ನಿರ್ಲಕ್ಷ್ಯಕ್ಕೆ ಒಳಗಾದ ಕಳಲೆ ಲಕ್ಷ್ಮಿಕಾಂತ ದೇವಸ್ಥಾನ…ಶತಮಾನಗಳ ಇತಿಹಾಸವಿರುವ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…

ನಿರ್ಲಕ್ಷ್ಯಕ್ಕೆ ಒಳಗಾದ ಕಳಲೆ ಲಕ್ಷ್ಮಿಕಾಂತ ದೇವಸ್ಥಾನ…ಶತಮಾನಗಳ ಇತಿಹಾಸವಿರುವ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…

ನಂಜನಗೂಡು,ಜೂ23,Tv10 ಕನ್ನಡ

ಶಿಥಿಲಗೊಂಡ ದೇವಾಲಯದ ಕಟ್ಟಡ,ಗೋಪುರಗಳ ಮೇಲೆ ಬೆಳೆದು ನಿಂತ ಸಸ್ಯಗಳು,ಬಿರುಕು ಬಿಟ್ಟ ಕಟ್ಟಡ,ಭಿನ್ನವಾಗಿರುವ ದೇವರ ಮೂರ್ತಿಗಳು,ಮುರಿದು ಮೂಲೆ ಸೇರಿರುವ ರಥದ ಚಕ್ರಗಳು,ಮಣ್ಣು ಹಿಡಿದ ರಥ ಎಳೆಯವ ಹಗ್ಗಗಳು,ಭಕ್ತರಿಗೆ ರೋಗರುಜಿನ ