ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮೈಸೂರು,ಸೆ20,Tv10 ಕನ್ನಡ

ವಿಘ್ನನಿವಾರಕ ಗಣಪತಿ ಹಬ್ಬ ನಾಡಿನ ಮೂಲೆ ಮೂಲೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ರಸ್ತೆ ರಸ್ತೆಗಳಲ್ಲೂ ವಿವಿಧ ಆಕಾರಗಳಲ್ಲಿ ವಿಗ್ರಹಗಳು ಭಕ್ತರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.ವಿಸರ್ಜನೆಗಾಗಿ ಹಮ್ಮಿಕೊಳ್ಳುವ ಮೆರವಣಿಗೆಗಳಂತೂ ಜಂಬೂಸವಾರಿಯನ್ನೂ ನಾಚಿಸಯವಂತೆ ನಡೆದಿವೆ.ಆದರೆ ಗಣಪತಿ ಮೂರ್ತಿಗಳ ವಿಸರ್ಜನೆಯಲ್ಲಿ ಭಕ್ತರು ಎಡವುತ್ತಿದ್ದಾರೆ.ಸಂಪ್ರದಾಯಿಕವಾಗಿ ವಿಸರ್ಜಿಸದೆ ಗಣಪತಿ ವಿಗ್ರಹಗಳಿಗೆ ಅಪಚಾರ ಮಾಡುತ್ತಿದ್ದಾರೆ.ಕೆ.ಆರ್.ಎಸ್.ಮುಖ್ಯರಸ್ತೆಯ ಪಂಪ್ ಹೌಸ್ ಬಳಿ ಇರುವ ಆರ್.ಬಿ.ಎಲ್ ನಾಲೆಯಲ್ಲಿ ವಿಸರ್ಜಿಸಲಾದ ಬೃಹತ್ ಆಕಾರದ ಗಣಪತಿ ಮೂರ್ತಿಗಳು ನೀರಿನಲ್ಲಿ ಕರಗದೆ,ತೇಲದೆ,ಮುಳುಗದೆ ಅನಾಥವಾದಂತೆ ಭಾಸವಾಗುತ್ತಿವೆ.ಗಣಪತಿಗಳನ್ನ ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳನ್ನ ನಡೆಸಿದ ನಂತರ ಸಂಪ್ರದಾಯಿಕವಾಗಿ ವಿಸರ್ಜಿಸುವುದು ಆಚರಣೆಯಲ್ಲಿದೆ.ಆದ್ರೆ ಇಲ್ಲಿ ಆಚರಣೆಯನ್ನ ಬದಿಗೊತ್ತಿ ಬೇಕಾಬಿಟ್ಟಿ ನಾಲೆಯಲ್ಲಿ ಬಿಸಾಡಿ ಹೋಗುವ ಅವ್ಯಸ್ಥೆ ನಡೆದುಕೊಂಡು ಬಂದಿದೆ.ನಾಲೆಯ ಮಧ್ಯದಲ್ಲಿ ಸಿಲುಕಿದ ಗಣಪತಿ ವಿಗ್ರಹಗಳಿಗೆ ಮೋಕ್ಷ ಸಿಗದೆ ಅವ್ಯಸ್ಥೆಗೆ ಮೂಕಸಾಕ್ಷಿಯಾಗಿ ನಿಂತಿವೆ.ಇದರಿಂದ ಪರಿಸರಕ್ಕೂ ಹಾನಿ,ಜಲಚರಗಳಿಗೂ ಸಂಕಷ್ಟ,ನೀರು ಕಲುಷಿತವಾಗುವ ಭೀತಿ ಇದೆ.ನಾಲೆಗಳನ್ನ ಸಂರಕ್ಷಿಸಬೇಕಾದ ನೀರಾವರಿ ಇಲಾಖೆ ಅಧಿಕಾರಿಗಳು ಇದನ್ನ ಗಂಭೀರವಾಗಿ ಪರಿಗಣಿಸಿ ಇಂತಹ ಅವೈಜ್ಞಾನಿಕ ವಿಸರ್ಜನೆಗೆ ಕಡಿವಾಣ ಹಾಕಬೇಕಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *