ರೌಡಿ ಶೀಟರ್ ಭೀಕರ ಕೊಲೆ…ಹಳೆ ವೈಷಮ್ಯ ಹಿನ್ನಲೆ ಕೃತ್ಯ ಶಂಕೆ…ಆರೋಪಿಗಳು ಪರಾರಿ…

ರೌಡಿ ಶೀಟರ್ ಭೀಕರ ಕೊಲೆ…ಹಳೆ ವೈಷಮ್ಯ ಹಿನ್ನಲೆ ಕೃತ್ಯ ಶಂಕೆ…ಆರೋಪಿಗಳು ಪರಾರಿ…

  • Crime
  • October 2, 2023
  • No Comment
  • 359

ಮಂಡ್ಯ,ಅ2,Tv10 ಕನ್ನಡ

ಸ್ಕೂಟರ್ ನಲ್ಲಿ ತೆರಳುತ್ತಿದ್ದ ರೌಡಿ ಶೀಟರ್ ಓರ್ವನನ್ನ ನಾಲ್ವರು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ನಡೆದಿದೆ. ವಿನೋದ್ ಅಲಿಯಾಸ್ ಕುಂಟ ವಿನು (೩೨) ಕೊಲೆಯಾದ ರೌಡಿ ಶೀಟರ್.ಸ್ಕೂಟರ್ ನಲ್ಲಿ ತಮ್ಮ ಜಮೀನಿಗೆ ತೆರಳುತ್ರಿದ್ದ ವೇಳೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ.
ಮಾರುತಿ ಓಮಿನಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವಿನೋದನಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳುವಂತೆ ಮಾಡಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಾರುತಿ ಓಮಿನಿ ಹಳ್ಳಕ್ಕೆ ನುಗ್ಗಿದೆ.ವಾಹನವನ್ನು ಮೇಲೆತ್ತಲು ಸಾಧ್ಯವಾಗದೆ ಆರೋಪಿಗಳು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಹಿಂದೆ ವಿನೋದ್ ಗಲಾಟೆಯೊಂದರಲ್ಲಿ ಭಾಗಿಯಾಗಿದ್ದು, ಇದರ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆಸಿರುವುದಾಗಿ ಸಂಶಯವ್ಯಕ್ತವಾಗಿದೆ. ಈ ಸಂಭಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಸ್ಪಾ ಮೇಲೆ ನಜರಬಾದ್ ಪೊಲೀಸರ ದಾಳಿ…ಇಬ್ಬರು ಯುವತಿಯರು ಸೇರಿ ನಾಲ್ವರ ಬಂಧನ…

ಸ್ಪಾ ಮೇಲೆ ನಜರಬಾದ್ ಪೊಲೀಸರ ದಾಳಿ…ಇಬ್ಬರು ಯುವತಿಯರು ಸೇರಿ ನಾಲ್ವರ ಬಂಧನ…

ಮೈಸೂರು,ನ2,Tv10 ಕನ್ನಡ ಸ್ಪಾ ಮೇಲೆ ನಜರಬಾದ್ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನ ಬಂಧಿಸಿದ್ದಾರೆ.ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗವಿರುವ ಕಾಂಪ್ಲೆಕ್ಸ್ ಒಂದರಲ್ಲಿ ನಡೆಯುತ್ತಿದ್ದ…
ಭ್ರೂಣಹತ್ಯೆ ಪ್ರಕರಣ…ಭಯಾನಕ ಸತ್ಯ ಬಿಚಿಟ್ಟ ಮಾತಾ ಆಸ್ಪತ್ರೆ ಹೆಡ್ ನರ್ಸ್…

ಭ್ರೂಣಹತ್ಯೆ ಪ್ರಕರಣ…ಭಯಾನಕ ಸತ್ಯ ಬಿಚಿಟ್ಟ ಮಾತಾ ಆಸ್ಪತ್ರೆ ಹೆಡ್ ನರ್ಸ್…

ಬೆಂಗಳೂರು,ಡಿ2,Tv10 ಕನ್ನಡ ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡುತ್ತಿದ್ದೆ,ಒಂದು ಮಾಸದಲ್ಲಿ ಕನಿಷ್ಠ 2 ಪ್ರಕರಣದಲ್ಲಿ 6 ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ ಎಂದು ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಮಂಜುಳಾ…
ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದೆ: ನಾಗಣ್ಣಗೌಡ

ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದೆ: ನಾಗಣ್ಣಗೌಡ

ಮಂಡ್ಯ,ಡಿ, 01:-ಹೆಣ್ಣು ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದ್ದು, ಈ ರೀತಿಯ ಕೃತ್ಯಗಳಿಗೆ ಅವಕಾಶ ನೀಡಬಾರದು. ಕಾನೂನಿನ ಮೂಲಕ ಅಗತ್ಯ ಕ್ರಮ ತೆಗೆದುಕೊಂಡು ಈ ರೀತಿಯ ಕೃತ್ಯಗಳನ್ನು ತಡೆಯುತ್ತೇವೆ …

Leave a Reply

Your email address will not be published. Required fields are marked *