ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯನ್ನ ಕೊಂದ ಪಾಪಿ ಪತಿ…ಆಸ್ತಿಗಾಗಿ ಕೃತ್ಯ…ನಾಲ್ವರು ಆರೋಪಿಗಳು ಅಂದರ್…

ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯನ್ನ ಕೊಂದ ಪಾಪಿ ಪತಿ…ಆಸ್ತಿಗಾಗಿ ಕೃತ್ಯ…ನಾಲ್ವರು ಆರೋಪಿಗಳು ಅಂದರ್…

ಮೈಸೂರು,ಫೆ18,Tv10 ಕನ್ನಡ

ಆಸ್ತಿಗಾಗಿ ಎರಡನೇ ಹೆಂಡತಿಯನ್ನ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಪತಿರಾಯನೇ ಕೊಂದ ದಾರುಣ ಘಟನೆ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪತಿಯ ಮೊದಲ ಹೆಂಡತಿ ಮಕ್ಕಳ ವ್ಯಾಮೋಹಕ್ಕೆ ಬಲಿಯಾದ ಎರಡನೇ ಪತ್ನಿ ಅಖಿಲಾ ಬಾನು(46).ಕೊಲೆ ಆರೋಪ ಹೊತ್ತವರು ಪತಿ ಅಬ್ಬ ಥಾಯೂಬ್ ಹಾಗೂ ಮಕ್ಕಳಾದ ಮೊಹಮದ್ ಆಸಿಫ್,ಮೊಹಮದ್ ಥೋಸಿಫ್ ಹಾಗೂ ಮೊಹಮದ್ ಹೈದರ್.

ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ ಅಬ್ಬಥಾಯೂಬ್ 2013 ರಲ್ಲಿ ಅಖಿಲಾ ಬಾನು ರನ್ನ ಎರಡನೇ ವಿವಾಹವಾಗಿದ್ದ.ಮೊದಲ ಹೆಂಡತಿ ಮಕ್ಕಳಿಗೆ ನಾಲ್ವರು ಮಕ್ಕಳಿದ್ದರು.ಎರಡನೇ ಪತ್ನಿ ಅಖಿಲಾ ಬಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಗುಣಮುಖರಾಗಿದ್ದರು.ಆದರೆ ಅಖಿಲಾಬಾನುಗೆ ಮಕ್ಕಳ ಯೋಗ ಇರಲಿಲ್ಲ.ಇತ್ತೀಚೆಗೆ ಅಖಿಲಾ ಬಾನು ಅಕ್ಕನ ಮಗ ಸೈಯದ್ ಇರ್ಫಾನ್ ರವರು ಚಿಕ್ಕಮ್ಮಳಿಗಾಗಿ ನಾಯ್ಡುನಗರದಲ್ಲಿ ಆರ್ಥಿಕ ನೆರವು ನೀಡಿ ಒಂದು ಮನೆ ಖರೀದಿಸಿಕೊಟ್ಟಿದ್ದರು.ಅಬ್ಬಥಾಯುಬ್ ಹಾಗೂ ಅಖಿಲಾ ಬಾನು ಇಬ್ಬರ ಹೆಸರಲ್ಲಿ ಮನೆಯ ಜಂಟಿ ಖಾತೆಯಾಗಿತ್ತು.6 ತಿಂಗಳ ಹಿಂದಷ್ಟೆ ಮನೆ ಖರೀದಿಯಾಗಿತ್ತು.ಇತ್ತೀಚೆಗೆ ಮನೆಯನ್ನ ಮೊದಲ ಹೆಂಡತಿ ಮಕ್ಕಳಿಗೆ ಬರೆದು ಕೊಡಲು ಅಬ್ಬಥಾಯುಬ್ ಪ್ರಯತ್ನಿಸಿದ್ದ.ಈ ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ಆಗಾಗ ಗಲಾಟೆ ಆಗಿದೆ.ಫೆ.16 ರ ಬೆಳಿಗ್ಗೆ ಇದ್ದಕ್ಕಿದ್ದಂತೆ ಸೈಯದ್ ಇರ್ಫಾನ್ ಮನೆಗೆ ಬಂದ ಅಬ್ಬಥಾಯೂಬ್ ಕಣ್ಣೀರಿಡುತ್ತಾ ಅಖಿಲಾಬಾನು ಮೃತಪಟ್ಟಿದ್ದಾಳೆ ಎಂದು ತಿಳಿಸಿ ಗೋಳಾಡಿದ್ದ.ರಾಜೇಂದ್ರ ನಗರದ ಮನೆಯಲ್ಲಿ ಇರಿಸಲಾಗಿದ್ದ ಅಖಿಲಾಬಾನು ಶವವನ್ನ ಸೈಯದ್ ಇರ್ಫಾನ್ ಪರಿಶೀಲನೆ ಮಾಡಿದಾಗ ಕುತ್ತಿಗೆಯ ಮೇಲೆ ತರುಚಿದ ಗಾಯಗಳು ಕಂಡು ಬಂದಿದೆ.ಇದರಿಂದ ಅನುಮಾನಗೊಂಡ ಸೈಯದ್ ಇರ್ಫಾನ್ ತಮ್ಮ ಚಿಕ್ಕಮ್ಮ ಸಾವು ಸಹಜವಲ್ಲ ಕೊಲೆ ಎಂದು ನಿರ್ಧರಿಸಿ ಅಬ್ಬ ಥಾಯುಬ್ ಹಾಗೂ ಮೊದಲ ಹೆಂಡತಿ ಮಕ್ಕಳಾದ ಮಹಮದ್ ಥೋಸಿಫ್,ಮಹಮದ್ ಆಸಿಫ್ ಹಾಗೂ ಮಹಮದ್ ಹೈದರ್ ಮೇಲೆ ಕೊಲೆ ಆರೋಪ ಹೊರೆಸಿ ಪ್ರಕರಣ ದಾಖಲಿಸಿದ್ದಾರೆ.ಸಧ್ಯ ಎನ್.ಆರ್.ಠಾಣಾ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ…

