ಮೈಸೂರಿನಲ್ಲಿ ಹನಿ ಟ್ರಾಪ್…ಪಾನಿಪುರಿ ವ್ಯಾಪಾರಿಯಿಂದ 75 ಸಾವಿರ ಸುಲಿಗೆ…ಮಹಿಳೆ,ರೌಡಿಶೀಟರ್ ಸೇರಿದಂತೆ ಐವರ ಬಂಧನ…

ಮೈಸೂರಿನಲ್ಲಿ ಹನಿ ಟ್ರಾಪ್…ಪಾನಿಪುರಿ ವ್ಯಾಪಾರಿಯಿಂದ 75 ಸಾವಿರ ಸುಲಿಗೆ…ಮಹಿಳೆ,ರೌಡಿಶೀಟರ್ ಸೇರಿದಂತೆ ಐವರ ಬಂಧನ…

ಮೈಸೂರು,ಅ1,Tv10 ಕನ್ನಡ

ಸಾಂಸ್ಕೃತಿಕ ನಗರಿಯಲ್ಲಿ ಹನಿಟ್ರಾಪ್ ಪ್ರಕರಣ ದಾಖಲಾಗಿದೆ.ಪಾನಿಪುರಿ ವ್ಯಾಪಾರಿಯೊಬ್ಬರನ್ನ ಟ್ರಾಪ್ ಮಾಡಿದ ತಂಡ 75 ಸಾವಿರ ಸುಲಿಗೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.

ನಂಜನಗೂಡಿನ ನಿವಾಸಿ ಪಾನಿಪುರಿ ವ್ಯಾಪಾರಿ ಮದನ್ ಲಾಲ್ ಗಯಾರಿ ಹನಿಟ್ರಾಪ್ ಗೆ ಒಳಗಾದವರು.ಕುಖ್ಯಾತ ರೌಡಿ ಶೀಟರ್ ಸೈಯದ್ ಶಾಬಾಜ್,ನೇಹಾ,ಸೈಯದ್ ಮುದಾಸರ್,ಕಫೀಉಲ್ಲಾ,ಸಿದ್ದಿಖ್ ಬಂಧಿತರು.ಡಕಾಯಿತಿ,ಕಳ್ಳತನ,ಸುಲಿಗೆ,ಕೊಲೆ ಬೆದರಿಕೆ,ವಾಹನ ಕಳುವು ಸೇರಿದಂತೆ 14 ಪ್ರಕರಣಗಳನ್ನ ಎದುರಿಸುತ್ತಿರುವ ಸೈಯದ್ ಶಾಬಾಜ್ ಕೃತ್ಯದ ರೂವಾರಿ.ನೇಹಾಳನ್ನ ಬಳಸಿಕೊಂಡ ಸೈಯದ್ ಶಾಬಾಜ್ ಪಾನಿಪುರ ವ್ಯಾಪಾರಿಯನ್ನ ಬುಟ್ಟಿಗೆ ಹಾಕಿಕೊಂಡಿದ್ದಾನೆ.ನೇಹಾ ಮೂಲಕ ರಮಾಬಾಯಿನಗರಕ್ಕೆ ಪಾನಿಪುರಿ ವ್ಯಾಪಾರಿಯನ್ನ ಕರೆಸಿ ಮನೆಯೊಂದರಲ್ಲಿ ಟ್ರಾಪ್ ಮಾಡಿದ್ದಾರೆ.ನೇಹಾಳೊಂದಿಗೆ ಬೆತ್ತಲೆ ಫೋಟೋ ತೆಗೆದು ನಂತರ ಹಣಕ್ಕೆ ಬ್ಲಾಕ್ ಮೇಲ್ ಮಾಡಿದ್ದಾರೆ.ಜುಲೈ ತಿಂಗಳಲ್ಲಿ ಮದನ್ ಲಾಲ್ ಗಯಾರಿಯನ್ನ ಟ್ರಾಪ್ ಮಾಡಿ ನಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.ಹಣ ಕೊಡದಿದ್ದಲ್ಲಿ ಬೆತ್ತಲೆ ಇರುವ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.ಗೌರವಕ್ಕೆ ಹೆದರಿದ ಮದನ್ ಲಾಲ್ ಗಯಾರಿ ಹಂತ ಹಂತವಾಗಿ 75800/- ರೂ ಕೊಟ್ಟಿದ್ದಾರೆ.ನಂತರವೂ ಹಣದ ಬೇಡಿಕೆ ಹೆಚ್ಚಾದಾಗ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು ನೇಹಾ,ಸೈಯದ್ ಮುದಾಸರ್,ಕಫೀಉಲ್ಲಾ,ಸಿದ್ದಿಖ್ ರನ್ನ ಬಂಧಿಸಿದ್ದರು.ಪ್ರಮುಖ ಆರೋಪಿ ಸೈಯದ್ ಶಾಬಾಜ್ ತಲೆ ಮರೆಸಿಕೊಂಡಿದ್ದ.ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಪ್ರಮುಖ ಆರೋಪಿ ಸೈಯದ್ ಶಾಬಾಜ್ ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
8 ಮಂದಿ ತಂಡದಿಂದ ಕೃತ್ಯ ನಡೆದಿದ್ದು ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.ಪರಾರಿಯಾದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಡಾ.ಎಂ.ಎಲ್.ಶೇಖರ್,ಪಿಎಸ್ಸೈ ಚಂದ್ರ ನೇತೃತ್ವದಲ್ಲಿ ಕೆ.ಎ.ಸಿಬ್ಬಂದಿಗಳಾದ ಮಹೇಶ್,ಸುನಿಲ್ ಕುಮಾರ್,ಪ್ರಕಾಶ್,ಮಂಜು,ಪವನ್ ಕುಮಾರ್ ಹಾಗೂ ಸಂಜಯ್ ರವರು ಆರೋಪಿಗಳ ಬಂಧನ ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…

