ಬೀದಿ ಪಾಲಾಗಿದ್ದ ಸಾಧುಸಂತನ ನೆರವಿಗೆ ಧಾವಿಸಿದ SDPI ಮುಖಂಡರು…ಆಶ್ರಯ ಕಲ್ಪಿಸಿ ಮಾನವೀಯತೆ…

ಬೀದಿ ಪಾಲಾಗಿದ್ದ ಸಾಧುಸಂತನ ನೆರವಿಗೆ ಧಾವಿಸಿದ SDPI ಮುಖಂಡರು…ಆಶ್ರಯ ಕಲ್ಪಿಸಿ ಮಾನವೀಯತೆ…

ಮೈಸೂರು,ಆ30,Tv10 ಕನ್ನಡ

ಬಾಡಿಗೆ ನೀಡದ ಹಿನ್ನಲೆ ಮನೆಯಿಂದ ಹೊರದೂಡಿ ಬೀದಿ ಪಾಲಾಗಿದ್ದ ಸಾಧು ಸಂತನ ನೆರವಿಗೆ SDPI ಮುಖಂಡರು ಧಾವಿಸಿ ಆಶ್ರಯ ನೀಡಿ ಮಾನವೀಯತೆ ಪ್ರದರ್ಶಿಸಿದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.SDPI ಸಂಘಟನೆಯ ಮುಖಂಡರಾದ ಅಮೀನ್ ಸೇಠ್ ಹಾಗೂ ಜಭಿ ಎಂಬುವರು ಸಾಧುಸಂತನ ಪರಿಸ್ಥಿತಿಗೆ ಮರುಗಿ ನೆರವಿಗೆ ಧಾವಿಸಿದವರು.ಬೀದಿಪಾಲಾಗಿದ್ದ ವೃದ್ದ ಸಾಧುಸಂತನಿಗೆ ಮತ್ತೆ ಮನೆ ಮಾಲೀಕರ ಮನ ಒಲಿಸಿ ಆಶ್ರಯ ಕಲ್ಪಿಸುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.

ಮೈಸೂರಿನ ನೆಹರು ನಗರದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.ವಾಸು ಎಂಬ ವೃದ್ದ ಸಾಧು ಸಂತರೊಬ್ಬರು ಬೀದಿ ಪಾಲಾಗಿದ್ದರು.ಶ್ರೀನಿವಾಸ್ ಎಂಬುವರ ಮನೆಯಲ್ಲಿ ವಾಸು ಬಾಡಿಗೆಯಲ್ಲಿದ್ದರು.ದೇವಾಲಯಗಳಲ್ಲಿ ಪೂಜೆಗಳನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಾಸು ರವರು 6 ತಿಂಗಳ ಹಿಂದೆ ಪಾರ್ಶ್ವವಾಯು ರೋಗಕ್ಕೆ ತುತ್ತಾದರು.ಆಗಿನಿಂದ ಓಡಾಡಲು ಶಕ್ತಿ ಇಲ್ಲದ ಕಾರಣ ವರಮಾನ ಸ್ಥಗಿತವಾಗಿತ್ತು.ಈ ಹಿನ್ನಲೆ ಬಾಡಿಗೆ ನೀಡಲು ಅಶಕ್ತರಾದರು.ಇದರಿಂದಾಗಿ ಮನೆ ಮಾಲೀಕರು ಇಂದು ಬೆಳಿಗ್ಗೆ ವಾಸು ರವರನ್ನ ಮನೆಯಿಂದ ಹೊರಹಾಕಿದ್ದರು.ಆಶ್ರಯವಿಲ್ಲದ ವಾಸು ಬೀದಿಯಲ್ಲಿ ಅನಾಥವಾಗಿ ಕಂಡುಬಂದರು.ಈ ಮಾಹಿತಿ ಅರಿತ SDPI ಸಂಘಟನೆಯ ಮುಖಂಡರು ವಾಸು ರವರ ನೆರವಿಗೆ ಧಾವಿಸಿದ್ದಾರೆ.ವಾಸು ರವರಿಂದ ಮಾಹಿತಿ ಪಡೆದು ನಂತರ ಮನೆ ಮಾಲೀಕ ಶ್ರೀನಿವಾಸ್ ರವರ ಮನ ಒಲಿಸಿ ಮತ್ತೆ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೀಘ್ರದಲ್ಲಿ ವಾಸು ರವರನ್ನ ವೃದ್ದಾಶ್ರಮಕ್ಕೆ ಸೇರಿಸಲು ನಿರ್ಧರಿಸಿದ್ದಾರೆ.ಕೋಮು ಸಂಘರ್ಷಗಳ ಪ್ರಕರಣಗಳ ಮಧ್ಯೆ SDPI ಮುಖಂಡರ ಈ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ನಾವೆಲ್ಲಾ ಒಂದೇ ಎಂಬ ಸಂದೇಶವನ್ನ ಈ ಮುಖಂಡರು ಧ್ವೇಷಗಳನ್ನ ಬಿತ್ತುವ ಕಿಡಿಗೇಡಿಗಳಿಗೆ ಈ ಪ್ರಕರಣದ ಮೂಲಕ ರವಾನಿಸಿದ್ದಾರೆ…

Spread the love

Related post

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…

Leave a Reply

Your email address will not be published. Required fields are marked *