ಮೂರು ತಲೆಮಾರುಗಳಿಂದ ವಾಸವಿದ್ದ 4 ಕುಟುಂಬ ಬೀದಿಪಾಲು ಪ್ರಕರಣ…ತಾಲೂಕು ಆಡಳಿತ ಸ್ಪಂದನೆ…

ಮೂರು ತಲೆಮಾರುಗಳಿಂದ ವಾಸವಿದ್ದ 4 ಕುಟುಂಬ ಬೀದಿಪಾಲು ಪ್ರಕರಣ…ತಾಲೂಕು ಆಡಳಿತ ಸ್ಪಂದನೆ…

ನಂಜನಗೂಡು,ಜ6,Tv10 ಕನ್ನಡ

ಮೂರು ತಲೆಮಾರುಗಳಿಂದ ವಾಸವಿದ್ದ ಹಂದಿಜೋಗಿ ಜನಾಂಗದ 4 ಕುಟುಂಬವನ್ನ ರಾತ್ರೋರಾತ್ರಿ ಬೀದಿಪಾಲು ಮಾಡಿದ ಪ್ರಕರಣಕ್ಕೆ ನಂಜನಗೂಡು ತಾಲೂಕು ಆಡಳಿತ ಸ್ಪಂದಿಸಿದೆ.ಜಮೀನಿನ ಮಾಲಿಕ ಶಿವಾನಂದ ಮತ್ತು ಬಿಳಿಗೆರೆ ಪೊಲೀಸ್ ಠಾಣೆ ಪಿಎಸ್ಐ ಅಮಾನತಿಗಾಗಿ ಒತ್ತಡ ಹೇರಲಾಗಿದೆ.ನಂಜನಗೂಡು ತಾಲೂಕು ಹೊರಳವಾಡಿ ಹೊಸೂರು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ವಾಸವಿದ್ದ ಮನೆಗಳನ್ನ ತೆರುವುಗೊಳಿಸಿದ ಪರಿಣಾಮ ದಾರಿ ಕಾಣದೆ 4 ಕುಟುಂಬ ಬೀದಿಯನ್ನೇ ಆಶ್ರಯಿಸಿದೆ ನ್ಯಾಯ ದೊರೆಯದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ಧರಿಸಿದೆ.ಈ ಮಾಹಿತಿ ಅರಿತ ನಂತರ ನೊಂದ ಕುಟುಂಬದ ಬಳಿ ಜನಪ್ರತಿನಿಧಿಗಳು ಸಂತ್ರಸ್ಥ ಕುಟುಂಬದವರನ್ನ ಭೇಟಿ ಮಾಡಿದ್ದಾರೆ.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬಿಜೆಪಿ ಪಕ್ಷದ ಮಾಜಿ ಮಂತ್ರಿ ಎನ್ ಮಹೇಶ್ ಭೇಟಿ ನೀಡಿದ್ದಾರೆ.ಸಂತ್ರಸ್ಥರಿಂದ ಮಾಹಿತಿ ಪಡೆದ ಮಹೇಶ್ ತಹಸೀಲ್ದಾರ್ ಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ನಂಜನಗೂಡಿನ ತಹಸಿಲ್ದಾರ್ ಶಿವಕುಮಾರ್ ಕಾಸನೂರು ಇ ಓ ಜೆರಾಲ್ಡ್ ರಾಜೇಶ್ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾಯ ವಡ್ಡರ್ ಸೇರಿದಂತೆ ತಾಲೂಕು ಮಟ್ಟದ ಸಾಕಷ್ಟು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬೀದಿಪಾಲು ಮಾಡಿದವರ ವಿರುದ್ದ ಕಾನೂನು ಬದ್ಧವಾಗಿ ಅಟ್ರಾಸಿಟಿ ಪ್ರಕರಣ ದಾಖಲಾಗಿ ನಮ್ಮ ಭೂಮಿ ನಮಗೆ ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದು ನೊಂದ ಕುಟುಂಬಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ಹಂದಿ ಜೋಗಿ ಕುಟುಂಬಸ್ಥರಿಗೆ ಸೂಕ್ತವಾದ ನ್ಯಾಯ ಒದಗಿಸಿ ಕೊಡದಿದ್ದಲ್ಲಿ ನಾನೇ ಸಂತ್ರಸ್ಥರ ಜೊತೆ ಕುಳಿತು ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎನ್ ಮಹೇಶ್ ಎಚ್ಚರಿಸಿದ್ದಾರೆ…

Spread the love

Related post

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೈಸೂರು,ಮಾ11,Tv10 ಕನ್ನಡ ಸುಡು ಬೇಸಿಗೆಯ ಉಷ್ಣಾಂಶದಲ್ಲಿ ಜೀವಸಂಕುಲಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮೂಕಸ್ಪಂದನೆ ಎಂಬ ಜಾಗೃತಿ ಅಭಿಯಾನಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕೈ…
ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ…ಗ್ರಾ.ಪಂ.ಉಪಾಧ್ಯಕ್ಷ ಸೇರಿದಂ ನಾಲ್ವರ ವಿರುದ್ದ FIR…ನ್ಯಾಯಾಲಯದ ಆದೇಶದಂತೆ ಕ್ರಮ…

ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ…ಗ್ರಾ.ಪಂ.ಉಪಾಧ್ಯಕ್ಷ ಸೇರಿದಂ ನಾಲ್ವರ ವಿರುದ್ದ FIR…ನ್ಯಾಯಾಲಯದ…

ಮೈಸೂರು,ಮಾ11,Tv10 ಕನ್ನಡ ಖಾಸಗಿ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಮಾಲೀಕರಿಗೆ ನಿಂದನೆ, ಕೊಲೆ ಬೆದರಿಕೆ ಆರೋಪದ ಹಿನ್ನಲೆ ನ್ಯಾಯಾಲಯದ ಆದೇಶದಂತೆಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಎಸ್‌. ರವಿ…
ಕಾರು ಪಡೆದು ವಂಚನೆ ಆರೋಪ…ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ಪ್ರಕರಣ ದಾಖಲು…

ಕಾರು ಪಡೆದು ವಂಚನೆ ಆರೋಪ…ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ…

ಮೈಸೂರು,ಮಾ11,Tv10 ಕನ್ನಡ ವೈಯುಕ್ತಿಕ ಉಪಯೋಗಕ್ಕಾಗಿ ವ್ಯಕ್ತಿಯೊಬ್ಬರಿಂದ ಪಡೆದ ಕಾರನ್ನ ಹಿಂದಿರುಗಿಸದ ಮೈ ಟಾರ್ಪಾಲಿನ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಬೆಂಗಳೂರಿನ ರಾಜಿಯಾ…

Leave a Reply

Your email address will not be published. Required fields are marked *