Spread the love

Related post

ಬಲಮುರಿ ಎಡಮುರಿ ಫಾಲ್ಸ್ ಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಿಂಡಿ ಭೇಟಿ…ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ…

ಬಲಮುರಿ ಎಡಮುರಿ ಫಾಲ್ಸ್ ಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಿಂಡಿ ಭೇಟಿ…ಮುನ್ನೆಚ್ಚರಿಕೆ ಕ್ರಮ…

ಕೆ.ಆರ್.ಎಸ್,ಮೇ20,Tv10 ಕನ್ನಡ ಬಲಮುರಿ ಹಾಗೂ ಎಡಮುರಿ ಫಾಲ್ಸ್ ಗಳಿಗೆ ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ರವರು ಭೇಟಿ ನೀಡಿ ಸುರಕ್ಷತಾ ಕ್ರಮದ ಬಗ್ಗೆ ಕೆಲವು ಸೂಚನೆಗಳನ್ನ ನೀಡಿದರು.ಶಾಲಾ…
ಅಕ್ರಮ ಗಂಧದ ಮರದ ತುಂಡುಗಳ ಸಂಗ್ರಹ…ಓರ್ವನ ಬಂಧನ…ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಅಕ್ರಮ ಗಂಧದ ಮರದ ತುಂಡುಗಳ ಸಂಗ್ರಹ…ಓರ್ವನ ಬಂಧನ…ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ…

ಹುಣಸೂರು,ಮೇ20,Tv10 ಕನ್ನಡ ಅಕ್ರಮವಾಗಿ ಗಂಧದ ಮರದ ತುಂಡುಗಳನ್ನ ಸಂಗ್ರಹಿಸಿದ್ದ ಓರ್ವ ಆರೋಪಿಯನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಠಾಣಾ ವ್ಯಾಪ್ತಿಯ ಮಂಗಳೂರು ಮಾಳ ಹಾಡಿಯ ನಿವಾಸಿ ಶಿವನಂಜ…
ಮಾವಿನಕಾಯಿಗಾಗಿ ಗಲಾಟೆ…ಓರ್ವನ ಕೊ* ಯಲ್ಲಿ ಅಂತ್ಯ…

ಮಾವಿನಕಾಯಿಗಾಗಿ ಗಲಾಟೆ…ಓರ್ವನ ಕೊ* ಯಲ್ಲಿ ಅಂತ್ಯ…

ಹುಣಸೂರು,ಮೇ19,Tv10 ಕನ್ನಡ ಮಾವಿನಕಾಯಿ ಕೊಯ್ಯುವ ವಿಚಾರದಲ್ಲಿ ಶುರುವಾದ ಜಗಳ ಓರ್ವನ ಕೊಯಲ್ಲಿ ಅಂತ್ಯವಾದ ಘಟನೆ ಹುಣಸೂರು ತಾಲೂಕಿನ ಶಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಲ್ಲೇಶ್ ಮೃತ ದುರ್ದೈವಿ.ಕೊ ಆರೋಪಿ ಚೇತನ್ ಇದೀಗ…

Leave a Reply

Your email address will not be published. Required fields are marked *