
ಮತ್ತೆ ಮಹಿಳಾ ಪಿಎಸ್ ಐ ಪುತ್ರನ ಪುಂಡಾಟ…ವ್ಹೀಲಿಂಗ್ ಮಾಡುವ ವೇಳೆ ಅಪಘಾತ…ವೃದ್ದ ಸಾವು…
- Crime
- September 16, 2023
- No Comment
- 551

ನಂಜನಗೂಡು,ಸೆ16,Tv10 ಕನ್ನಡ

ಮಹಿಳಾ ಪಿಎಸ್ಐ ಪುತ್ರನ ಪುಂಡಾಟ ಮತ್ತೆ ಶುರುವಾಗಿದೆ.ಈ ಬಾರಿ ವ್ಹೀಲಿಂಗ್ ಮಾಡುವ ವೇಳೆ ಅಮಾಯಕ ಬಲಿ ಪಡೆದಿದ್ದಾನೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ ಘಟನೆ ನಡೆದಿದೆ.
ಗುರುಸ್ವಾಮಿ(68) ಮೃತ ವೃದ್ದ.
ಹಸುಗಳನ್ನು ಮೇಯಿಸಿ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.ಸೈಯದ್ ಐಮಾನ್
ವೀಲಿಂಗ್ ಮಾಡಿಕೊಂಡು ಬಂದು ಡಿಕ್ಕಿಹೊಡೆದಿದ್ದಾನೆ.
ಸೈಯದ್ ಐಮಾನ್
ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಪುತ್ರ.ಕಳೆದ ಕೆಲ ದಿನಗಳ ಹಿಂದೆ ವೀಲಿಂಗ್ ವಿಚಾರಕ್ಕೆ ವಶಕ್ಕೆ ಪಡೆದು ದಂಡ ಹಾಕಲಾಗಿತ್ತು.ಇದಷ್ಟೆ ಅಲ್ಲದೆ ಈತನ ವಿರುದ್ಧ ಕಳ್ಳತನ ಆರೋಪ ಕೂಡ ಇತ್ತು.ಸದ್ಯ ಆರೋಪಿ ಸೈಯದ್ ಐಮಾನ್ ಗ್ ಸಣ್ಣಪುಟ್ಟ ಗಾಯವಾಗಿದೆ.
ಅಪಘಾತಕೊಳಗಾದ ಕುಟುಂಬಸ್ಥರಿಂದಲೆ ರಕ್ಷಣೆ ಮಾಡಿ ಚಿಕಿತ್ಸೆಗೆ ಕರೆತಂದಿದ್ದಾರೆ.
ನಮಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ…