ತಾ.ಪಂ.ಮಾಜಿ ಸದಸ್ಯೆ ನಿವೇಶನದಲ್ಲಿ ದಾಂಧಲೆ…ಯುವಕನ ಮೇಲೆ ಹಲ್ಲೆ…ಅಕ್ರಮ ಪ್ರವೇಶ ಮಾಡಿ ಕಟ್ಟಡ ಧ್ವಂಸ…ಮೈಸೂರಿನಲ್ಲಿ ಆಟಾಟೋಪ…

ತಾ.ಪಂ.ಮಾಜಿ ಸದಸ್ಯೆ ನಿವೇಶನದಲ್ಲಿ ದಾಂಧಲೆ…ಯುವಕನ ಮೇಲೆ ಹಲ್ಲೆ…ಅಕ್ರಮ ಪ್ರವೇಶ ಮಾಡಿ ಕಟ್ಟಡ ಧ್ವಂಸ…ಮೈಸೂರಿನಲ್ಲಿ ಆಟಾಟೋಪ…

ಮೈಸೂರು,ಆ12,Tv10 ಕನ್ನಡ

ಮೈಸೂರು ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆಗೆ ಸೇರಿದ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮೂವರು ವ್ಯಕ್ತಿಗಳು ದಾಂಧಲೆ ಮಾಡಿದ್ದಾರೆ.ಜೆಸಿಬಿ ತಂದು ಕಟ್ಟಡವನ್ನ

ಧ್ವಂಸಗೊಳಿಸಿದ್ದಾರೆ.ಪ್ರತಿರೋಧಿಸಿದ ಮಾಜಿ ಸದಸ್ಯೆ ಪುತ್ರನನ್ನ ಎಳೆದೊಯ್ದು

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಟ್ಟಡವನ್ನ ಧ್ವಂಸಗೊಳಿಸಿದ್ದಾರೆ.ಈ ಸಂಭಂಧ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.

ಮೈಸೂರಿನ ಹೊರವಲಯದ ಹಿನಕಲ್ ಬಳಿ ಇರುವ ನಿವೇಶನದ ಸಂಖ್ಯೆ 2403 ಬಿ 3 ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ಚಿಕ್ಕತಾಯಮ್ಮ ಎಂಬುವರಿಗೆ ಸೇರಿದ್ದು.ಜಿ.ಡಬ್ಲೂ.ಎಸ್.ನಿವೇಶನದಲ್ಲಿ ಚಿಕ್ಕತಾಯಮ್ಮ ಕಟ್ಟಡ ನಿರ್ಮಿಸಿದ್ದಾರೆ.ನಿವೇಶನಕ್ಕೆ ಬಂದ ಮೂವರು ವ್ಯಕ್ತಿಗಳು ಏಕಾ ಏಕಿ ಜೆಸಿಬಿ ಯಂತ್ರದಿಂದ ಕಟ್ಟಡ ಕೆಡವಲು ಮುಂದಾಗಿದ್ದಾರೆ.ಇದನ್ನ ಪ್ರತಿರೋಧಿಸಿದ ಚಿಕ್ಕತಾಯಮ್ಮ ಪುತ್ರ ರಾಮ್ ಪ್ರೀತಂ ನ ಬಲವಂತವಾಗಿ ಎಳೆದೊಯ್ದು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕಬ್ಬಿಣದ ರಾಡಿನಿಂದ ಕಾಲಿಗೆ ಹೊಡೆದು ರಕ್ತಗಾಯ ಮಾಡಿದ್ದಾರೆ.ಈ ಎಲ್ಲಾ ಘಟನೆ ಸಿಸಿ ಕ್ಯಾಮರಾದಲ್ಲಿ ಹಾಗೂ ಮೊಬೈಲ್ ನಲ್ಲಿ ಸೆರೆಯಾಗಿದೆ.ನ್ಯಾಯಾಲಯದ ಯಾವುದೇ ಆದೇಶ ಪಡೆಯದೆ ಏಕಾಏಕಿ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿ ಧಂಕಿ ಹಾಕಿ ಬಲವಂತವಾಗಿ ಯುವಕನನ್ನ ಎಳೆದೊಯ್ದು ಹಲ್ಲೆ ನಡೆಸಿದ ಮೂವರ ವಿರುದ್ದ ಕ್ರಮ ಕೈಗೊಳ್ಳುವಂತೆ ಚಿಕ್ಕತಾಯಮ್ಮ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ದಾಂಧಲೆ ನಡೆಸಿದವರು ಮಂಜುನಾಥ್ ಹಾಗೂ ರೌಡಿ ಶೀಟರ್ ಗಳಾದ ಲೋಕೇಶ್,ಕುಳ್ಳ ದರ್ಶನ್ ಎಂದು ಗುರುತಿಸಲಾಗಿದೆ.ಕಟ್ಟಡ ಧ್ವಂಸಗೊಳಿಸಿ ದಾಂಧಲೆ ನಡೆಸಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ…

Spread the love

Related post

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ ಪಾರು…

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ…

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ ಪಾರು… ನಂಜನಗೂಡು,ಸೆ20,Tv10 ಕನ್ನಡ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದ ಮಿನಿಬಸ್ ಪಲ್ಟಿಯಾದ ಘಟನೆ ನಂಜನಗೂಡು…
ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮೈಸೂರು,ಸೆ20,Tv10 ಕನ್ನಡ ವಿಘ್ನನಿವಾರಕ ಗಣಪತಿ ಹಬ್ಬ ನಾಡಿನ ಮೂಲೆ ಮೂಲೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ರಸ್ತೆ ರಸ್ತೆಗಳಲ್ಲೂ ವಿವಿಧ ಆಕಾರಗಳಲ್ಲಿ ವಿಗ್ರಹಗಳು ಭಕ್ತರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.ವಿಸರ್ಜನೆಗಾಗಿ ಹಮ್ಮಿಕೊಳ್ಳುವ ಮೆರವಣಿಗೆಗಳಂತೂ ಜಂಬೂಸವಾರಿಯನ್ನೂ ನಾಚಿಸಯವಂತೆ…
ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ ಕೆ.

ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ…

ಮೈಸೂರು, ಸೆಪ್ಟೆಂಬರ್. 19-ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರನ್ನಾಗಿ ಸಾಹಿತ್ಯೇತರ ವ್ಯಕ್ತಿಯನ್ನೂ ಅಧ್ಯಕ್ಷರನ್ನಾಗಿಸುವುದು ಬೇಡ ಎಂದು ಹಿರಿಯ ಸಾಹಿತಿ ಡಾ. ಸಿ. ಪಿ ಕೆ…

Leave a Reply

Your email address will not be published. Required fields are marked *