
ಎಚ್ಚೆತ್ತ ಜಿಲ್ಲಾಡಳಿತ…ಜಲಕ್ರೀಡೆ ಸ್ಥಗಿತ…
- TV10 Kannada Exclusive
- September 16, 2023
- No Comment
- 332


ಮಂಡ್ಯ,ಸೆ16,Tv10 ಕನ್ನಡ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಬೋರೇದೇವರ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ನಡೆಯುತ್ತಿದ್ದ ಜಲಕ್ರೀಡೆಗೆ ಬ್ರೇಕ್ ಹಾಕಲಾಗಿದೆ.ಅನಾಹುತ ಸಂಭವಿಸುವ ಮುನ್ನ ಮಂಡ್ಯ ಜಿಲ್ಲಾಡಳಿತ ಎಚ್ಚೆತ್ತು ಜಲಕ್ರೀಡೆ ನಡೆಸುತ್ತಿದ್ದ ಆಯೋಜಕರಿಗೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿ ಸ್ಥಗಿತಗೊಳಿಸಿದ್ದಾರೆ.ಖಾಸಗಿ ಸಂಸ್ಥೆಯೊಂದ ರಾಜ್ಯದ ವಿವಿದೆಡೆಗಳಿಂದ ವಿಧ್ಯಾರ್ಥಿಗಳನ್ನ ಕರೆತಂದು ಕಾವೇರಿ ನದಿಯಲ್ಲಿ ಜಲಕ್ರೀಡೆ ಏರ್ಪಡಿಸಿತ್ತು.ಸಂಭಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಜಲಕ್ರೀಡೆ ನಡೆಸುತ್ತಿದ್ದ ಸಂಸ್ಥೆಯ ವಿರುದ್ದ ಸ್ಥಳೀಯರು ದೂರು ನೀಡಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರು.ಹೀಗಿದ್ದೂ ಜಲಕ್ರೀಡೆ ಮುಂದುವರೆದಿತ್ತು.ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ ಮಾಧ್ಯಮಗಳು ಕ್ಲಾಸ್ ತೆಗೆದುಕೊಂಡಿದ್ದವು.ಇದೀಗ ಎಚ್ಚೆತ್ತ ಅಧಿಕಾರಿಗಳು ಜಲಕ್ರೀಡೆಗೆ ಬ್ರೇಕ್ ಹಾಕಿದ್ದಾರೆ…