ಮೈಸೂರಿನಲ್ಲಿ ಹನಿ ಟ್ರಾಪ್…ಪಾನಿಪುರಿ ವ್ಯಾಪಾರಿಯಿಂದ 75 ಸಾವಿರ ಸುಲಿಗೆ…ಮಹಿಳೆ,ರೌಡಿಶೀಟರ್ ಸೇರಿದಂತೆ ಐವರ ಬಂಧನ…

ಮೈಸೂರಿನಲ್ಲಿ ಹನಿ ಟ್ರಾಪ್…ಪಾನಿಪುರಿ ವ್ಯಾಪಾರಿಯಿಂದ 75 ಸಾವಿರ ಸುಲಿಗೆ…ಮಹಿಳೆ,ರೌಡಿಶೀಟರ್ ಸೇರಿದಂತೆ ಐವರ ಬಂಧನ…

ಮೈಸೂರು,ಅ1,Tv10 ಕನ್ನಡ

ಸಾಂಸ್ಕೃತಿಕ ನಗರಿಯಲ್ಲಿ ಹನಿಟ್ರಾಪ್ ಪ್ರಕರಣ ದಾಖಲಾಗಿದೆ.ಪಾನಿಪುರಿ ವ್ಯಾಪಾರಿಯೊಬ್ಬರನ್ನ ಟ್ರಾಪ್ ಮಾಡಿದ ತಂಡ 75 ಸಾವಿರ ಸುಲಿಗೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.

ನಂಜನಗೂಡಿನ ನಿವಾಸಿ ಪಾನಿಪುರಿ ವ್ಯಾಪಾರಿ ಮದನ್ ಲಾಲ್ ಗಯಾರಿ ಹನಿಟ್ರಾಪ್ ಗೆ ಒಳಗಾದವರು.ಕುಖ್ಯಾತ ರೌಡಿ ಶೀಟರ್ ಸೈಯದ್ ಶಾಬಾಜ್,ನೇಹಾ,ಸೈಯದ್ ಮುದಾಸರ್,ಕಫೀಉಲ್ಲಾ,ಸಿದ್ದಿಖ್ ಬಂಧಿತರು.ಡಕಾಯಿತಿ,ಕಳ್ಳತನ,ಸುಲಿಗೆ,ಕೊಲೆ ಬೆದರಿಕೆ,ವಾಹನ ಕಳುವು ಸೇರಿದಂತೆ 14 ಪ್ರಕರಣಗಳನ್ನ ಎದುರಿಸುತ್ತಿರುವ ಸೈಯದ್ ಶಾಬಾಜ್ ಕೃತ್ಯದ ರೂವಾರಿ.ನೇಹಾಳನ್ನ ಬಳಸಿಕೊಂಡ ಸೈಯದ್ ಶಾಬಾಜ್ ಪಾನಿಪುರ ವ್ಯಾಪಾರಿಯನ್ನ ಬುಟ್ಟಿಗೆ ಹಾಕಿಕೊಂಡಿದ್ದಾನೆ.ನೇಹಾ ಮೂಲಕ ರಮಾಬಾಯಿನಗರಕ್ಕೆ ಪಾನಿಪುರಿ ವ್ಯಾಪಾರಿಯನ್ನ ಕರೆಸಿ ಮನೆಯೊಂದರಲ್ಲಿ ಟ್ರಾಪ್ ಮಾಡಿದ್ದಾರೆ.ನೇಹಾಳೊಂದಿಗೆ ಬೆತ್ತಲೆ ಫೋಟೋ ತೆಗೆದು ನಂತರ ಹಣಕ್ಕೆ ಬ್ಲಾಕ್ ಮೇಲ್ ಮಾಡಿದ್ದಾರೆ.ಜುಲೈ ತಿಂಗಳಲ್ಲಿ ಮದನ್ ಲಾಲ್ ಗಯಾರಿಯನ್ನ ಟ್ರಾಪ್ ಮಾಡಿ ನಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.ಹಣ ಕೊಡದಿದ್ದಲ್ಲಿ ಬೆತ್ತಲೆ ಇರುವ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.ಗೌರವಕ್ಕೆ ಹೆದರಿದ ಮದನ್ ಲಾಲ್ ಗಯಾರಿ ಹಂತ ಹಂತವಾಗಿ 75800/- ರೂ ಕೊಟ್ಟಿದ್ದಾರೆ.ನಂತರವೂ ಹಣದ ಬೇಡಿಕೆ ಹೆಚ್ಚಾದಾಗ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು ನೇಹಾ,ಸೈಯದ್ ಮುದಾಸರ್,ಕಫೀಉಲ್ಲಾ,ಸಿದ್ದಿಖ್ ರನ್ನ ಬಂಧಿಸಿದ್ದರು.ಪ್ರಮುಖ ಆರೋಪಿ ಸೈಯದ್ ಶಾಬಾಜ್ ತಲೆ ಮರೆಸಿಕೊಂಡಿದ್ದ.ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಪ್ರಮುಖ ಆರೋಪಿ ಸೈಯದ್ ಶಾಬಾಜ್ ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
8 ಮಂದಿ ತಂಡದಿಂದ ಕೃತ್ಯ ನಡೆದಿದ್ದು ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.ಪರಾರಿಯಾದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಡಾ.ಎಂ.ಎಲ್.ಶೇಖರ್,ಪಿಎಸ್ಸೈ ಚಂದ್ರ ನೇತೃತ್ವದಲ್ಲಿ ಕೆ.ಎ.ಸಿಬ್ಬಂದಿಗಳಾದ ಮಹೇಶ್,ಸುನಿಲ್ ಕುಮಾರ್,ಪ್ರಕಾಶ್,ಮಂಜು,ಪವನ್ ಕುಮಾರ್ ಹಾಗೂ ಸಂಜಯ್ ರವರು ಆರೋಪಿಗಳ ಬಂಧನ ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…

