ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಹುಲಿ ಸೆರೆ…

ನಂಜನಗೂಡು,ಜ31,Tv10 ಕನ್ನಡ

ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಹುಲಿಯನ್ನ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು 24 ಗಂಟೆ ಒಳಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಬಂಡಿಪುರ ರಾಷ್ಟ್ರೀಯ ಉದ್ಯಾನವನದ ನಂಜನಗೂಡು ತಾಲೂಕಿನ ನಾಗಣಪುರ ಗ್ರಾಮದ ನಾಗೇಂದ್ರ ಎಂಬುವರ ಜಮೀನಿನಲ್ಲಿ ಭಾರಿ ಗಾತ್ರದ ಹೆಣ್ಣು ಹುಲಿ ಪ್ರತ್ಯಕ್ಷವಾಗಿದೆ. ಜಮೀನಿನ ಬಳಿ ತೆರಳಿದ್ದ ಗ್ರಾಮದ ಸುರೇಶ ಮತ್ತು ನಂಜುಂಡ ಎಂಬುವರು ಹುಲಿಯನ್ನು ನೋಡಿ ಚಿರಾಟ ಮಾಡಿದ್ದಾರೆ. ಕಾಡಿನತ್ತ ಹೆಜ್ಜೆ ಹಾಕಲು ಮುಂದಾದ ಹುಲಿ ಸುರೇಶ್ ಮತ್ತು ನಂಜುಂಡ ಮೇಲೆರಗಿ ಗಂಭೀರ ಗಾಯಗೊಳಿಸಿ ಪರಾರಿಯಾಗಿದೆ. ಗ್ರಾಮಸ್ಥರು ಓಂಕಾರ ಹಾಗೂ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿಚಾರ ಮಟ್ಟಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸಂರಕ್ಷಣಾ ಪ್ರಾಧಿಕಾರ ನವ ದೆಹಲಿ ಅಧಿಕಾರಿಗಳಿಗೆ ಮಾಹಿತಿ ನೀಡಿ ನಂಜನಗೂಡಿನ ಶಾಸಕ ದರ್ಶನ್ ದ್ರುವ ನಾರಾಯಣ್ ರವರ ಆದೇಶದ ಮೆರೆಗೆ 24 ಗಂಟೆಗಳು ಕಳೆಯುವುದರ ಒಳಗಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಕಾರ್ಯಚರಣೆ ಮಾಡಿ ಹೆಣ್ಣು ಹುಲಿಯನ್ನು ಸೆರೆ ಹಿಡಿದು ಮೈಸೂರಿನ ಕೂರ್ಗಳಿಯ ಹುಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.ಹುಲಿ ಸೆರೆಯಿಂದ ಸ್ಥಳೀಯರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ…

Spread the love

Related post

2025ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟ: ರಾಜ್ಯದ 153 ಪೊಲೀಸರಿಗೆ ಗೌರವ

2025ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟ: ರಾಜ್ಯದ 153 ಪೊಲೀಸರಿಗೆ ಗೌರವ

2025ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟ: ರಾಜ್ಯದ 153 ಪೊಲೀಸರಿಗೆ ಗೌರವ ಬೆಂಗಳೂರು: 2025ನೇ ಸಾಲಿನ ಮುಖ್ಯಮಂತ್ರಿ ಪದಕ (CM Medal) ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ವಿವಿಧ…
ವಿದ್ಯುತ್ ಸ್ಪರ್ಷ…ಕಂಬದ ಮೇಲೆ ಲೈನ್ ಮನ್ ಸಾವು…

ವಿದ್ಯುತ್ ಸ್ಪರ್ಷ…ಕಂಬದ ಮೇಲೆ ಲೈನ್ ಮನ್ ಸಾವು…

ವಿದ್ಯುತ್ ಸ್ಪರ್ಷ…ಕಂಬದ ಮೇಲೆ ಲೈನ್ ಮನ್ ಸಾವು… ಮಂಡ್ಯ,ಮಾ28,Tv10 ಕನ್ನಡ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್ ಮೆನ್ ಸಾವನ್ನಪ್ಪಿದ ಘಟನೆಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ…
ಮುಖ ಎಡಿಟ್ ಮಾಡಿ ಗೃಹಿಣಿಯ ಅಶ್ಲೀಲ ಫೋಟೋ ಕ್ರಿಯೇಟ್…ಕಿಡಿಗೇಡಿ ವಿರುದ್ದ ಸೆನ್ ಠಾಣೆಯಲ್ಲಿ FIR

ಮುಖ ಎಡಿಟ್ ಮಾಡಿ ಗೃಹಿಣಿಯ ಅಶ್ಲೀಲ ಫೋಟೋ ಕ್ರಿಯೇಟ್…ಕಿಡಿಗೇಡಿ ವಿರುದ್ದ ಸೆನ್…

ಮುಖ ಎಡಿಟ್ ಮಾಡಿ ಗೃಹಿಣಿಯ ಅಶ್ಲೀಲ ಫೋಟೋ ಕ್ರಿಯೇಟ್…ಕಿಡಿಗೇಡಿ ವಿರುದ್ದ ಸೆನ್ ಠಾಣೆಯಲ್ಲಿ FIR ಮೈಸೂರು,ಮಾ28,,Tv10 ಕನ್ನಡ ಗೃಹಿಣಿಯ ಫೋಟೋ ಎಡಿಟ್ ಮಾಡಿ ಬೇರೆ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ…

Leave a Reply

Your email address will not be published. Required fields are marked *