ಪಟಾಕಿ ಹಬ್ಬ ಹಿನ್ನಲೆ…ನಾಗರೀಕರು ಹಾಗೂ ಪ್ರಾಣಿಪಕ್ಷಿಗಳ ಹಿತದೃಷ್ಟಿಯಿಂದ ಮೈಸೂರಿನಲ್ಲಿ ಕೆಲವು ನಿಶ್ಯಬ್ಧ ವಲಯ ಘೋಷಣೆ…
- TV10 Kannada Exclusive
- November 10, 2023
- No Comment
- 146


ಮೈಸೂರು,ನ10,Tv10 ಕನ್ನಡ

ಪಟಾಕಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.ನಾಗರೀಕರು,ಅಸಹಾಯಕರು,ಅಸ್ವಸ್ಥರು,ಪ್ರಾಣಿಪಕ್ಷಿಗಳ ಆರೋಗ್ಯ ಮತ್ತು ಸಂರಕ್ಷಣೆ ಹಿತದೃಷ್ಟಿಯಿಂದ ಮೈಸೂರಿನ ಕೆಲವೆಡೆ ನಿಶ್ಯಬ್ಧ ವಲಯ ಎಂದು ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಘೋಷಿಸಿದ್ದಾರೆ.
ಮೈಸೂರು ಮೃಗಾಲಯ,ಕುಕ್ಕರಹಳ್ಳಿ ಕೆರೆ,ಕಾರಂಜಿ ಕೆರೆ,ಲಿಂಗಾಬುದಿ ಕೆರೆ ಪ್ರದೇಶಗಳು,ಉದ್ಯಾನವನಗಳು,ಆಸ್ಪತ್ರೆ,ನರ್ಸಿಂಗ್ ಹೋಂ ಗಳು,ನ್ಯಾಯಾಲಯ,ಶಿಕ್ಷಣ ಸಂಸ್ಥೆಗಳು,ಧಾರ್ಮಿಕ ಸ್ಥಳಗಳ 100 ಮೀಟರ್ ವ್ಯಾಪ್ತಿಯನ್ನ ನಿಶ್ಯಬ್ಧ ವಲಯ ಎಂದು ಘೋಷಿಸಲಾಗಿದೆ.ನವೆಂಬರ್ 11 ರ ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 14 ರ ಮಧ್ಯರಾತ್ರಿ 12 ರವರೆಗೆ ಪಟಾಕಿ ಸಿಡಿಸುವುದನ್ನ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ…