ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಧೋಖಾ…ಮೂವರ ವಿರುದ್ದ FIR ದಾಖಲು…

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಧೋಖಾ…ಮೂವರ ವಿರುದ್ದ FIR ದಾಖಲು…

  • Crime
  • August 21, 2024
  • No Comment
  • 195

ಮೈಸೂರು,ಆ21,Tv10 ಕನ್ನಡ

ಮಂಡ್ಯ ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ವಂಚಿಸಿದ ಮೂವರ ವಿರುದ್ದ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ಯಾತಮಾರನಹಳ್ಳಿಯ ಕುಮಾರ್ ಹಾಗೂ ಪ್ರಮೋದ್ ಮತ್ತು ವಿನೋದ್ ಕುಮಾರ್ ಎಂಬುವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.ಧನುಷ್ ಕುಮಾರ್ ಎಂಬುವರು ವಂಚನೆಗೆ ಒಳಗಾಗಿ ಪ್ರಕರಣ ದಾಖಲಿಸಿದ್ದಾರೆ.

ಕುಮಾರ್ ಎಂಬಾತ ಧನುಷ್ ಕುಮಾರ್ ಗೆ ಪರಿಚಯವಾಗಿ ಮಂಡ್ಯಾ ದ ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ಪ್ರಮೋದ್ ನನ್ನು ಪರಿಚಯಿಸಿದ್ದಾನೆ.ಇಬ್ಬರೂ ಸೇರಿ ಧನುಷ್ ಕುಮಾರ್ ಬಳಿ ಹಂತಹಂತವಾಗಿ 3.80 ಲಕ್ಷ ಪಡೆದಿದ್ದಾರೆ.ಸುಮಾರು ಎರಡು ತಿಂಗಳು ಕಳೆದ ನಂತರ ಆರೋಗ್ಯ ಇಲಾಖೆಯ ವಿನೋದ್ ಕುಮಾರ್ ರವರು ನೀಡಿದ್ದಾರೆಂದು ಹೇಳಿ ಅಪಾಯಿಂಟ್ ಆದಂತೆ ನಿಯೋಜನೆ ಪತ್ರ,ಆದೇಶ ಪತ್ರ,ನಿಪೇಕ್ಷಣಾ ಪತ್ರ,ಪರಿಚಲನಾದೇಶ ಪತ್ರ,ಐಡಿ ಕಾರ್ಡ್ ಮತ್ತು ಇತರ ದಾಖಲೆಗಳನ್ನ ಕೊಟ್ಟಿದ್ದಾರೆ.ದಾಖಲೆಗಳನ್ನ ನೋಡಿ ಅನುಮಾನಗೊಂಡು ಮಂಡ್ಯ ಆರೋಗ್ಯ ಇಲಾಖೆ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದಾಗ ನಕಲಿ ಎಂದು ಖಚಿತವಾಗಿದೆ.ಇದೇ ರೀತಿ ವಿಜಯ್ ಕುಮಾರ್ ಎಂಬುವರಿಗೆ 3 ಲಕ್ಷ,ರಾಘವೇಂದ್ರ ಎಂಬುವರಿಗೆ 3.8 ಲಕ್ಷ,ಕೃಷ್ಣವೇಣಿ ಎಂಬುವರಿಂದ 3.9 ಲಕ್ಷ,ಮಹೇಶ್ ಎಂಬುವರಿಂದ 3.5 ಲಕ್ಷ ಹಣ ಪೀಕಿರುವುದು ಬೆಳಕಿಗೆ ಬಂದಿದೆ.ಉದಯಗಿರಿ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ FIR ದಾಖಲಾಗಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *