ಗುಜರಿ ಗಡಿಯಲ್ಲಿ ಕ್ಲೋರಿನ್ ಸೋರಿಕೆ…5 ಮಂದಿ ಅಸ್ವಸ್ಥ…ಸ್ಥಳಕ್ಕೆ ಜಿಲ್ಲಾಧಿಕಾರಿ,ತಹಸೀಲ್ದಾರ್ ಭೇಟಿ…

ಗುಜರಿ ಗಡಿಯಲ್ಲಿ ಕ್ಲೋರಿನ್ ಸೋರಿಕೆ…5 ಮಂದಿ ಅಸ್ವಸ್ಥ…ಸ್ಥಳಕ್ಕೆ ಜಿಲ್ಲಾಧಿಕಾರಿ,ತಹಸೀಲ್ದಾರ್ ಭೇಟಿ…

ಮೈಸೂರು,ಜೂ8,Tv10 ಕನ್ನಡ 

ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ನಲ್ಲಿ ಕ್ಲೋರಿನ್ ಸೋರಿಕೆಯಾಗಿ 5 ಮಂದಿ ಅಸ್ವಸ್ಥರಾಗಿದ್ದಾರೆ. ವರುಣಾ ಚಾನಲ್ ಹಳೆ ಕೆಸರೆಯಲ್ಲಿರುವ ಮಹಮದ್ ಎಂಬುವವರ ಗುಜರಿ ಅಂಗಡಿಯಲ್ಲಿ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ದಾವಣಗೆರೆ ಯಿಂದ ಗುಜರಿ ಪದಾರ್ಥಗಳನ್ನ ಖರೀದಿಸಿರುತ್ತಾರೆ. ಇದರಲ್ಲಿ ಕ್ಲೋರಿನ್ ಸಿಲಿಂಡರ್ ಗಳು ಸಹ ಇದ್ದವು.ಒಂದರಲ್ಲಿ ಗ್ಯಾಸ್ ಇದ್ದು ಇದನ್ನು ತುಂಡು ಮಾಡುವಾಗ ಒಳಗಿದ್ದ ಕ್ಲೋರನ್ ಹೊರ ಬಂದಿರುತ್ತದೆ. ಈ ಸಮಯದಲ್ಲಿ ಸಮೀಪದ ಮನೆಗಳಲ್ಲಿ ವಾಸ ಮಾಡುತ್ತಿದ್ದ ಕುಟುಂಬದ ಸುಮಾರು 5 ಮಂದಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ರಿಂಗ್ ರಸ್ತೆಯಲ್ಲಿರುವ ಪ್ರಜ್ವಲ್ ಆಸ್ಪತ್ರೆ ಯಲ್ಲಿ ಅಸ್ವಸ್ಥರನ್ನ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ,ತಹಸೀಲ್ದಾರ್ ಮಹೇಶ್ ಕುಮಾರ್,ವಿ.ಎ.ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎನ್.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಅಸ್ವಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ…

Spread the love

Related post

MDA ಹೊಸಬಡಾವಣೆ ನಿರ್ಮಾಣ ಪ್ರಕ್ರಿಯೆ…ಡ್ರೋನ್ ಮೂಲಕ ಜಮೀನು ಸರ್ವೆ ಕಾರ್ಯ…ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಚಾಲನೆ…

MDA ಹೊಸಬಡಾವಣೆ ನಿರ್ಮಾಣ ಪ್ರಕ್ರಿಯೆ…ಡ್ರೋನ್ ಮೂಲಕ ಜಮೀನು ಸರ್ವೆ ಕಾರ್ಯ…ಜಿಲ್ಲಾಧಿಕಾರಿ ಲಕ್ಷ್ಮಿಕಾಂತ…

MDA ಹೊಸಬಡಾವಣೆ ನಿರ್ಮಾಣ ಪ್ರಕ್ರಿಯೆ…ಡ್ರೋನ್ ಮೂಲಕ ಜಮೀನು ಸರ್ವೆ ಕಾರ್ಯ…ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಚಾಲನೆ… ಮೈಸೂರು,ಏ4,Tv10 ಕನ್ನಡ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನ ಬಡಾವಣೆ ನಿರ್ಮಾಣ ಕಾರ್ಯ…
ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಭ್ರಹ್ಮಣ್ಯ ವಿರುದ್ದ ಅವ್ಯವಹಾರ ಆರೋಪ…ಮಾನಹಾರಿಕ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯ ಆದೇಶ…

ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಭ್ರಹ್ಮಣ್ಯ ವಿರುದ್ದ ಅವ್ಯವಹಾರ ಆರೋಪ…ಮಾನಹಾರಿಕ ಸುದ್ದಿ ಪ್ರಸಾರ…

ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಭ್ರಹ್ಮಣ್ಯ ವಿರುದ್ದ ಅವ್ಯವಹಾರ ಆರೋಪ…ಮಾನಹಾರಿಕ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯ ಆದೇಶ… ಮೈಸೂರು,ಏ4,Tv10 ಕನ್ನಡ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಭ್ರಹ್ಮಣ್ಯ ಗೆ ಬಿಗ್ ರಿಲೀಫ್…
ರೈತನಿಗೆ FIR ಹಾಕಿಸುವ ಧಂಕಿ…ನಂಜನಗೂಡು ತಹಸೀಲ್ದಾರ್ ಸ್ಮಿತಾರಾಮು ವಿರುದ್ದ ದೂರು…ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಂದ ಉಪವಿಭಾಗಾಧಿಕಾರಿಗಳಿಗೆ ಪತ್ರ…

ರೈತನಿಗೆ FIR ಹಾಕಿಸುವ ಧಂಕಿ…ನಂಜನಗೂಡು ತಹಸೀಲ್ದಾರ್ ಸ್ಮಿತಾರಾಮು ವಿರುದ್ದ ದೂರು…ಕ್ರಮ ಕೈಗೊಳ್ಳುವಂತೆ…

ರೈತನಿಗೆ FIR ಹಾಕಿಸುವ ಧಂಕಿ…ನಂಜನಗೂಡು ತಹಸೀಲ್ದಾರ್ ಸ್ಮಿತಾರಾಮು ವಿರುದ್ದ ದೂರು…ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಂದ ಉಪವಿಭಾಗಾಧಿಕಾರಿಗಳಿಗೆ ಪತ್ರ… ನಂಜನಗೂಡು,ಏ4,Tv10 ಕನ್ನಡ ಅರ್ಜಿ ಬಗ್ಗೆ ಮಾಹಿತಿ ಕೇಳಲು…

Leave a Reply

Your email address will not be published. Required fields are marked *