ಬೀದಿ ಪಾಲಾಗಿದ್ದ ಸಾಧುಸಂತನ ನೆರವಿಗೆ ಧಾವಿಸಿದ SDPI ಮುಖಂಡರು…ಆಶ್ರಯ ಕಲ್ಪಿಸಿ ಮಾನವೀಯತೆ…

ಬೀದಿ ಪಾಲಾಗಿದ್ದ ಸಾಧುಸಂತನ ನೆರವಿಗೆ ಧಾವಿಸಿದ SDPI ಮುಖಂಡರು…ಆಶ್ರಯ ಕಲ್ಪಿಸಿ ಮಾನವೀಯತೆ…

ಮೈಸೂರು,ಆ30,Tv10 ಕನ್ನಡ

ಬಾಡಿಗೆ ನೀಡದ ಹಿನ್ನಲೆ ಮನೆಯಿಂದ ಹೊರದೂಡಿ ಬೀದಿ ಪಾಲಾಗಿದ್ದ ಸಾಧು ಸಂತನ ನೆರವಿಗೆ SDPI ಮುಖಂಡರು ಧಾವಿಸಿ ಆಶ್ರಯ ನೀಡಿ ಮಾನವೀಯತೆ ಪ್ರದರ್ಶಿಸಿದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.SDPI ಸಂಘಟನೆಯ ಮುಖಂಡರಾದ ಅಮೀನ್ ಸೇಠ್ ಹಾಗೂ ಜಭಿ ಎಂಬುವರು ಸಾಧುಸಂತನ ಪರಿಸ್ಥಿತಿಗೆ ಮರುಗಿ ನೆರವಿಗೆ ಧಾವಿಸಿದವರು.ಬೀದಿಪಾಲಾಗಿದ್ದ ವೃದ್ದ ಸಾಧುಸಂತನಿಗೆ ಮತ್ತೆ ಮನೆ ಮಾಲೀಕರ ಮನ ಒಲಿಸಿ ಆಶ್ರಯ ಕಲ್ಪಿಸುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.

ಮೈಸೂರಿನ ನೆಹರು ನಗರದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.ವಾಸು ಎಂಬ ವೃದ್ದ ಸಾಧು ಸಂತರೊಬ್ಬರು ಬೀದಿ ಪಾಲಾಗಿದ್ದರು.ಶ್ರೀನಿವಾಸ್ ಎಂಬುವರ ಮನೆಯಲ್ಲಿ ವಾಸು ಬಾಡಿಗೆಯಲ್ಲಿದ್ದರು.ದೇವಾಲಯಗಳಲ್ಲಿ ಪೂಜೆಗಳನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಾಸು ರವರು 6 ತಿಂಗಳ ಹಿಂದೆ ಪಾರ್ಶ್ವವಾಯು ರೋಗಕ್ಕೆ ತುತ್ತಾದರು.ಆಗಿನಿಂದ ಓಡಾಡಲು ಶಕ್ತಿ ಇಲ್ಲದ ಕಾರಣ ವರಮಾನ ಸ್ಥಗಿತವಾಗಿತ್ತು.ಈ ಹಿನ್ನಲೆ ಬಾಡಿಗೆ ನೀಡಲು ಅಶಕ್ತರಾದರು.ಇದರಿಂದಾಗಿ ಮನೆ ಮಾಲೀಕರು ಇಂದು ಬೆಳಿಗ್ಗೆ ವಾಸು ರವರನ್ನ ಮನೆಯಿಂದ ಹೊರಹಾಕಿದ್ದರು.ಆಶ್ರಯವಿಲ್ಲದ ವಾಸು ಬೀದಿಯಲ್ಲಿ ಅನಾಥವಾಗಿ ಕಂಡುಬಂದರು.ಈ ಮಾಹಿತಿ ಅರಿತ SDPI ಸಂಘಟನೆಯ ಮುಖಂಡರು ವಾಸು ರವರ ನೆರವಿಗೆ ಧಾವಿಸಿದ್ದಾರೆ.ವಾಸು ರವರಿಂದ ಮಾಹಿತಿ ಪಡೆದು ನಂತರ ಮನೆ ಮಾಲೀಕ ಶ್ರೀನಿವಾಸ್ ರವರ ಮನ ಒಲಿಸಿ ಮತ್ತೆ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೀಘ್ರದಲ್ಲಿ ವಾಸು ರವರನ್ನ ವೃದ್ದಾಶ್ರಮಕ್ಕೆ ಸೇರಿಸಲು ನಿರ್ಧರಿಸಿದ್ದಾರೆ.ಕೋಮು ಸಂಘರ್ಷಗಳ ಪ್ರಕರಣಗಳ ಮಧ್ಯೆ SDPI ಮುಖಂಡರ ಈ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ನಾವೆಲ್ಲಾ ಒಂದೇ ಎಂಬ ಸಂದೇಶವನ್ನ ಈ ಮುಖಂಡರು ಧ್ವೇಷಗಳನ್ನ ಬಿತ್ತುವ ಕಿಡಿಗೇಡಿಗಳಿಗೆ ಈ ಪ್ರಕರಣದ ಮೂಲಕ ರವಾನಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *