
ರೈತನ ಮೇಲೆ ಹುಲಿದಾಳಿ…ಸ್ಥಳೀಯರ ಕೂಗಾಟದಿಂದ ಬಚಾವ್…
- Crime
- September 21, 2023
- No Comment
- 861
ಪಿರಿಯಾಪಟ್ಟಣ,ಸೆ21,Tv10 ಕನ್ನಡ
ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಮುದ್ದೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಚನ್ನೇಗೌಡರ ಮಗ ರಮೇಶ್ ಎಂಬುವರ ಮೇಲೆ ಹುಲಿ ದಾಳಿ ಮಾಡಿದೆ. ರಮೇಶ್ ಅವರ ಕೂಗಾಟ ಚೀರಾಟ ಕೇಳಿ ಅಕ್ಕ ಪಕ್ಕದ ಹೊಲದಲ್ಲಿದ್ದ ಜನ ಧಾವಿಸಿದ್ದಾರೆ. ಜನರನ್ನ ಕಂಡ ಹುಲಿ ಪರಾರಿಯಾಗಿದೆ.ರಮೇಶ್ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.ಹುಲಿ ದಾಳಿಯಿಂದ ಗಾಯಗೊಂಡಿದ್ದ ರಮೇಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನ ಒತ್ತಾಯಿಸಿದ್ದಾರೆ…