುಕ್ತ ಬಲೆ ಬಿದ್ದ ಅಧಿಕಾರಿ.ಗೂಗಲ್ ಪೇ ಮಾಡಿಸಿಕೊಂಡು ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ. ನಂಜನಗೂಡಿನ ರಘು ಎಂಬುವವರ ಅಂಗಡಿ ರಿನ್ಯೂವಲ್ ಮಾಡಿಕೊಡಲು 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 7 ಸಾವಿರ ಗೂಗಲ್ ಪೇ ಮಾಡಿಸಿಕೊಂಡ ಲೋಕೇಶ್ ರನ್ನ ಲೋಕಾಯುಕ್ತ ಅಧಿಕಾರಿಗಳಿಂದ ಲಾಕ್ ಮಾಡಿದ್ದಾರೆ.
ಲೋಕಾಯುಕ್ತ SP ಸುರೇಶ್ ಬಾಬು ಹಾಗೂ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದಲ್ಲಿ ದಾಳಿ ನಡೆದಿದೆ. ಇನ್ಸ್ಪೆಕ್ಟರ್ಗಳಾದ ಲೋಕೇಶ್, ರವಿಕುಮಾರ್, ಜಯರತ್ನ, ರೂಪಶ್ರೀ. ಸಿಬ್ಬಂದಿಗಳಾದ ಲೋಕೇಶ್, ಗೋಪಿ, ವೀರಭದ್ರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.ಕಚೇರಿಯಲ್ಲೇ ಲಂಚ ಪಡೆಯುವಾಗ ದಾಳಿ ನಡೆಸಲಾಗಿದೆ. 2015ರಲ್ಲು ಲೋಕೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದೀಗಾ ಎರಡನೇ ಬಾರಿ ಮತ್ತೇ ಲಂಚ ಪಡೆದು ಸಿಕ್ಕಿಬಿದ್ದಿದ್ದಾರೆ…