ಮೈಸೂರು:ಸರಣಿ ಅಪಘಾತ…ಎರಡು ಬಸ್ ಹಾಗೂ ಕಾರು ನಜ್ಜುಗುಜ್ಜು…15 ಕ್ಕೂ ಹೆಚ್ಚು ಮಂದಿಗೆ ಗಾಯ…ಉರುಳಿ ಬಿದ್ದ ದಸರಾ ಲೈಟಿಂಗ್ ಕಮಾನು…

ಮೈಸೂರು:ಸರಣಿ ಅಪಘಾತ…ಎರಡು ಬಸ್ ಹಾಗೂ ಕಾರು ನಜ್ಜುಗುಜ್ಜು…15 ಕ್ಕೂ ಹೆಚ್ಚು ಮಂದಿಗೆ ಗಾಯ…ಉರುಳಿ ಬಿದ್ದ ದಸರಾ ಲೈಟಿಂಗ್ ಕಮಾನು…

ಮೈಸೂರು:ಸರಣಿ ಅಪಘಾತ…ಎರಡು ಬಸ್ ಹಾಗೂ ಕಾರು ನಜ್ಜುಗುಜ್ಜು…15 ಕ್ಕೂ ಹೆಚ್ಚು ಮಂದಿಗೆ ಗಾಯ…ಉರುಳಿ ಬಿದ್ದ ದಸರಾ ಲೈಟಿಂಗ್ ಕಮಾನು…

ಮೈಸೂರು,ಅ13,Tv10 ಕನ್ನಡ

ಎರಡು ಬಸ್ ಹಾಗೂ ಒಂದು ಕಾರ್ ನಡುವೆ ನಡೆದ ಅಪಘಾತದಲ್ಲಿ 15 ಕ್ಕೂ ಹೆಚ್ಚುಮಂದಿ ಗಾಯಗೊಂಡ ಘಟನೆ ಮೈಸೂರಿನ ಮಣಿಪಾಲ್ ಆಸ್ಪತ್ರೆ ಬಳಿ ನಡೆದಿದೆ.ಢಿಕ್ಕಿ ಹೊಡೆದ ರಭಸಕ್ಕೆ ನಿಯಂತ್ರಣ ಕಳೆದುಕೊಂಡ ಬಸ್ ದಸರಾ ಲೈಟಿಂಗ್ ಹಾಕಲು ಅಳವಡಿಸಲಾಗಿದ್ದ ಕಮಾನಿಗೆ ಢಿಕ್ಕಿ ಹೊಡೆದಿದೆ.ಕಬ್ಬಿಣದ ಕಮಾನು ಬಸ್ ಮೇಲೆ ಉರುಳಿ ಬಿದ್ದಿದೆ.

ಇಂದು ಬೆಳಿಗ್ಗೆ ಸುಮಾರು 7.30 ರ ಸಮಯದಲ್ಲಿ ಘಟನೆ ನಡೆದಿದೆ.ಮೈಸೂರಿನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಸೇಲಂ ನಿಂದ ಮೈಸೂರಿನತ್ತ ಬರುತ್ತಿದ್ದ ತಮಿಳುನಾಡಿನ ಬಸ್ ಗೆ ಢಿಕ್ಕಿ ಹೊಡೆದಿದೆ.ಈ ಮಧ್ಯೆ ಸಾಗುತ್ತಿದ್ದ ಇನೋವಾ ಕಾರ್ ಸಿಲುಕಿದೆ.ಢಿಕ್ಕಿ ಹೊಡೆದ ರಭಸಕ್ಕೆ ಮೂರು ವಾಹನಗಳೂ ನಜ್ಜುಗುಜ್ಜಾಗಿದೆ.ಮೂರು ವಾಹನಗಳ ಪೈಕಿ ಸುಮಾರು 15 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.ಅಪಘಾತದ ಪರಿಣಾಮ ಕೆಲ ಸಮಯ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.ಎನ್.ಆರ್.ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆ.ಎಸ್.ಆರ್.ಟಿ.ಸಿ.ಬಸ್ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ…

