ಸದೃಢ ಯುವಕರು ಮಾತ್ರ ದೇಶದ ಆಸ್ತಿ –ಶ್ರೀ ಲಿಂಗನಸ್ವಾಮಿ
- TV10 Kannada Exclusive
- January 13, 2024
- No Comment
- 86
ಧೈರ್ಯ ಸತ್ಯ ಮತ್ತು ಶಿಸ್ತಿನಿಂದ ಕೂಡಿದ ಯುವಕರಿಂದ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಈ ವ್ಯಕ್ತಿತ್ವ ನಿರ್ಮಾಣ ಮಾಡಲು ವಿವೇಕಾನಂದರನು ಕುರಿತು ಹೆಚ್ಚು ಅರಿಯುವುದು ಇಂದು ಅಗತ್ಯವಾಗಿದೆ ಇಂದು ಶ್ರೀ ಲಿಂಗಣ್ಣ ಸ್ವಾಮಿ ಹಿರಿಯ ಅರ್ಥಶಾಸ್ತ್ರ ಉಪನ್ಯಾಸಕರು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ವಿವೇಕಾನಂದ ಜನ್ಮ ದಿನಾಚರಣೆನ್ನು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ನಂಜನಗೂಡಿನಲ್ಲಿ ಮಾತನಾಡುತ್ತಾ ಯುವಕರಿಗೆ ಸಂದೇಶ ನೀಡಿದರು .
ಭೂಗೋಳ ಶಾಸ್ತ್ರ ಉಪನ್ಯಾಸಕರು ಶ್ರೀ ಮಲ್ಲಿಕಾರ್ಜುನ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಶ್ರದ್ಧೆ ನಿಷ್ಠೆ ಪ್ರಾಮಾಣಿಕತೆ ರೂಡಿಸಿಕೊಳ್ಳುವ ಆತ್ಮಶಕ್ತಿ ಬೆಳೆಸಿಕೊಳ್ಳುವ ಛಲ ಬರಬೇಕು ಎಂದು ಹೇಳಿದರು .
ಆಂಗ್ಲ ಭಾಷೆಯ ಉಪನ್ಯಾಸಕರಾದ ಶ್ರೀ ರಂಗಸ್ವಾಮಿಯವರು ವಿವೇಕಾನಂದರ ಕಂಚಿನ ವಾಣಿ ಮತ್ತು ಆರಂಭಿಕ ಸಂಭೋಧನೆಯೇ ಅವರ ವಿಶಿಷ್ಟತೆ ಮತ್ತು ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರುವ ಪಾತಕೆ ಯಾಯಿತು ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ ದಿನೇಶ್ ರವರು ವಿವೇಕಾನಂದರ ಚಿಂತನೆ ಮತ್ತು ಪ್ರಭಾವದಿಂದ ಹಲವು ಸಾಮಾನ್ಯ ವ್ಯಕ್ತಿಗಳು ಮಹಾನ್ ವ್ಯಕ್ತಿಗಳಾಗಿ ಬೆಳೆದಿದ್ದಾರೆ. ಸಮಾಜವನ್ನು ಸದೃಢ ಮಾಡಲು ವಿವೇಕಾನಂದರ ಆಲೋಚನೆ ಶಕ್ತಿ ಇಂದು ಅನಿವಾರ್ಯ ಎಂದು ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿದರು .
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಅಶ್ವಥ್ ನಾರಾಯಣ ಗೌಡ ಮತ್ತು ಜುಡಿತ್ ಸಿಕ್ವೈರಾ ಡಾ ಟಿ.ಕೆ. ರವಿ ಉಪಸ್ಥಿತರಿದ್ದರು . ವಿದ್ಯಾರ್ಥಿಗಳಾದ ಕುಮಾರಿ ನಯನ ಮತ್ತು ಧ್ಯಾನ ವಿವೇಕಾನಂದರ ಕುರಿತು ಭಾಷಣ ಮಾಡಿದರು
ಅನ್ನಪೂರ್ಣ ಪ್ರಾರ್ಥನೆ ನವ್ಯಶ್ರೀ ಸ್ವಾಗತ ಸಂಜನಾ ವಂದಿಸಿ ಕಾರ್ಯಕ್ರಮವನ್ನು ಪ್ರಜ್ವಲ್ ನ ನಿರೂಪಿಸಿದರು ಸಾಂಸ್ಕೃತಿಕ ಕಾರ್ಯದರ್ಶಿಯಾದ ದಿನೇಶ್ ಮತ್ತು ವಸಂತಕುಮಾರಿ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.