Spread the love

Related post

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…
ಕ್ಯಾಪ್ಟನ್ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ…ಸಚಿವ ಈಶ್ವರ ಖಂಡ್ರೆ

ಕ್ಯಾಪ್ಟನ್ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ…ಸಚಿವ ಈಶ್ವರ ಖಂಡ್ರೆ

ಕ್ಯಾಪ್ಟನ್ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ…ಸಚಿವ ಈಶ್ವರ ಖಂಡ್ರೆ ಬೆಂಗಳೂರು,ಆ19,Tv10 ಕನ್ನಡ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿರುವ 60 ವರ್ಷದ ಕ್ಯಾಪ್ಟನ್ ಅಭಿಮನ್ಯುವಿಗೆ ಈ ಬಾರಿಯ ಮೈಸೂರು…
ಮೂವರು ಗುಂಡೇಟಿಗೆ ಬಲಿ ಪ್ರಕರಣ…ಬೇಟೆಗಾರರು ಎಂಬುದಕ್ಕೆ ಪುರಾವೆ…ಸಾಕ್ಷ್ಯ ಸಲ್ಲಿಸಿದ ಅರಣ್ಯ ಇಲಾಖೆ…

ಮೂವರು ಗುಂಡೇಟಿಗೆ ಬಲಿ ಪ್ರಕರಣ…ಬೇಟೆಗಾರರು ಎಂಬುದಕ್ಕೆ ಪುರಾವೆ…ಸಾಕ್ಷ್ಯ ಸಲ್ಲಿಸಿದ ಅರಣ್ಯ ಇಲಾಖೆ…

ಮೂವರು ಗುಂಡೇಟಿಗೆ ಬಲಿ ಪ್ರಕರಣ…ಬೇಟೆಗಾರರು ಎಂಬುದಕ್ಕೆ ಪುರಾವೆ…ಸಾಕ್ಷ್ಯ ಸಲ್ಲಿಸಿದ ಅರಣ್ಯ ಇಲಾಖೆ… ಚಾಮರಾಜನಗರ,ಆ17,Tv10 ಕನ್ನಡ ಚಾಮರಾಜನಗರದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆ…

Leave a Reply

Your email address will not be published. Required fields are marked *