ಗ್ರಾಮದಹಬ್ಬ ಮುಗಿಸಿ ಬಂದ ರಿಯಲ್ ಎಸ್ಟೇಟ್ ಉದ್ಯಮಿಗೆ ಶಾಕ್…ಚಿನ್ನಾಭರಣ ಸೇರಿದಂತೆ 41.67 ಲಕ್ಷ ನಗದು ಕಳುವು…

ಗ್ರಾಮದಹಬ್ಬ ಮುಗಿಸಿ ಬಂದ ರಿಯಲ್ ಎಸ್ಟೇಟ್ ಉದ್ಯಮಿಗೆ ಶಾಕ್…ಚಿನ್ನಾಭರಣ ಸೇರಿದಂತೆ 41.67 ಲಕ್ಷ ನಗದು ಕಳುವು…

ಮೈಸೂರು,ಮಾ28,Tv10 ಕನ್ನಡ

ಗ್ರಾಮದ ಹಬ್ಬ ಮುಗಿಸಿ ಹಿಂದಿರುಗಿದ ರಿಯಲ್ ಎಸ್ಟೇಟ್ ಉದ್ಯಮಿಗೆ ಕಳ್ಳರು ಶಾಕ್ ಕೊಟ್ಟಿದ್ದಾರೆ.ಮನೆಯಲ್ಲಿದ್ದ 34.67 ಲಕ್ಷ ಕ್ಯಾಶ್ 7 ಲಕ್ಷ ಮೌಲ್ಯದ 89 ಗ್ರಾಂ ಚಿನ್ನಾಭರಣ ಕಳ್ಳರ ಪಾಲಾಗಿದೆ.ಈ ಸಂಭಂಧ ರಿಯಲ್ ಎಸ್ಟೇಟ್ ಉದ್ಯಮಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಜ್ರೇಶ್ವರಿ ಡೆವಲಪರ್ಸ್ ಹೆಸರಿನಲ್ಲಿ ನಡೆಸುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಸಹೋದರ ಶ್ರೀ ಬಸವರಾಜು ಎಂಬುವರ ಮನೆಯಲ್ಲಿ ಕಳ್ಳತನ ಆಗಿದೆ.ವಿಜಯನಗರ 3 ನೇ ಹಂತದಲ್ಲಿರುವ ಮನೆಯಲ್ಲಿ ಕಳ್ಳತನವಾಗಿದೆ.ಸಹೋದರ ದೀಪಕ್ ನಡೆಸುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರವನ್ನ ಶ್ರೀಬಸವರಾಜು ರವರು ನೋಡಿಕೊಳ್ಳುತ್ತಿದ್ದರು.ಕಳೆದ ಮೂರು ತಿಂಗಳಲ್ಲಿ ವ್ಯವಹಾರದಿಂದ ಬಂದ ಹಣವನ್ನ ದೀಪಕ್ ರವರು ಸೇಫ್ ಆಗಿರಲೆಂದು ಸಹೋದರ ಶ್ರೀ ಬಸವರಾಜು ರವರ ಮನೆಯಲ್ಲಿ ಇರಿಸಿದ್ದರು.

ಚಾಮರಾಜನಗರ ಶಿವನಸಮುದ್ರದಲ್ಲಿ ಗ್ರಾಮದ ಹಬ್ಬ ಇದ್ದ ಕಾರಣ ಶ್ರೀಬಸವರಾಜು ಸಹೋದರಿಯನ್ನ ಮನೆಯಲ್ಲಿ ಇರಿಸಿ ತೆರಳಿದ್ದರು.ಹಬ್ಬಕ್ಕೆ ಸಹೋದರಿ ಸಹ ತೆರಳಿದ್ದರು.ಹಬ್ಬ ಮುಗಿಸಿ ಮಾ27 ರಂದು ಹಿಂದಿರುಗಿದ ಶ್ರೀ ಬಸವರಾಜ್ ಗೆ ಶಾಕ್ ಆಗಿದೆ.ಮನೆ ಬಾಗಿಲು ಕಿಟಕಿ ತೆರದ ಸ್ಥಿತಿಯಲ್ಲಿದೆ.ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ ಕ್ಯಾಶ್ 34.67 ಲಕ್ಷ ಹಾಗೂ 7 ಲಕ್ಷ ಮೌಲ್ಯದ 89 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿದೆ.ಈ ಸಂಭಂಧ ವಿಜಯನಗರ ಠಾಣೆಯಲ್ಲಿ ಶ್ರೀ ಬಸವರಾಜು ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ಮನವಿ ಮಾಡಿದ್ದಾರೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *