ಇಎಸ್ ಐ ವೈದ್ಯರ ಕ್ವಾರ್ಟರ್ಸ್ ನ ತಾರಸಿಯಲ್ಲಿ ನಿಂತ ಮಳೆ ನೀರು…ಸ್ಥಳೀಯರಿಗೆ ರೋಗರುಜಿನಗಳ ಭೀತಿ…ಪಾಲಿಕೆ ಅಧಿಕಾರಿಗಳೇ ಎಲ್ಲಿದ್ದೀರಿ…?

ಇಎಸ್ ಐ ವೈದ್ಯರ ಕ್ವಾರ್ಟರ್ಸ್ ನ ತಾರಸಿಯಲ್ಲಿ ನಿಂತ ಮಳೆ ನೀರು…ಸ್ಥಳೀಯರಿಗೆ ರೋಗರುಜಿನಗಳ ಭೀತಿ…ಪಾಲಿಕೆ ಅಧಿಕಾರಿಗಳೇ ಎಲ್ಲಿದ್ದೀರಿ…?

ಮೈಸೂರು,ನ14,Tv10 ಕನ್ನಡ

ಸಾರ್ವಜನಿಕರ ಆರೋಗ್ಯ ರಕ್ಷಿಸುವ ಹೊಣೆ ವೈದ್ಯರದ್ದು.ಆದ್ರೆ ವೈದ್ಯರು ವಾಸಿಸುವ ಕ್ವಾರ್ಟರ್ಸ್ ಗಳೇ ಸಾರ್ವಜನಿಕರಿಗೆ ರೋಗಹರಡುವ ತಾಣವಾದ್ರೆ ಹೇಗೆ…?ಹೌದು ಇಂತಹ ಪರಿಸ್ಥಿತಿ ಬಂದಿರೋದು ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ವ್ಯಾಪ್ತಿ ವಾರ್ಡ್ ನಂಬರ್ 6 ಗೋಕುಲಂ 3 ನೇ ಹಂತದ 10 ಮುಖ್ಯರಸ್ತೆ ನಿವಾಸಿಗಳಿಗೆ. ಕೆ.ಆರ್.ಎಸ್.ಮುಖ್ಯ ರಸ್ತೆಯ ಇಎಸ್ ಐ ಆಸ್ಪತ್ರೆ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗಾಗಿ ಇಲ್ಲಿ ಕ್ವಾರ್ಟರ್ಸ್ ನಿರ್ಮಿಸಲಾಗಿದೆ.ಒಂದು ವರ್ಷದ ಹಿಂದೆ ನಿರ್ಮಿಸಿದ ಕಟ್ಟಡದ ತಾರಸಿಯಲ್ಲಿ ಮಳೆ ನೀರು ಈಜುಕೊಳದಂತೆ ನಿಂತಿದೆ.ಸರಾಗವಾಗಿ ಹರಿದುಹೋಗುವಂತೆ ಮಾಡುವಲ್ಲಿ ಕಂಟ್ರಾಕ್ಟರ್ ವಿಫಲವಾಗಿದ್ದಾನೆ.ಪರಿಣಾಮ ಮಳೆ ನೀರು ನಿಂತು ಕೊಳೆತುಹೋಗಿ ದುರ್ಗಂಧ ಬೀರುತ್ತಿದೆ.ಸೊಳ್ಳೆಗಳ ಆವಾಸಸ್ಥಾನವಾಗಿ ಪರಿಣಮಿಸಿದೆ.ಈಗಾಗಲೇ ಮಲೇರಿಯಾ, ಡೆಂಗ್ಯೂ ಭೀತಿ ಆವರಿಸಿರುವ ಸಮಯದಲ್ಲಿ ಸೊಳ್ಳೆಗಳ ಸಂತಾನಕ್ಕೆ ತಾರಸಿಯಲ್ಲಿ ನಿಂತ ಮಳೆ ನೀರು ಸಹಕಾರಿಯಾಗುತ್ತಿದೆ.ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದರೆ ಈ ಕ್ವಾರ್ಟರ್ಸ್ ನ ಸಮೀಪದಲ್ಲಿರುವ 10 ನೇ ಮುಖ್ಯ ರಸ್ತೆ ನಿವಾಸಿಗಳಿಗೆ ತಾರಸಿ ಮೇಲೆ ನಿಂತ ನೀರು ಪುಕ್ಕಟ್ಟೆಯಾಗಿ ರೋಗ ಹರಡುವ ಭೀತಿ ಸೃಷ್ಟಿಸಿದೆ.ನಿಂತು ಕೊಳೆತು ನಾರುತ್ತಿರುವ ಮಳೆ ನೀರನ್ನ ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಿ ಸ್ಥಳೀಯರ ಆರೋಗ್ಯ ರಕ್ಷಣೆಯತ್ತ ವಲಯ ಕಚೇರಿ 4 ರ ಅಧಿಕಾರಿಗಳು ಮುಂದಾಗಬೇಕಿದೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *