ಯುವ ದಸರಾ:ಬೆನ್ನಿ ದಯಾಳ್ ಗಾನಮೋಡಿ…ಮುಗಿಲು ಮುಟ್ಟಿದ ಸಂಭ್ರಮ…

ಯುವ ದಸರಾ:ಬೆನ್ನಿ ದಯಾಳ್ ಗಾನಮೋಡಿ…ಮುಗಿಲು ಮುಟ್ಟಿದ ಸಂಭ್ರಮ…

ಮೈಸೂರು,ಅ21,Tv10 ಕನ್ನಡ

ಯುವ ಸಮೂಹಗಳ ಆಕರ್ಷಣೆಯಾದ ಯುವ ದಸರಾದ ಕೊನೆಯ ದಿನದಂದು ಮಹಾರಾಜ ಕಾಲೇಜಿನ ಮೈದಾನದಲ್ಲಿ ಗಾಯಕ ಬೆನ್ನಿ ದಯಾಳ್ ಅವರ ಸುಮಧುರ ಗಾನಕ್ಕೆ ಹಾಗೂ ನೃತ್ಯಕ್ಕೆ ಯುವ ಸಮೂಹ ಮೈ ಮನ ಮರೆತು ಕುಣಿದು ಕುಪ್ಪಳಿಸಿತು.

ರಣ್ ವೀರ್ ಕಪೂರ್ ಅಭಿನಯದ ಯೆ ಜವಾನಿ ಹೇ ದಿವಾನಿ ಚಿತ್ರದ ಬತ್ತ ಮೇಜಿ ದಿಲ್, ಬೆಫೀಕ್ರಿ ಚಿತ್ರದ ನಶೆ ಶೆ ಚಡ್ ಗಯಾ ಸೆ, ಶಾರುಖ್ ಖಾನ್ ಅಭಿನಯದ ದಿಲ್ ಚಿತ್ರದ ಚಯಾ ಚಯಾ ಚಯಾ, ಜಾನೆ ತೊ ಜಾನೆನ ಚಿತ್ರದ ಪಪ್ಪು ಕಾಂಟ್ ಡ್ಯಾನ್ಸ್ ಹಾಡುತ್ತಿದ್ದಂತೆ ರೋಮಾಂಚನಗೊಂಡ ಯುವ ಸಮೂಹ. ಕುಣಿದು ಸಂಭ್ರಮಿಸಿತು.

ಸಿದ್ಧಾಥ್೯ ಮೆಲೋತ್ರ ಹಾಗೂ ಆಲಿಯಾ ಭಟ್ ಅಭಿನಯದ ದಿ ಡಿಸ್ಕೋ ಸಾಂಗ್, ಅಮಿತಾಬ್ ಬಚ್ಚನ್ ಚಿತ್ರದ ಚುಮ್ಮಾ ಚುಮ್ಮಾ ದೆ ದೆ ಚುಮ್ಮಾ ಚುಮ್ಮಾ ಹಾಗೂ ವೈ ದಿಸ್ ಕೊಲೆವೆರಿ ಡಿ ಯುವ ಸಮೂಹ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯಾಯಿತು.

ಇದಕ್ಕೂ ಮುನ್ನ ಸಂವಿಧಾನವೇ ಶ್ರೇಷ್ಠ ಗ್ರಂಥ ಈ ಮೂಲಕ ಪ್ರತಿಯೊಬ್ಬರಿಗೂ ನ್ಯಾಯ ಸಿಗುತ್ತಿದೆ. ಸ್ತ್ರೀ ಸಮಾನತೆಗಾಗಿ ಹೋರಾಟ ನಡೆಸಿದ ಹಾಗೂ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಜೀವನದ ಸಾಹಸ ಗಾಥೆಗಳನ್ನು ತಮ್ಮ ಅಮೋಘ ನೃತ್ಯದ ಮೂಲಕ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳ ತಂಡದವರು ತಿಳಿಸಿದರು.

ಛಾಯದೇವಿ ಬಿ.ಎಡ್ ಕಾಲೇಜ್ ವಿದ್ಯಾರ್ಥಿಗಳ ತಂಡದವರು ಬಾಲ ಕೃಷ್ಣನ ತುಂಟಾಟಗಳನ್ನು ಹಾಗೂ ರಾಧ ಕೃಷ್ಣ ಅವರ ಪ್ರೇಮ ಕಥನವನ್ನು ತಮ್ಮ ಅಮೋಘ ನೃತ್ಯದ ಮೂಲಕ ರಂಜಿಸಿದರೆ, ಗೋಪಾಲ ಸ್ವಾಮಿ ಶಿಶುವಿಹಾರ ಕಾಲೇಜಿನ ವಿದ್ಯಾರ್ಥಿಗಳು ರಾಧೆ ರಾಧೆ ಹೊ ರಾಧೆ ಶ್ಯಾಮ್ ಹಾಡಿಗೆ ಹಜ್ಜೆ ಹಾಕಿ ಕಾಳಿಂಗ ಮರ್ಧನ ಮಾಡಿ ಕೃಷ್ಣನ ದಶಾವತರಗಳನ್ನು ಯುವ ಸಮೂಹಗಳನ್ನ ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡಿದರು.

ವಾಣಿವಿಲಾಸ ಅರಸು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡದವರು ಕಾಂತರ ಚಿತ್ರದ ಸಿಂಗಾರ ಸಿರಿಯೇ ಹಾಗೂ ವರಾಹ ರೂಪಂ ಹಾಡಿಗೆ ಮನಮೋಹಕವಾಗಿ ನರ್ತಿಸುವ ಮೂಲಕ ಕರವಾಳಿ ನಾಡಿನ ನೃತ್ಯ ವೈಭವನ್ನು ಪ್ರೇಕ್ಷಕರ ಕಣ್ಣಮುಂದೆ ಅದ್ಭುತವಾಗಿ ಪ್ರಸ್ತುತ ಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಯೋಗ ತರಬೇತಿ ವಿದ್ಯಾರ್ಥಿಗಳ ತಂಡ ಏಕದಂತಾಯ ವಕ್ರತುಂಡಯಾ ಹಾಡಿಗೆ ಯೋಗದ ವಿವಿಧ ಭಂಗಿಗಳ ಮೂಲಕ ಉತ್ತಮ ಆರೋಗ್ಯಕ್ಕಾಗಿ ಯೋಗಾಸನದ ಮಹತ್ವವನ್ನು ಸಾರಿದರು. ಕೊಡಗಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೊಡಗಿನ ನೃತ್ಯದ ಸೊಬಗನ್ನು ಯುವ ಸಮೂಹಗಳ ಮುಂದೆ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ತಿಮ್ಮಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಇತರರು ಹಾಜರಿದ್ದರು…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *