ಮೊದಲ ಟಾಸ್ಕ್ ಗೆ 800 ಕಮೀಷನ್ ಬಂತು..ಎರಡನೇ ಟಾಸ್ಕ್ ಗೆ 2300 ಬಂತು…ಕೊನೆಗೆ 11.10 ಲಕ್ಷಕ್ಕೆ ಉಂಡೆನಾಮ ಬಿತ್ತು…

ಮೊದಲ ಟಾಸ್ಕ್ ಗೆ 800 ಕಮೀಷನ್ ಬಂತು..ಎರಡನೇ ಟಾಸ್ಕ್ ಗೆ 2300 ಬಂತು…ಕೊನೆಗೆ 11.10 ಲಕ್ಷಕ್ಕೆ ಉಂಡೆನಾಮ ಬಿತ್ತು…

ಮೈಸೂರು,ಮಾ1,Tv10 ಕನ್ನಡ

ರಿವ್ಯೂಸ್ ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ಲಾಭ ನೀಡುವುದಾಗಿ ನಂಬಿಸಿ ಟೆಕ್ಕಿಯೊಬ್ಬರು 11.10 ಲಕ್ಷ ಕಳೆದುಕೊಂಡಿದ್ದಾರೆ.ವಂಚಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯನಗರ ಬಡಾವಣೆ 2 ನೇ ಹಂತದ ನಿವಾಸಿ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಗ್ರಾಂಧಿ ವಂಚನೆಗೆ ಒಳಗಾದವರು.ಪ್ರಾರಂಭದಲ್ಲಿ ಸ್ಥಳಗಳ ಬಗ್ಗೆ ರಿವ್ಯೂಸ್ ಹಾಕುವ ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ಕಮೀಷನ್ ನೀಡುವುದಾಗಿ ನಂಬಿಸಿದ್ದಾನೆ.ಗೂಗಲ್ ನಲ್ಲಿ ಮೂರು ಸ್ಥಳಗಳಿಗೆ ರಿವ್ಯೂಸ್ ಹಾಕಿದಾಗ 150 ರೂ ಕಮೀಷನ್ ಬಂದಿದೆ.ನಂತರ 2000 ಇನ್ವೆಸ್ಟ್ ಮಾಡಿದಾಗ 2800 ರೂ ಬಂದಿದೆ.ನಂತರ 7000 ಇನ್ವೆಸ್ಟ್ ಮಾಡಿದಾಗ 9300/- ರೂ ಬಂದಿದೆ.ನಂತರ ಹಂತಹಂತವಾಗಿ 11.10 ಲಕ್ಷ ಇನ್ವೆಸ್ಟ್ ಮಾಡಿದ ಸಂಧೀಪ್ ಗ್ರಾಂಧಿಯವರಿಗೆ ಯಾವುದೇ ಕಮೀಷನ್ ಆಗಲಿ ಲಾಭವಾಗಲಿ ನೀಡದೆ ವಂಚಿಸಿದ್ದಾರೆ.ಈ ಸಂಭಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ… ಬೆಂಗಳೂರು,ಜ22,Tv10 ಕನ್ನಡ ಮುಡಾ ಮಾಜಿ ಆಯುಕ್ತ GT ದಿನೇಶ್…
ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ… ಮೈಸೂರು,ಜ22,Tv10 ಕನ್ನಡ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಿ ಎರಡು ವರ್ಷಗಳು ಪೂರೈಸಿದ ಐತಿಹಾಸಿಕ…
ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…

Leave a Reply

Your email address will not be published. Required fields are marked *