ಕೇರಳಾಕ್ಕೆ ಸಾಗಿಸಲಾಗುತ್ತಿದ್ದ 100 ಕ್ಕೂ ಹೆಚ್ಚು ರಾಸುಗಳ ರಕ್ಷಣೆ…ಅಂತರಸಂತೆ ಪೊಲೀಸರ ಕಾರ್ಯಾಚರಣೆ…

ಕೇರಳಾಕ್ಕೆ ಸಾಗಿಸಲಾಗುತ್ತಿದ್ದ 100 ಕ್ಕೂ ಹೆಚ್ಚು ರಾಸುಗಳ ರಕ್ಷಣೆ…ಅಂತರಸಂತೆ ಪೊಲೀಸರ ಕಾರ್ಯಾಚರಣೆ…

  • Crime
  • September 27, 2023
  • No Comment
  • 379

ಹೆಚ್.ಡಿ.ಕೋಟೆ,ಸೆ27,Tv10 ಕನ್ನಡ

ಕೇರಳಾ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 100 ಕ್ಕೂ ಹೆಚ್ಚು ರಾಸುಗಳನ್ನ ರಕ್ಷಣೆ

ಮಾಡಲಾಗಿದೆ.ಹೆಚ್.ಡಿ.ಕೋಟೆ ತಾಲೂಕು ಅಂತರಸಂತೆಯಲ್ಲಿ ಘಟನೆ ನಡೆದಿದೆ.ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅಂತರಸಂತೆ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.ಸ್ಥಳೀಯರು ನೀಡಿದ ಮಾಹಿತಿಯನ್ನ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ.2 ಕಂಟೈನರ್ ಹಾಗೂ 5 ಬೊಲೆರೋ ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ.ಬ್ಯಾರಿಕೇಡ್ ಗಳನ್ನ ಅಳವಡಿಸಿ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳು ಪರಾರಿ ಆಗಲು ಯತ್ನಿಸಿದ್ದಾರೆ.ಬದಯಾರಿಕೇಡ್ ಗಳ ಮೇಲೇ ವಾಹನ ಚಲಾಯಿಸಿ ಎಸ್ಕೇಪ್ ಆಗಲು ಯತ್ನಿಸಿದಾಗ ಪೊಲೀಸರು ಸಿನಮೀಯ ರೀತಿಯಲ್ಲಿ ಚೇಸ್ ಮಾಡಿ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈದ್ ಮಿಲಾದ್ ಹಬ್ಬ ಹಿನ್ನಲೆ ರಾಸುಗಳನ್ನ ಕೇರಳಾಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.ಹಸು,ಎಮ್ಮ,ಕರುಗಳು ಸೇರಿದಂತೆ ನೂರಾರು ರಸುಗಳನ್ನ ರಕ್ಷಿಸಲಾಗಿದೆ.ಕೆಲವು ಹಸು ಹಾಗೂ ಎಮ್ಮೆಗಳು ನಿತ್ರಾಣಗೊಂಡ ಪರಿಸ್ಥಿತಿಯಲ್ಲಿ ಕಂಡು ಬಂದಿವೆ.ರಕ್ಷಿಸಲಾದ ರಾಸುಗಳನ್ನ ಮೈಸೂರಿನ ಪಿಂಜರಾಪೋಲ್ ಸಂಸ್ಥೆಗೆ ರವಾನಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.ಅಂತರಸಂತೆ ಠಾಣೆ ಪೊಲೀಸರು ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ…

Spread the love

Related post

ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ…ತಿಂಗಳುಗಳ ನಂತರ ಪ್ರತ್ಯಕ್ಷ…ಪ್ರವಾಸಿಗರು ಖುಷ್…

ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ…ತಿಂಗಳುಗಳ ನಂತರ ಪ್ರತ್ಯಕ್ಷ…ಪ್ರವಾಸಿಗರು ಖುಷ್…

ಮೈಸೂರು,ಏ29,Tv10 ಕನ್ನಡ ಹಲವು ತಿಂಗಳ ನಂತರ ಪ್ರವಾಸಿಗರ ಕಣ್ಣಿಗೆ ಕಪ್ಪು ಚಿರತೆ ಕಂಡುಬಂದಿದೆ.ನಾಗರಹೊಳೆ ಸಫಾರಿಗೆ ತೆರಳಿದ ಪ್ರವಾಸಿಗರ ಕಣ್ಣಿಗೆ ಬ್ಲಾಕ್ ಬ್ಯೂಟಿ ದರುಶನ ನೀಡಿದೆ.ಸುಮಾರು 8 ತಿಂಗಳ ಹಿಂದೆ…
ಪಕ್ಷಿಗಳಿಗೆ ನೀರಿನ ವ್ಯವಸ್ಥೆ…ಕೆಎಂಪಿಕೆ ಟ್ರಸ್ಟ್ ನ ಸಾಮಾಜಿಕ ಕಳಕಳಿ…

ಪಕ್ಷಿಗಳಿಗೆ ನೀರಿನ ವ್ಯವಸ್ಥೆ…ಕೆಎಂಪಿಕೆ ಟ್ರಸ್ಟ್ ನ ಸಾಮಾಜಿಕ ಕಳಕಳಿ…

ಮೈಸೂರು,ಏ27,Tv10 ಕನ್ನಡ ಸುಡು ಬಿಸಿಲು ನಾಗರೀಕರನ್ನ ಹೈರಾಣು ಮಾಡಿದೆ.ಬಿಸಿಲಿನ ತಾಪಕ್ಕೆ ಜನತೆ ಪರದಾಡುತ್ತಿದ್ದಾರೆ.ಪ್ರಾಣಿ ಪಕ್ಷಿಗಳಂತೂ ತತ್ತರಿಸುತ್ತಿವೆ.ಇಂತಹ ಸಂಧರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ಪಕ್ಷಿಗಳ ನೆರವಿಗೆ ಧಾವಿಸಿದೆ.ನಗರದ ವಿವಿದೆಡೆ ಪಕ್ಷಿಗಳಿಗಾಗಿ ನೀರಿನ…
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ…ಶೇ70.14 ರಷ್ಟು ಮತದಾನ…

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ…ಶೇ70.14 ರಷ್ಟು ಮತದಾನ…

ಮೈಸೂರು,ಏ26,Tv10 ಕನ್ನಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿಶೇ.70.14ರಷ್ಟು ಮತದಾನ ನಡೆದಿದೆ.ಸಂಜೆ 6 ಗಂಟೆ ವೇಳೆಗೆ ಮತದಾನ ನಡೆದಿದೆ. ವಿಧಾನಸಭಾ ಕ್ಷೇತ್ರವಾರು ವಿವರ ನರಸಿಂಹರಾಜ ಶೇ.65.40ಕೃಷ್ಣರಾಜ ಶೇ.61.00ಚಾಮರಾಜ ಶೇ.60.67ಚಾಮುಂಡೇಶ್ವರಿ ಶೇ.73.00ಹುಣಸೂರು ಶೇ.76.90ಪಿರಿಯಾಪಟ್ಟಣ…

Leave a Reply

Your email address will not be published. Required fields are marked *