ಬಸವೇಶ್ವರ ವೃತ್ತದಲ್ಲಿ ತಲೆ ಎತ್ತಲಿರುವ ಮಧ್ಯದ ಅಂಗಡಿ…ಸ್ಥಳೀಯರ ಭಾರಿ ವಿರೋಧ…

ನಂಜನಗೂಡು,ಅ20,Tv10 ಕನ್ನಡ ನಂಜನಗೂಡು ಪಟ್ಟಣದ ಬಸವೇಶ್ವರ ವೃತ್ತ ಮತ್ತು ಕಸುವಿನಹಳ್ಳಿ ಗ್ರಾಮದಲ್ಲಿ ತಲೆ ಎತ್ತುತ್ತಿರುವ ಮಧ್ಯದ ಅಂಗಡಿಗೆ ಭಾರಿ ವಿರೋಧ ವ್ಯಕ್ತವಾಗಿದೆ.
ವೀರಶೈವ ಲಿಂಗಾಯತ ಸಂಘಟನೆ ಮಹಿಳೆಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸುತ್ತೂರು ದೇಶೀಕೇಂದ್ರ ಸ್ವಾಮೀಜಿ ಹಾಗೂ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಮತ್ತು ನಂಜನಗೂಡಿನ ಶಾಸಕ ದರ್ಶನ್ ದ್ರುವ ನಾರಾಯಣ್ ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ದೇವಿರಮ್ಮನಹಳ್ಳಿ ಸಮೀಪದ ವಿಶ್ವಗುರು ಶ್ರೀ ಬಸವೇಶ್ವರ ವೃತ್ತದ ಬಳಿ ಹಾಗೂ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನೂತನ ಮದ್ಯದ ಅಂಗಡಿ ಸ್ಥಾಪನೆಗೆ ಸಿದ್ದತೆ ನಡೆದಿದೆ.ಇದನ್ನ ವಿರೋಧಿಸಿ ನಂಜನಗೂಡಿನ ವೀರಶೈವ ಸಂಘಟಕರು ಸೇರಿದಂತೆ ಪ್ರಗತಿಪರರು ಸಾಕಷ್ಟು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಬಸವೇಶ್ವರ ವೃತ್ತದಲ್ಲಿ 101 ಲಿಂಗ ಸ್ಥಾಪನೆಯ ಪ್ರಸಿದ್ಧ ಮಠ ಜೆಎಸ್ಎಸ್ ಕಾಲೇಜು ಇದೆ. ಅತಿ ಹೆಚ್ಚು ಮಹಿಳೆಯರ ಜನಸಂದಣಿಯ ಪ್ರದೇಶವಾಗಿದೆ. ಕಸುವಿನಹಳ್ಳಿ ಗ್ರಾಮದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ನೂತನ ಮದ್ಯದ ಅಂಗಡಿ ಸ್ಥಾಪನೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಧ್ಯದ ಅಂಗಡಿಗೆ ಪರವಾಗಿ ನೀಡಿದ್ದಾರೆ.
ಸಾರ್ವಜನಿಕರ ವಿರೋಧ ಇದ್ದರೂ ಮಧ್ಯದ ಅಂಗಡಿ ಓಪನ್ ಗೆ ಸಜ್ಜಾಗುತ್ತಿದೆ. ಯಾವುದೇ ಕಾರಣಕ್ಕೂ ನಂಜನಗೂಡು ಪಟ್ಟಣದ ಬಸವೇಶ್ವರ ವೃತ್ತ ಮತ್ತು ಕಸುವಿನಲ್ಲಿ ಗ್ರಾಮದಲ್ಲಿ ಮಧ್ಯದ ಅಂಗಡಿ ಸ್ಥಾಪನೆ ಮಾಡಬಾರದು ಎಂದು ಸಾಕಷ್ಟು ಮಹಿಳೆಯರು ಮತ್ತು ಸಂಘಟಕರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ…

Spread the love

Related post

ರೌಡಿ ಶೀಟರ್ ಬರ್ಬರ ಹತ್ಯೆ…ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆ…ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ…

ರೌಡಿ ಶೀಟರ್ ಬರ್ಬರ ಹತ್ಯೆ…ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆ…ಸ್ಥಳಕ್ಕೆ ಹಿರಿಯ ಪೊಲೀಸ್…

ಮೈಸೂರು,ಮಾ14,Tv10 ಕನ್ನಡ ಮೈಸೂರು ತಾಲೂಕು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹನಗಳ್ಳಿಯ ತೋಟದ ಮನೆಯಲ್ಲಿ ರೌಡಿ ಶೀಟರ್ ಬರ್ಭರ ಹತ್ಯೆಯಾಗಿದೆ.ದೊರೆಸ್ವಾಮಿ.ಆ.ಸೂರ್ಯ ಮೃತ ರೌಡಿ ಶೀಟರ್.ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ.ಮಾರಕಾಸ್ತ್ರದಿಂದ…
ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಂಡು ಇಂದಿಗೆ ಒಂದು ವರ್ಷ…ಜನರ ಪ್ರೀತಿ ವಿಶ್ವಾಸಕ್ಕೆ ಫಿದಾ…

ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಂಡು ಇಂದಿಗೆ ಒಂದು ವರ್ಷ…ಜನರ ಪ್ರೀತಿ ವಿಶ್ವಾಸಕ್ಕೆ…

ಮೈಸೂರು,ಮಾ14,Tv10 ಕನ್ನಡ ಸಂಸದ ಸ್ಥಾನದ ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯಿತುಆದರೆ ಕಾರ್ಯಕರ್ತರ ಪ್ರೀತಿ, ಜನರ ಆಶೀರ್ವಾದ, ಪ್ರೋತ್ಸಾಹ ಇವತ್ತಿಗೂ ಹಾಗೇ ಇದೆ ಎಂದುಸಾಮಾಜಿಕ ಜಾಲತಾಣದಲ್ಲಿ ಮಾಜಿ‌ ಸಂಸದ…
ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭದ ಆಮಿಷ…17 ಲಕ್ಷ ವಂಚನೆ…

ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭದ ಆಮಿಷ…17 ಲಕ್ಷ ವಂಚನೆ…

ಮೈಸೂರು,ಮಾ13,Tv10 ಕನ್ನಡ ಟ್ರೇಡಿಂಗ್ ನಲ್ಲಿ ಹೆಚ್ಚಿನ ಅಭಾಂಶ ಬರುವುದಾಗಿ ನಂಬಿಸಿ ಮೈಸೂರಿನ ವ್ಯಕ್ತಿಯೊಬ್ಬರಿಗೆ 17 ಲಕ್ಷಕ್ಕೆ ಪಂಗನಾಮ ಹಾಕಿದ್ದಾರೆ.ಕುಂಬಾರಕೊಪ್ಪಲಿನ ನಿವಾಸಿ ವಿನಯ್ ಕುಮಾರ್ ಎಂಬುವರೇ ಹಣ ಕಳೆದುಕೊಂಡವರು.ಇನ್ಸ್ ಸ್ಟಾಗ್ರಾಂ…

Leave a Reply

Your email address will not be published. Required fields are marked *