ಸ್ನೇಹಿತೆಗೆ ಆಮಿಷವೊಡ್ಡಿ ಧೋಖಾ…21 ಲಕ್ಷ ನಗದು ಹಾಗೂ ಕಾರು ಜೊತೆ ವಂಚಕ ನಾಪತ್ತೆ…ಮೂವರ ವಿರುದ್ದ FIR ದಾಖಲು…

ಮೈಸೂರು,ಮಾ15,Tv10 ಕನ್ನಡ

ಕುಟುಂಬಸ್ಥರಿಗೆ ಸರ್ಕಾರಿ ಕೆಲಸ ಕೊಡಿಸುವುದು ಸೇರಿದಂತೆ ಹಲವು ಆಮಿಷವೊಡ್ಡಿದ ಯುವಕ ತನ್ನ ಸ್ನೇಹಿತೆಯನ್ನ ವಂಚಿಸಿದ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಡಿಯಲ್ಲಿ ಬೆಳಕಿಗೆ ಬಂದಿದೆ.ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಯುವತಿ ಸುಪ್ರಿಯಾ ಎಂಬುವರಿಗೆ ಬರೋಬರಿ ವಿವಿದ ಹಂತಗಳಲ್ಲಿ 21 ಲಕ್ಷ ನಗದು ಹಾಗೂ ಕಾರು ಪಡೆದು ವಂಚಿಸಿದ್ದಾನೆ.ಸಂದೀಪ್ ಕುಮಾರ್ ಹಾಗೂ ಈತನ ಸ್ನೇಹಿತರಾದ ಮನೋಜ್ ಕುಮಾರ್ ಮತ್ತು ಪುನೀತ್ ಎಂಬುವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಸುಮಾರು 8 ವರ್ಷಗಳ ಹಿಂದೆ ಸುಪ್ರಿಯಾಗೆ ಸಂದೀಪ್ ಕುಮಾರ್ ಪರಿಚಯವಾಗಿದ್ದಾನೆ.ಯಾವುದೋ ವ್ಯವಹಾರ ಮಾಡುವುದಾಗಿ ನಂಬಿಸಿ ಸುಪ್ರಿಯಾ ರಿಂದ 10 ಲಕ್ಷ ಪಡೆದಿದ್ದಾನೆ.ನಂತರ ಈತನ ಸ್ನೇಹಿತ ಮನೋಜ್ ಕುಮಾರ್ ಎಂಬಾತ ತನ್ನ ಮನೆಯಿಂದ ಚಿನ್ನದ ಒಡವೆಗಳನ್ನ ಕಳುವು ಮಾಡಿ ಸಂದೀಪ್ ಕುಮಾರ್ ಗೆ ಕೊಟ್ಟಿದ್ದಾನೆ.ಅದೇ ಒಡವೆಗಳನ್ನ ಸುಪ್ರಿಯಾ ಹೆಸರಲ್ಲಿ ಸಂದೀಪ್ ಕುಮಾರ್ ಆಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಗಿರವಿ ಇರಿಸಿದ್ದಾನೆ.ಮನೋಜ್ ಕುಮಾರ್ ಮನೆಯವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಾಗ ಸುಪ್ರಿಯಾ ಬಳಿಯಿಂದ ಸಂದೀಪ್ ಕುಮಾರ್ 8.5 ಲಕ್ಷ ಪಡೆದು ಸೆಟಲ್ ಮಾಡಿದ್ದಾನೆ.ಈ ಮಧ್ಯೆ ಸುಪ್ರಿಯಾ ಮನೆಯವರಿಗೆ ಸರ್ಕಾರಿ ಕೆಲಸ ಕೊಡಿಸುವ ಆಮಿಷ ತೋರಿಸಿ 2.5 ಲಕ್ಷ ಪೀಕಿದ್ದಾನೆ.ಇಷ್ಟಕ್ಕೂ ಸಾಲದೆಂಬಂತೆ ಸುಪ್ರಿಯಾ ಖರೀದಿಸಿದ್ದ ಕಾರು ಪಡೆದು ನಾಪತ್ತೆಯಾಗಿದ್ದಾನೆ.ಹಣ ಹಾಗೂ ಕಾರು ಹಿಂದಿರುಗಿಸುವಂತೆ ಒತ್ತಾಯಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.ಈ ವಿಚಾರ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ.ಇವೆಲ್ಲಾ ವಂಚನೆಗೆ ಪುನೀತ್ ಎಂಬಾತ ಸಹಕರಿಸಿದ್ದಾನೆಂದು ಆರೋಪಿಸಿರುವ ಸುಪ್ರಿಯಾ ಮೂವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *