ಮೊದಲ ಪತ್ನಿ ಇದ್ದರೂ ಎರಡನೇ ಮದುವೆ ಮಾಡಿಕೊಂಡು ವಂಚನೆ…50 ಲಕ್ಷಕ್ಕೆ ಉಂಡೆನಾಮ…ಉಂಡೂಹೋದ ಕೊಂಡೂಹೋದ…

ಮೊದಲ ಪತ್ನಿ ಇದ್ದರೂ ಎರಡನೇ ಮದುವೆ ಮಾಡಿಕೊಂಡು ವಂಚನೆ…50 ಲಕ್ಷಕ್ಕೆ ಉಂಡೆನಾಮ…ಉಂಡೂಹೋದ ಕೊಂಡೂಹೋದ…

ಮೈಸೂರು,ಏ4,Tv10 ಕನ್ನಡ

ಮೊದಲ ಪತ್ನಿ ಇದ್ದರೂ ವಿಚ್ಛೇದನ ನೀಡಿರುವುದಾಗಿ ಫೇಕ್ ಡಾಕ್ಯುಮೆಂಟ್ ಕ್ರಿಯೇಟ್ ಮಾಡಿ ಎರಡನೇ ಮದುವೆಯಾಗಿ ಪತ್ನಿಗೆ 50 ಲಕ್ಷ ರೂ ವಂಚಿಸಿದ ಭೂಪ ಪರಾರಿಯಾದ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಂಚನೆಗೆ ಒಳಗಾದ ಪತ್ನಿ ರೋಜಾ ಎಂಬುವರು ಪ್ರಕರಣ ದಾಖಲಿಸಿದ್ದಾರೆ.ವಂಚಿಸಿದ ಖದೀಮ ಶರತ್ ರಾಮ್ ಇದೀಗ ತಲೆಮರೆಸಿಕೊಂಡಿದ್ದಾನೆ.

ಕುವೆಂಪುನಗರದಲ್ಲಿ ಲೇಡೀಸ್ ಪಿಜಿ ನಡೆಸುತ್ತಿರುವ ರೋಜಾ ಮೊದಲ ಪತಿಯಿಂದ ಕಾರಣಾಂತರದಿಂದ ವಿಚ್ಛೇದನ ಪಡೆದಿದ್ದಾರೆ.ಮಗನಿಗೆ ಆಸರೆಗಾಗಿ ಎರಡನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿ ಡೈವೋರ್ಸ್ ಮ್ಯಾಟ್ರಿಮೋನಿ ಆಪ್ ಮೂಲಕ ಯತ್ನಿಸಿದ್ದಾರೆ.ಆಗ ಕೇರಳಾ ರಾಜ್ಯದ ತ್ರಿಶೂರ್ ನ ಶರತ್ ರಾಮ್ ಪರಿಚಯವಾಗಿ ಮದುವೆ ಮಾಡಿಕೊಳ್ಳಲು ಒಪ್ಪಿದ್ದಾನೆ.ಅದ್ದೂರಿ ಮದುವೆ ಬದಲು ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಇಬ್ಬರೂ ಒಪ್ಪಿದ್ದಾರೆ.ಈ ವೇಳೆ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವುದಾಗಿ ಶರತ್ ರಾಮ್ ನ್ಯಾಯಾಲಯದ ಆದೇಶದ ಕೊಟ್ಟಿದ್ದಾನೆ.ಇದನ್ನ ನಂಬಿದ ರೋಜಾ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಲ್ಲದೆ ಆತ್ನ ಜೊತೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾರೆ.ಮದುವೆ ವಿಚಾರ ಬಂದಾಗೆಲ್ಲ ಸಬೂಬುಗಳನ್ನ ಹೇಳಿಕೊಂಡು ಮುಂದಕ್ಕೆ ಹಾಕಿದ್ದಾನೆ.2022 ರಲ್ಲಿ ಪರಿಚಯವಾದ ನಂತರ ಶರತ್ ರಾಮ್ ಹಂತಹಂತವಾಗಿ 50 ಲಕ್ಷ ಹಣ ಪಡೆದಿದ್ದಾನೆ.ನಂತರ ಪಿಜಿ ಯಿಂದ ಬಂದ ಹಣಕ್ಕೂ ಪೀಡಿಸಿದ್ದಾನೆ.ಜೊತೆಗೆ ರೋಜಾ ಹೆಸರಲ್ಲಿ ಎರಡು ಕಂಪನಿಗಳನ್ನ ಆರಂಭಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿದ್ದಾನೆ.ಈತನ ವರ್ತನೆಯಿಂದ ಅನುಮಾನಗೊಂಡ ರೋಜಾ ಪರಿಶೀಲನೆ ನಡೆಸಿದಾಗ ವಿಚ್ಛೇದನ ಕಾಪಿ ಫೇಕ್ ಆಗಿರುವುದು ಖಚಿತವಾಗಿದೆ.ಅಲ್ಲದೆ ಕೇರಳಾದಲ್ಲಿ ವಾಸವಿರುವ ಮೊದಲ ಪತ್ನಿ ಜೊತೆ ಇನ್ನೂ ಸಂಪರ್ಕದಲ್ಲಿರುವುದು ಸಹ ಖಚಿತವಾಗಿದೆ.ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆಂದು ರೋಜಾ ಪ್ರಕರಣದಲ್ಲಿ ದಾಖಲಿಸಿದ್ದಾರೆ.ಈಗಾಗಲೇ ಈತನ ವಿರುದ್ದ ಹಲವಾರು ವಂಚನೆ ಪ್ರಕರಣಗಳಿರುವುದು ಸಹ ಬೆಳಕಿಗೆ ಬಂದಿರುವುದಾಗಿ ರೋಜಾ ಆರೋಪಿಸಿದ್ದಾರೆ.ಶರತ್ ರಾಮ್ ವಿರುದ್ದ ಪ್ರಕರಣ ದಾಖಲಿಸಿರುವ ರೋಜಾ ಇದೀಗ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ…

Spread the love

Related post

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ… ಮೈಸೂರು,ಮಾ8,Tv10 ಕನ್ನಡ ವಿಶ್ವಕಪ್…
ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ… ನಂಜನಗೂಡು,ಮಾ8,Tv10 ಕನ್ನಡ ನಂಜನಗೂಡು ಕಪಿಲಾ ನದಿ ಪಾತ್ರದ ಭಾರಿ ಮರಗಳ ಮಾರಣಹೋಮವಾಗಿದೆ.ಶ್ರೀಕಂಠೇಶ್ವರನ ದೇವಾಲಯ ಸಮೀಪ…
ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್ ವಾರ್ನಿಂಗ್…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್…

Leave a Reply

Your email address will not be published. Required fields are marked *