ಸರ್ಕಾರಿ ಜಾಗದಲ್ಲಿ ಬೃಹತ್ ಕಟ್ಟಡ…ಪರವಾನಗಿ ನೀಡಿದ ನಗರಸಭೆ…ನೋಟೀಸ್ ನೀಡಿ ಕಣ್ಮುಚ್ಚಿ ಕುಳಿತ ಅಧಿಕಾರಿಗಳು…

ಸರ್ಕಾರಿ ಜಾಗದಲ್ಲಿ ಬೃಹತ್ ಕಟ್ಟಡ…ಪರವಾನಗಿ ನೀಡಿದ ನಗರಸಭೆ…ನೋಟೀಸ್ ನೀಡಿ ಕಣ್ಮುಚ್ಚಿ ಕುಳಿತ ಅಧಿಕಾರಿಗಳು…

ಹುಣಸೂರು,ಜ5,Tv10 ಕನ್ನಡ

ಸರ್ಕಾರದ ಜಾಗದಲ್ಲಿ ಕಟ್ಟಡ ನಿರ್ಮಿಸಲು ನಗರಸಭೆಯೇ ಪರವಾನಗಿ ನೀಡಿರುವ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.ತಡವಾಗಿ ಜ್ಞಾನೋದಯವಾಗಿ ಪರವಾನಗಿ ರದ್ದುಪಡಿಸಲು ಮುಂದಾಗಿದೆ.ನೆಪಮಾತ್ರಕ್ಕೆ ನೋಟೀಸ್ ನೀಡಿದ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಾ ಕಣ್ಮುಚ್ಚಿ ಕುಳಿತಿದ್ದಾರೆ.ಇತ್ತ ಕಟ್ಟಡ ಕಾಮಗಾರಿ ರಾಜಾರೋಷವಾಗಿ ಸಾಗುತ್ತಿದೆ.

ಹುಣಸೂರು ತಾಲೂಕು ಕಸಬಾ ಹೋಬಳಿ,ದೊಡ್ಡಹುಣಸೂರು ಗ್ರಾಮ ಸರ್ಕಾರಿ ಸರ್ವೆ ನಂ.250 ರ 16.39 ಎಕ್ರೆ ವ್ಯಾಪ್ತಿಯಲ್ಲಿ ಬರುವ ಖಾತೆ ನಂ.185/152/1 ಹಾಗೂ 184/151/1 ರ ನಿವೇಶನಗಳಲ್ಲಿ ವಾಣಿಜ್ಯ ಹಾಗೂ ವಸತಿ ಕಟ್ಟಡಗಳನ್ನ ನಿರ್ಮಿಸಲು ಹುಣಸೂರು ನಗರಸಭೆಯಿಂದ ಪರವಾನಗಿ ನೀಡಿದ್ದಾರೆ.ಆದ್ರೆ ದಾಖಲೆಗಳನ್ನ ಪರಿಶೀಲನೆ ಮಾಡಿದಾಗ ಸದರಿ ಜಾಗದ ಆರ್.ಟಿ.ಸಿ.ಯಲ್ಲಿ ಟೌನ್ ಮುನಿಸಿಪಾಲಿಟಿ ಹುಣಸೂರು ಎಂದು ದಾಖಲಾಗಿದೆ.ಈ ಹಿನ್ನಲೆ ಪರವಾನಗಿ ನೀಡಿರುವ ಬಗ್ಗೆ ಸಾಕಷ್ಟು ತಕರಾರುಗಳು ಮತ್ತು ಆಕ್ಷೇಪಣೆಗಳು ಬಂದಿದೆ.ಹೀಗಾಗಿ ಸದರಿ ಸರ್ವೆ ನಂ.ಗೆ ಪರವಾನಗಿ ನೀಡಿರುವ ಬಗ್ಗೆ ಮೈಸೂರು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಂದ ತೆನಿಖೆ ಮಾಡಲು ತಂಡ ರಚಿಸಲಾಗಿದೆ.ಮುಂದಿನ ಆದೇಶದ ವರೆಗೆ ಯಾವುದೇ ಪರವಾನಗಿ ನೀಡಬಾರದೆಂದು ಹಾಗೂ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಬೇಕೆಂದು ಪೌರಾಯುಕ್ತರು ನೋಟೀಸ್ ನೀಡಿ ಈಗಾಗಲೇ ನೀಡಿರುವ ಪರವಾನಗಿಯನ್ನ ಹಿಂದಕ್ಕೆ ಪಡೆದಿದ್ದಾರೆ.ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಮೂರು ನೋಟೀಸ್ ನೀಡಲಾಗಿದೆ.ಹೀಗಿದ್ದೂ ಸರ್ಕಾರಿ ಜಾಗದಲ್ಲಿ ರಾಜಾರೋಷವಾಗಿ ನಿರ್ಮಾಣ ಕಾರ್ಯ ಮುಂದುವರೆಯುತ್ತಿದೆ.ಅಧಿಕಾರಿಗಳು ನೆಪಮಾತ್ರಕ್ಕೆ ನೋಟೀಸ್ ನೀಡಿ ಕಣ್ಮುಚ್ಚಿ ಕುಳಿತಿದ್ದಾರೆ.ಮೂರು ನೋಟೀಸ್ ಜಾರಿಯಾದ್ರೂ ಕಾಮಗಾರಿ ನಡೆಯುತ್ತಲೇ ಇದೆ.

ಸರ್ಕಾರಿ ಜಾಗಕ್ಕೆ ಪರವಾನಗಿ ನೀಡಿದ್ದು ಹೇಗೆ…?ಪರವಾನಗಿ ನೀಡುವ ಮುನ್ನ ದಾಖಲೆಗಳನ್ನ ಪರಿಶೀಲಿಸಲಿಲ್ಲವೇ…?ಆರ್.ಟಿ.ಸಿ.ಯಲ್ಲಿ ಟೌನ್ ಮುನಿಸಿಪಾಲಿಟಿ ಎಂದು ದಾಖಲಾಗಿದ್ದರೂ ಪರವಾನಗಿ ನೀಡಿದವರು ಯಾರು…? ಮೂರು ನೋಟೀಸ್ ಜಾರಿ ಮಾಡಿ ಕಣ್ಮುಚ್ಚಿ ಕುಳಿತಿರುವ ಕಾರಣವಾದ್ರೂ ಏನು..? ಎಂಬ ಪ್ರಶ್ನೆಗಳಿಗೆ ಪೌರಸಯುಕ್ತರು ಉತ್ತರ ನೀಡಬೇಕಿದೆ…

Spread the love

Related post

ಮೈಸೂರು ವಿವಿ ಅಕ್ಯಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ವಿಧಾನಪರಿಷತ್ ಶಾಸಕ ಕೆ.ವಿವೇಕಾನಂದ ನೇಮಕ…

ಮೈಸೂರು ವಿವಿ ಅಕ್ಯಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ವಿಧಾನಪರಿಷತ್ ಶಾಸಕ ಕೆ.ವಿವೇಕಾನಂದ ನೇಮಕ…

ಮೈಸೂರು,ಏ17,Tv10 ಕನ್ನಡ ಮೈಸೂರು ವಿಶ್ವವಿದ್ಯಾನಿಲಯದ ಅಕ್ಯಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ವಿಧಾನಪರಿಷತ್ ಶಾಸಕ ಕೆ.ವಿವೇಕಾನಂದ ನೇಮಕವಾಗಿದ್ದಾರೆ. ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ನಾಮ ನಿರ್ದೇಶಕರಾಗಿ ನೇಮಕವಾಗಿದ್ದಾರೆಂದು…
ಮಹಿಳೆಗೆ 1.41 ಕೋಟಿ ವಂಚನೆ…ಕೋ.ಆಪರೇಟಿವ್ ಬ್ಯಾಂಕ್ ನಿಂದ ಅಕ್ರಮವಾಗಿ ವರ್ಗಾವಣೆ…ಮ್ಯಾನೇಜರ್,ಜನರಲ್ ಮ್ಯಾನೇಜರ್,ಅಧ್ಯಕ್ಷನ ವಿರುದ್ದ ವಂಚನೆ ಪ್ರಕರಣ…

ಮಹಿಳೆಗೆ 1.41 ಕೋಟಿ ವಂಚನೆ…ಕೋ.ಆಪರೇಟಿವ್ ಬ್ಯಾಂಕ್ ನಿಂದ ಅಕ್ರಮವಾಗಿ ವರ್ಗಾವಣೆ…ಮ್ಯಾನೇಜರ್,ಜನರಲ್ ಮ್ಯಾನೇಜರ್,ಅಧ್ಯಕ್ಷನ…

ಮಹಿಖೆಯೊಬ್ಬರ ಸಿಸಿಎಲ್ ಖಾತೆಯಿಂದ ಅಕ್ರಮವಾಗಿ 1.41 ಕೋಟಿ ಹಣವನ್ನ ಅನುಮತಿ ಇಲ್ಲದೆ ಅಕ್ರಮವಾಗಿ ವರ್ಗಾವಣೆ ಮಾಡಿದ ಹಿನ್ನಲೆ ಕೋ ಆಪರೇಟಿವ್ ಬ್ಯಾಂಕ್ ಒಂದರ ಮ್ಯಾನೇಜರ್,ಜನರಲ್ ಮ್ಯಾನೇಜರ್ ಹಾಗೂ ಅಧ್ಯಕ್ಷನ…
ಮಾನಸಿಕ ಖಿನ್ನತೆ…ಯುವತಿ ಆತ್ಮಹತ್ಯೆ…ಡೆತ್ ನೋಟ್ ಬರೆದು ಸೂಸೈಡ್…

ಮಾನಸಿಕ ಖಿನ್ನತೆ…ಯುವತಿ ಆತ್ಮಹತ್ಯೆ…ಡೆತ್ ನೋಟ್ ಬರೆದು ಸೂಸೈಡ್…

ಮೈಸೂರು,ಏ16, ಡೆಕಥ್ಲಾನ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ರಾಮಕೃಷ್ಣನಗರ ಹೆಚ್ ಬ್ಲಾಕ್ ನಲ್ಲಿ ನಡೆದಿದೆ.*ನಾನು ಯಾವತ್ತೋ ಸಾಯಬೇಕಿತ್ತು,ಈಗ ಆತ್ಮಹತ್ಯೆ…

Leave a Reply

Your email address will not be published. Required fields are marked *