ಲವ್ ಮ್ಯಾಟರ್…ಹಳೆ ಲವರ್ ನಿಂದ ಹೊಸ ಲವರ್ ಕಿಡ್ನಾಪ್…ನನ್ ಹುಡುಗಿ ಸಹವಾಸಕ್ಕೆ ಬರಬೇಡ ಹುಷಾರ್…ಬಲವಂತವಾಗಿ ಹೊತ್ತೊಯ್ದು ಹಲ್ಲೆ ನಡೆಸಿ ಟಾರ್ಚರ್…5 ಮಂದಿ ವಿರುದ್ದ FIR…

ಲವ್ ಮ್ಯಾಟರ್…ಹಳೆ ಲವರ್ ನಿಂದ ಹೊಸ ಲವರ್ ಕಿಡ್ನಾಪ್…ನನ್ ಹುಡುಗಿ ಸಹವಾಸಕ್ಕೆ ಬರಬೇಡ ಹುಷಾರ್…ಬಲವಂತವಾಗಿ ಹೊತ್ತೊಯ್ದು ಹಲ್ಲೆ ನಡೆಸಿ ಟಾರ್ಚರ್…5 ಮಂದಿ ವಿರುದ್ದ FIR…

ಮೈಸೂರು,ಮಾ1,Tv10 ಕನ್ನಡ

ಹುಡುಗಿ ಲವ್ ವಿಚಾರದಲ್ಲಿ ಹಳೇ ಲವರ್ ಹೊಸ ಲವರ್ ನ ಬಲವಂತವಾಗಿ ಕರೆದೊಯ್ದು ಅಕ್ರಮವಾಗಿ ಬಂಧಿಸಿಟ್ಟು ಸ್ನೇಹಿತರೊಂದಿಗೆ ಸೇರಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿ ಬಿಡುಗಡೆ ಮಾಡಿದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಸಂಭಂಧ ಹಲ್ಲೆಗೊಳಗಾದ ಯುವತಿಯ ಹೊಸ ಲವರ್ ಹಳೇ ಲವರ್ ಸೇರಿದಂತೆ 5 ಮಂದಿ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.

ಗೋಕುಲಂ ನ ಖಾಸಗಿ ಬಿಪಿಓ ಕಂಪನಿಯಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿರುವ ಅಭಿನಂದ್ ಹಲ್ಲೆಗೆ ಒಳಗಾದ ಯುವತಿ ಹೊಸಲವರ್.ಹಲ್ಲೆ ನಡೆಸಿದ ಹಳೆ ಲವರ್ ನಿಜಾಂ ಸೇರಿದಂತೆ ಸ್ನೇಹಿತರಾದ ಶಾಹಿನ್,ಶಲ್ವಿನ್,ಶಾನ್ ಹಾಗೂ ಮತ್ತೊಬ್ಬನ ವಿರುದ್ದ ಪ್ರಕರಣ ದಾಖಲಾಗಿದೆ.