Spread the love

Related post

ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ…ತಿಂಗಳುಗಳ ನಂತರ ಪ್ರತ್ಯಕ್ಷ…ಪ್ರವಾಸಿಗರು ಖುಷ್…

ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ…ತಿಂಗಳುಗಳ ನಂತರ ಪ್ರತ್ಯಕ್ಷ…ಪ್ರವಾಸಿಗರು ಖುಷ್…

ಮೈಸೂರು,ಏ29,Tv10 ಕನ್ನಡ ಹಲವು ತಿಂಗಳ ನಂತರ ಪ್ರವಾಸಿಗರ ಕಣ್ಣಿಗೆ ಕಪ್ಪು ಚಿರತೆ ಕಂಡುಬಂದಿದೆ.ನಾಗರಹೊಳೆ ಸಫಾರಿಗೆ ತೆರಳಿದ ಪ್ರವಾಸಿಗರ ಕಣ್ಣಿಗೆ ಬ್ಲಾಕ್ ಬ್ಯೂಟಿ ದರುಶನ ನೀಡಿದೆ.ಸುಮಾರು 8 ತಿಂಗಳ ಹಿಂದೆ…
ಪಕ್ಷಿಗಳಿಗೆ ನೀರಿನ ವ್ಯವಸ್ಥೆ…ಕೆಎಂಪಿಕೆ ಟ್ರಸ್ಟ್ ನ ಸಾಮಾಜಿಕ ಕಳಕಳಿ…

ಪಕ್ಷಿಗಳಿಗೆ ನೀರಿನ ವ್ಯವಸ್ಥೆ…ಕೆಎಂಪಿಕೆ ಟ್ರಸ್ಟ್ ನ ಸಾಮಾಜಿಕ ಕಳಕಳಿ…

ಮೈಸೂರು,ಏ27,Tv10 ಕನ್ನಡ ಸುಡು ಬಿಸಿಲು ನಾಗರೀಕರನ್ನ ಹೈರಾಣು ಮಾಡಿದೆ.ಬಿಸಿಲಿನ ತಾಪಕ್ಕೆ ಜನತೆ ಪರದಾಡುತ್ತಿದ್ದಾರೆ.ಪ್ರಾಣಿ ಪಕ್ಷಿಗಳಂತೂ ತತ್ತರಿಸುತ್ತಿವೆ.ಇಂತಹ ಸಂಧರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ಪಕ್ಷಿಗಳ ನೆರವಿಗೆ ಧಾವಿಸಿದೆ.ನಗರದ ವಿವಿದೆಡೆ ಪಕ್ಷಿಗಳಿಗಾಗಿ ನೀರಿನ…
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ…ಶೇ70.14 ರಷ್ಟು ಮತದಾನ…

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ…ಶೇ70.14 ರಷ್ಟು ಮತದಾನ…

ಮೈಸೂರು,ಏ26,Tv10 ಕನ್ನಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿಶೇ.70.14ರಷ್ಟು ಮತದಾನ ನಡೆದಿದೆ.ಸಂಜೆ 6 ಗಂಟೆ ವೇಳೆಗೆ ಮತದಾನ ನಡೆದಿದೆ. ವಿಧಾನಸಭಾ ಕ್ಷೇತ್ರವಾರು ವಿವರ ನರಸಿಂಹರಾಜ ಶೇ.65.40ಕೃಷ್ಣರಾಜ ಶೇ.61.00ಚಾಮರಾಜ ಶೇ.60.67ಚಾಮುಂಡೇಶ್ವರಿ ಶೇ.73.00ಹುಣಸೂರು ಶೇ.76.90ಪಿರಿಯಾಪಟ್ಟಣ…

Leave a Reply

Your email address will not be published. Required fields are marked *