ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಧೋಖಾ…ಮೂವರ ವಿರುದ್ದ FIR ದಾಖಲು…

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಧೋಖಾ…ಮೂವರ ವಿರುದ್ದ FIR ದಾಖಲು…

  • Crime
  • August 21, 2024
  • No Comment
  • 224

ಮೈಸೂರು,ಆ21,Tv10 ಕನ್ನಡ

ಮಂಡ್ಯ ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ವಂಚಿಸಿದ ಮೂವರ ವಿರುದ್ದ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ಯಾತಮಾರನಹಳ್ಳಿಯ ಕುಮಾರ್ ಹಾಗೂ ಪ್ರಮೋದ್ ಮತ್ತು ವಿನೋದ್ ಕುಮಾರ್ ಎಂಬುವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.ಧನುಷ್ ಕುಮಾರ್ ಎಂಬುವರು ವಂಚನೆಗೆ ಒಳಗಾಗಿ ಪ್ರಕರಣ ದಾಖಲಿಸಿದ್ದಾರೆ.

ಕುಮಾರ್ ಎಂಬಾತ ಧನುಷ್ ಕುಮಾರ್ ಗೆ ಪರಿಚಯವಾಗಿ ಮಂಡ್ಯಾ ದ ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ಪ್ರಮೋದ್ ನನ್ನು ಪರಿಚಯಿಸಿದ್ದಾನೆ.ಇಬ್ಬರೂ ಸೇರಿ ಧನುಷ್ ಕುಮಾರ್ ಬಳಿ ಹಂತಹಂತವಾಗಿ 3.80 ಲಕ್ಷ ಪಡೆದಿದ್ದಾರೆ.ಸುಮಾರು ಎರಡು ತಿಂಗಳು ಕಳೆದ ನಂತರ ಆರೋಗ್ಯ ಇಲಾಖೆಯ ವಿನೋದ್ ಕುಮಾರ್ ರವರು ನೀಡಿದ್ದಾರೆಂದು ಹೇಳಿ ಅಪಾಯಿಂಟ್ ಆದಂತೆ ನಿಯೋಜನೆ ಪತ್ರ,ಆದೇಶ ಪತ್ರ,ನಿಪೇಕ್ಷಣಾ ಪತ್ರ,ಪರಿಚಲನಾದೇಶ ಪತ್ರ,ಐಡಿ ಕಾರ್ಡ್ ಮತ್ತು ಇತರ ದಾಖಲೆಗಳನ್ನ ಕೊಟ್ಟಿದ್ದಾರೆ.ದಾಖಲೆಗಳನ್ನ ನೋಡಿ ಅನುಮಾನಗೊಂಡು ಮಂಡ್ಯ ಆರೋಗ್ಯ ಇಲಾಖೆ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದಾಗ ನಕಲಿ ಎಂದು ಖಚಿತವಾಗಿದೆ.ಇದೇ ರೀತಿ ವಿಜಯ್ ಕುಮಾರ್ ಎಂಬುವರಿಗೆ 3 ಲಕ್ಷ,ರಾಘವೇಂದ್ರ ಎಂಬುವರಿಗೆ 3.8 ಲಕ್ಷ,ಕೃಷ್ಣವೇಣಿ ಎಂಬುವರಿಂದ 3.9 ಲಕ್ಷ,ಮಹೇಶ್ ಎಂಬುವರಿಂದ 3.5 ಲಕ್ಷ ಹಣ ಪೀಕಿರುವುದು ಬೆಳಕಿಗೆ ಬಂದಿದೆ.ಉದಯಗಿರಿ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ FIR ದಾಖಲಾಗಿದೆ…

Spread the love

Related post

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್… ಮಂಡ್ಯ,ಜೂ13,Tv10 ಕನ್ನಡ ಜಮೀನು ಖಾತೆಗೆ ರೂ.2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ಹಣ ಸ್ವೀಕರಿಸುವಾಗಲೋಕಾಯುಕ್ತ…
ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್… ಮೈಸೂರು,ಜೂ12,Tv10 ಕನ್ನಡ ಕಸದರಾಶಿ ಹಾವಳಿ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್ ಪ್ಲಾನ್…
ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ… ಮೈಸೂರು,ಜೂ10,Tv10 ಕನ್ನಡ ನಿರೀಕ್ಷೆಯಂತೆ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಕರ್ತವ್ಯದಲ್ಲಿ ಭಾರಿ ಬದಲಾವಣೆ ಆಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ತವ್ಯ…

Leave a Reply

Your email address will not be published. Required fields are marked *