Spread the love

Related post

ಗ್ರಾಮದೇವತೆ ಜಾತ್ರೆ ವಿಡಿಯೋ ಮಾಡಿದ್ರೆ ಹುಷಾರ್…30 ಸಾವಿರ ದಂಡ ಎಚ್ಚರಿಕೆ…ಡಂಗುರ ಸಾರಿ ಪ್ರಚಾರ…

ಗ್ರಾಮದೇವತೆ ಜಾತ್ರೆ ವಿಡಿಯೋ ಮಾಡಿದ್ರೆ ಹುಷಾರ್…30 ಸಾವಿರ ದಂಡ ಎಚ್ಚರಿಕೆ…ಡಂಗುರ ಸಾರಿ…

ಗ್ರಾಮದೇವತೆ ಜಾತ್ರೆ ವಿಡಿಯೋ ಮಾಡಿದ್ರೆ ಹುಷಾರ್…30 ಸಾವಿರ ದಂಡ ಎಚ್ಚರಿಕೆ…ಡಂಗುರ ಸಾರಿ ಪ್ರಚಾರ… ನಂಜನಗೂಡು,ಫೆ9,Tv10 ಕನ್ನಡ ಗ್ರಾಮದೇವತೆ ಜಾತ್ರೇಲಿ ಕುಡಿದು ಗಲಾಟೆ ಮಾಡಿದ್ರೆ,ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ 30…
ಅಂಬಿಕಾಪುರ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ.

ಅಂಬಿಕಾಪುರ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ…

ಅಂಬಿಕಾಪುರ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ. ಹನೂರು Tv10 ಕನ್ನಡ07/02/2026. ಹನೂರು :ರೈತಾಪಿ ವರ್ಗದ ಜನರು…
ಭೂಗಳ್ಳರಿಗೆ ಬಿಸಿ…ಜೆಸಿಬಿ ಘರ್ಜನೆ…140 ಕೋಟಿ ಮೌಲ್ಯದ ಆಸ್ತಿ ಮೈಸೂರು ಅಭಿವೃದ್ದಿ ಪ್ರಾಧಿಕಾರದ ವಶಕ್ಕೆ…

ಭೂಗಳ್ಳರಿಗೆ ಬಿಸಿ…ಜೆಸಿಬಿ ಘರ್ಜನೆ…140 ಕೋಟಿ ಮೌಲ್ಯದ ಆಸ್ತಿ ಮೈಸೂರು ಅಭಿವೃದ್ದಿ ಪ್ರಾಧಿಕಾರದ…

ಭೂಗಳ್ಳರಿಗೆ ಬಿಸಿ…ಜೆಸಿಬಿ ಘರ್ಜನೆ…140 ಕೋಟಿ ಮೌಲ್ಯದ ಆಸ್ತಿ ಮೈಸೂರು ಅಭಿವೃದ್ದಿ ಪ್ರಾಧಿಕಾರದ ವಶಕ್ಕೆ… ಮೈಸೂರು,ಫೆ7,Tv10 ಕನ್ನಡ ಬೆಳ್ಳಬೆಳಗ್ಗೆ ಮೈಸೂರು ಅಭಿವೃದ್ದ ಪ್ರಾಧಿಕಾರ ಭೂಗಳ್ಳರಿಗೆ ಬಿಸಿ ಮುಟ್ಟಿಸಿದೆ.ಮೈಸೂರು ತಾಲೂಕು ಕಸಬ…

Leave a Reply

Your email address will not be published. Required fields are marked *