ರಸ್ತೆ ಅಪಘಾತ…ಪತ್ರಕರ್ತ ಸಾವು…
- Crime
- December 19, 2023
- No Comment
- 144
ಮೈಸೂರು,ಡಿ19,Tv10 ಕನ್ನಡ
ಸ್ಕೂಟರ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ
ಮೈಸೂರು ಟಿ.ನರಸೀಪುರ ರಸ್ತೆಯ ರಿಂಗ್ ರಸ್ತೆ ಜಂಕ್ಷನ್ನಲ್ಲಿ ನಡೆದಿದೆ.
ಹನೂರಿನ ವಿನೋದ್ (38) ಸಾವನ್ನಪ್ಪಿದ್ದಾರೆ. ಉದಯವಾಣಿ ಪತ್ರಿಕೆ ವರದಿಗಾರರಾಗಿದ್ದಾರೆ.
ಸ್ಕೂಟರ್ನಲ್ಲಿ ಮೈಸೂರು ಕಡೆ ಬರುತ್ತಿದ್ದ ವಿನೋದ್ಗೆ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿನೋದ್
ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ವಿನೋದ್ ಸಾವನ್ನಪ್ಪಿದ್ದಾರೆ.
ಸಿದ್ದಾರ್ಥ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…