ಸ್ನೇಹಿತೆಗೆ ಆಮಿಷವೊಡ್ಡಿ ಧೋಖಾ…21 ಲಕ್ಷ ನಗದು ಹಾಗೂ ಕಾರು ಜೊತೆ ವಂಚಕ ನಾಪತ್ತೆ…ಮೂವರ ವಿರುದ್ದ FIR ದಾಖಲು…

ಮೈಸೂರು,ಮಾ15,Tv10 ಕನ್ನಡ

ಕುಟುಂಬಸ್ಥರಿಗೆ ಸರ್ಕಾರಿ ಕೆಲಸ ಕೊಡಿಸುವುದು ಸೇರಿದಂತೆ ಹಲವು ಆಮಿಷವೊಡ್ಡಿದ ಯುವಕ ತನ್ನ ಸ್ನೇಹಿತೆಯನ್ನ ವಂಚಿಸಿದ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಡಿಯಲ್ಲಿ ಬೆಳಕಿಗೆ ಬಂದಿದೆ.ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಯುವತಿ ಸುಪ್ರಿಯಾ ಎಂಬುವರಿಗೆ ಬರೋಬರಿ ವಿವಿದ ಹಂತಗಳಲ್ಲಿ 21 ಲಕ್ಷ ನಗದು ಹಾಗೂ ಕಾರು ಪಡೆದು ವಂಚಿಸಿದ್ದಾನೆ.ಸಂದೀಪ್ ಕುಮಾರ್ ಹಾಗೂ ಈತನ ಸ್ನೇಹಿತರಾದ ಮನೋಜ್ ಕುಮಾರ್ ಮತ್ತು ಪುನೀತ್ ಎಂಬುವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಸುಮಾರು 8 ವರ್ಷಗಳ ಹಿಂದೆ ಸುಪ್ರಿಯಾಗೆ ಸಂದೀಪ್ ಕುಮಾರ್ ಪರಿಚಯವಾಗಿದ್ದಾನೆ.ಯಾವುದೋ ವ್ಯವಹಾರ ಮಾಡುವುದಾಗಿ ನಂಬಿಸಿ ಸುಪ್ರಿಯಾ ರಿಂದ 10 ಲಕ್ಷ ಪಡೆದಿದ್ದಾನೆ.ನಂತರ ಈತನ ಸ್ನೇಹಿತ ಮನೋಜ್ ಕುಮಾರ್ ಎಂಬಾತ ತನ್ನ ಮನೆಯಿಂದ ಚಿನ್ನದ ಒಡವೆಗಳನ್ನ ಕಳುವು ಮಾಡಿ ಸಂದೀಪ್ ಕುಮಾರ್ ಗೆ ಕೊಟ್ಟಿದ್ದಾನೆ.ಅದೇ ಒಡವೆಗಳನ್ನ ಸುಪ್ರಿಯಾ ಹೆಸರಲ್ಲಿ ಸಂದೀಪ್ ಕುಮಾರ್ ಆಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಗಿರವಿ ಇರಿಸಿದ್ದಾನೆ.ಮನೋಜ್ ಕುಮಾರ್ ಮನೆಯವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಾಗ ಸುಪ್ರಿಯಾ ಬಳಿಯಿಂದ ಸಂದೀಪ್ ಕುಮಾರ್ 8.5 ಲಕ್ಷ ಪಡೆದು ಸೆಟಲ್ ಮಾಡಿದ್ದಾನೆ.ಈ ಮಧ್ಯೆ ಸುಪ್ರಿಯಾ ಮನೆಯವರಿಗೆ ಸರ್ಕಾರಿ ಕೆಲಸ ಕೊಡಿಸುವ ಆಮಿಷ ತೋರಿಸಿ 2.5 ಲಕ್ಷ ಪೀಕಿದ್ದಾನೆ.ಇಷ್ಟಕ್ಕೂ ಸಾಲದೆಂಬಂತೆ ಸುಪ್ರಿಯಾ ಖರೀದಿಸಿದ್ದ ಕಾರು ಪಡೆದು ನಾಪತ್ತೆಯಾಗಿದ್ದಾನೆ.ಹಣ ಹಾಗೂ ಕಾರು ಹಿಂದಿರುಗಿಸುವಂತೆ ಒತ್ತಾಯಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.ಈ ವಿಚಾರ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ.ಇವೆಲ್ಲಾ ವಂಚನೆಗೆ ಪುನೀತ್ ಎಂಬಾತ ಸಹಕರಿಸಿದ್ದಾನೆಂದು ಆರೋಪಿಸಿರುವ ಸುಪ್ರಿಯಾ ಮೂವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಆರ್.ಟಿ.ಐ.ಮಾಹಿತಿ ಪತ್ರಿಕೆ ಅಸ್ತಿತ್ವಕ್ಕೆ…ಭಾಷ್ಯಂ ಸ್ವಾಮೀಜಿ ರವರಿಂದ ಬಿಡುಗಡೆ…

ಆರ್.ಟಿ.ಐ.ಮಾಹಿತಿ ಪತ್ರಿಕೆ ಅಸ್ತಿತ್ವಕ್ಕೆ…ಭಾಷ್ಯಂ ಸ್ವಾಮೀಜಿ ರವರಿಂದ ಬಿಡುಗಡೆ…

ಮೈಸೂರು,ಜು7,Tv10 ಕನ್ನಡ ಮೈಸೂರಿನ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಇಂದು ಆರ್.ಟಿ.ಐ.ಮಾಹಿತಿ ಪತ್ರಿಕೆ ಬಿಡುಗಡೆ ಮಾಡಲಾಯಿತು.ದೇವಾಲಯದ ಸಂಸ್ಥಾಪಕರಾದ ಪ್ರೊ.ಭಾಷ್ಯಂ ಸ್ವಾಮೀಜಿ ರವರು ಬಿಡುಗಡೆ ಮಾಡಿದರು.ಈ ವೇಳೆ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್…
ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ…
ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು…

Leave a Reply

Your email address will not be published. Required fields are marked *