ಗಣಪತಿ ಶ್ರೀಗಳ 82 ನೇ ವರ್ಧಂತಿ…ವಿಶೇಷಚೇತನರಿಗೆ ಉಪಕರಣಗಳ ವಿತರಣೆ..

ಗಣಪತಿ ಶ್ರೀಗಳ 82 ನೇ ವರ್ಧಂತಿ…ವಿಶೇಷಚೇತನರಿಗೆ ಉಪಕರಣಗಳ ವಿತರಣೆ..

ಮೈಸೂರು,ಮೇ25,Tv10 ಕನ್ನಡ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82 ನೇ ವರ್ಷದ ವರ್ಧಂತಿ ಹಿನ್ನಲೆ ಇಂದು ವಿಶೇಷಚೇತನರಿಗೆ ಉಪಕರಣ‌ಗಳನ್ನ ವಿತರಣೆ ಮಾಡಲಾಯಿತು.
ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣಪತಿ ಶ್ರೀಗಳು ವಿಶೇಷ ಆರೋಗ್ಯ ವಿಚಾರಿಸಿ ಸಲಕರಣೆ ವಿತರಿಸಿದರು.
ಈ‌ ವೇಳೆ ಆಶೀರ್ವಚನ ನೀಡಿದ ಸ್ವಾಮೀಜಿಯವರು ವಿಶೇಷ ಚೇತನರನ್ನು ನೋಡಿಕೊಳ್ಳುವುದು ಒಂದು ಪುಣ್ಯದ ಕೆಲಸ ಅವರನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶೀರ್ವದಿಸಿದರು.40 ವ್ಹೀಲ್‌ಚೇರ್ಸ್,8ವಾಕರ್ಸ್,10ಕ್ರಚರ್ಸ್,5 ಸ್ಟಿಕ್ ಗಳು ಸೇರಿ ಒಟ್ಟು 82 ಉಪಕರಣಗಳನ್ನು ವಿಕಲಚೇತನರಿಗೆ ಶ್ರೀಗಳು ವಿತರಿಸಿದರು.ನಂತರ ನಾದಮಂಟಪದ 26 ನೇ ವಾರ್ಷಿಕೋತ್ಸವ ಮತ್ತು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82 ನೇ ಜನ್ಮದಿನೋತ್ಸವ ಪ್ರಯುಕ್ತ ಅವಧೂತ ದತ್ತ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ನಾದಮಂಟಪದಲ್ಲಿ ಲೋಕ ಕಲ್ಯಾಣಾರ್ಥವಾಗಿ‌ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಯ ಶಾಂತಿ ಕಲ್ಯಾಣ ವೈಭವವಾಗಿ ನೆರವೇರಿತು.
ಶ್ರೀ ದತ್ತ ವಿಜಯಾನಂದ ಶ್ರೀಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮಗಳು ನೆರವೇರಿದವು. ನಂತರ ‌ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಈ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು…

Spread the love

Related post

ದೃಷ್ಟಿ ತಗುಲಬಾರದೆಂದು ಜಮೀನಿಗೆ ಮಾಡಲ್ ಗಳ ಫೋಟೋ ಅಳವಡಿಸಿದ ಭೂಪ…ರೈತನ ಚಾಲಾಕಿ ಐಡಿಯಾಗೆ ಸ್ಥಳೀಯರು ಸುಸ್ತು…

ದೃಷ್ಟಿ ತಗುಲಬಾರದೆಂದು ಜಮೀನಿಗೆ ಮಾಡಲ್ ಗಳ ಫೋಟೋ ಅಳವಡಿಸಿದ ಭೂಪ…ರೈತನ ಚಾಲಾಕಿ…

ನಂಜನಗೂಡು,ಫೆ19,Tv10 ಕನ್ನಡ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಭೂತದ ಮುಖವಾಡ ಇರುವ ಬೊಂಬೆಗಳನ್ನ ಅಳವಡಿಸುವುದನ್ನ ನೋಡಿದ್ದೇವೆ.ಆದ್ರೆ ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದ ರೈತನೊಬ್ಬ ಐನಾತಿ ಐಡಿಯಾ ಹುಡುಕಿದ್ದಾನೆ.ಅರೆಬೆತ್ತಲೆಯಾಗಿ ಇರುವ…
ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ಸಾಬೀತು…12.35 ಲಕ್ಷ ಗುಳುಂ…ವರದಿ ಸಲ್ಲಿಸುವಂತೆ ಆಡಳಿತ ಮಂಡಳಿಗೆ ನೋಟೀಸ್…

ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ಸಾಬೀತು…12.35 ಲಕ್ಷ…

ನಂಜನಗೂಡು,ಫೆ19,Tv10 ಕನ್ನಡ ನಂಜನಗೂಡು ತಾಲೂಕು ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳು ಸೇರಿ ನಡೆಸಿದ ಅವ್ಯವಹಾರ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ.12,35,916/- ರೂ ಅವ್ಯವಹಾರ…
ದರೋಡೆಗೆ ಹೊಂಚು…ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ…

ದರೋಡೆಗೆ ಹೊಂಚು…ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ…

ಪಿರಿಯಾಪಟ್ಟಣ,ಫೆ19,Tv10 ಕನ್ನಡ ದರೋಡೆ ಮಾಡಲು ಹೊಂಚು ಹಾಕುತ್ತಿರುವ ಖತರ್ನಾಕ್ ಕಳ್ಳರ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಸಿಸಿ ಕ್ಯಾಮೆರಾವನ್ನು ಕಿತ್ತುಹಾಕಿ ಪ್ಲಾನ್ ಮಾಡುತ್ತಿರುವ ಮುಸುಕುಧಾರಿಗಳ ದೃಶ್ಯ ಸೆರೆಯಾಗಿದೆ.ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ…

Leave a Reply

Your email address will not be published. Required fields are marked *