ಅಭಿನಂದ್ ಹಾಗೂ ದಿಲ್ ಶಾನಾ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಪರಸ್ಪರ ಪ್ರೀತಿಸುತ್ತಿದ್ದರು.ಈ ಹಿಂದೆ ದಿಲ್ ಶಾನಾ ಳನ್ನ ನಿಜಾಂ ಪ್ರೀತಿಸುತ್ತಿದ್ದ.ದಿಲ್ ಶಾನಾ ಜೊತೆ ಅಭಿನಂದ್ ಓಡಾಡುತ್ತಿದ್ದುದು ನಿಜಾಂಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ.ಫೆ26 ರಂದು ಅಭಿನಂದ್ ಗೆ ನಿಜಾಂ ಫೋನ್ ಮಾಡಿ ಮಾತನಾಡಬೇಕೆಂದು ತಿಳಿಸಿದ್ದಾನೆ.ದಿಲ್ ಶಾನಾ ಗೆ ಈ ವಿಚಾರ ತಿಳಿಸಿ ಅಭಿನಂದ್ ಹೊರಟಿದ್ದಾನೆ.ಕಾಫಿ ಕುಡಿಯೋಣ ಎಂದು ನೆಪ ಒಡ್ಡಿ ನಿಜಾಂ ಬೈಕ್ ಹತ್ತಿಸಿಕೊಂಡಿದ್ದಾನೆ.ತಕ್ಷಣವೇ ಹಿಂದೆ ಶಾಹಿನ್ ಕುಳಿತು ಅಲುಗಾಡದಂತೆ ಹಿಡಿದು ಮೊಬೈಲ್ ಕಿತ್ತುಕೊಂಡು ಸ್ವಿಚ್ ಆಫ್ ಮಾಡಿ ಬಲವಂತವಾಗಿ ಬನ್ನೂರು ರಸ್ತೆಯಲ್ಲಿರುವ ದೇವೇಗೌಡ ಸರ್ಕಲ್ ಬಳಿಗೆ ಕರೆದೊಯ್ದು ತಮ್ಮ ರೂಮಿನಲ್ಲಿ ಅಕ್ರಮವಾಗಿ ಬಂಧಿಸಿದ್ದಾರೆ.ಅಲ್ಲಿಗೆ ಶೆಲ್ವಿನ್,ಶಾನ್ ಹಾಗೂ ಮತ್ತೊಬ್ಬ ಬಂದಿದ್ದಾರೆ.ದಿಲ್ ಶಾನಾ ಸಹವಾಸ ಬಿಡು,ಆಕೆ ಜೊತೆ ಓಡಾಡಬಾರದೆಂದು ಬೆದರಿಕೆ ಹಾಕಿ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ.ಹಿಗ್ಗಾಮುಗ್ಗ ಥಳಿಸಿದ್ದಾರೆ.ಎಷ್ಟು ಹೊತ್ತು ಆದ್ರೂ ಅಭಿನಂದ್ ಹಿಂದಿರುಗದ ಕಾರಣ ದಿಲ್ ಶಾನಾ ತನ್ನ ಸ್ನೇಹಿತರಾದ ಅಪರ್ಣ ಹಾಗೂ ಅಕ್ಷಯಾ ರಿಗೆ ತಿಳಿಸಿ ನಿಜಾಂ ರೂಂ ಬಳಿ ಪರುಶೀಲನೆ ಮಾಡುವಂತೆ ಹೇಳಿದ್ದಾಳೆ.ಅಪರ್ಣ ಹಾಗೂ ಅಕ್ಷಯ ಇಬ್ಬರೂ ನಿಜಾಂ ರೂಂ ಗೆ ಬಂದಾಗ ಇಬ್ಬರ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ.ಸುಮಾರು ಮೂರು ಗಂಟೆಗಳ ಕಾಲ ಅಭಿನಂದ್ ನನ್ನು ಅಕ್ರಮವಾಗಿ ಬಂಧಿಸಿ ಟಾರ್ಚರ್ ಕೊಟ್ಟು ಪೊಲೀಸರಿಗೆ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನಂತರ ಬಿಡುಗಡೆ ಮಾಡಿದ್ದಾರೆ.ಹಳೇ ಲವರ್ ಕಪಿಮುಷ್ಠಿಯಿಂದ ಬಿಡುಗಡೆಯಾಗಿ ಬಂದ ಅಭಿನಂದ್ ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೈಸೂರು,ಮಾ11,Tv10 ಕನ್ನಡ ಸುಡು ಬೇಸಿಗೆಯ ಉಷ್ಣಾಂಶದಲ್ಲಿ ಜೀವಸಂಕುಲಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮೂಕಸ್ಪಂದನೆ ಎಂಬ ಜಾಗೃತಿ ಅಭಿಯಾನಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕೈ…
ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ…ಗ್ರಾ.ಪಂ.ಉಪಾಧ್ಯಕ್ಷ ಸೇರಿದಂ ನಾಲ್ವರ ವಿರುದ್ದ FIR…ನ್ಯಾಯಾಲಯದ ಆದೇಶದಂತೆ ಕ್ರಮ…

ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ…ಗ್ರಾ.ಪಂ.ಉಪಾಧ್ಯಕ್ಷ ಸೇರಿದಂ ನಾಲ್ವರ ವಿರುದ್ದ FIR…ನ್ಯಾಯಾಲಯದ…

ಮೈಸೂರು,ಮಾ11,Tv10 ಕನ್ನಡ ಖಾಸಗಿ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಮಾಲೀಕರಿಗೆ ನಿಂದನೆ, ಕೊಲೆ ಬೆದರಿಕೆ ಆರೋಪದ ಹಿನ್ನಲೆ ನ್ಯಾಯಾಲಯದ ಆದೇಶದಂತೆಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಎಸ್‌. ರವಿ…
ಕಾರು ಪಡೆದು ವಂಚನೆ ಆರೋಪ…ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ಪ್ರಕರಣ ದಾಖಲು…

ಕಾರು ಪಡೆದು ವಂಚನೆ ಆರೋಪ…ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ…

ಮೈಸೂರು,ಮಾ11,Tv10 ಕನ್ನಡ ವೈಯುಕ್ತಿಕ ಉಪಯೋಗಕ್ಕಾಗಿ ವ್ಯಕ್ತಿಯೊಬ್ಬರಿಂದ ಪಡೆದ ಕಾರನ್ನ ಹಿಂದಿರುಗಿಸದ ಮೈ ಟಾರ್ಪಾಲಿನ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಬೆಂಗಳೂರಿನ ರಾಜಿಯಾ…

Leave a Reply

Your email address will not be published. Required fields are marked *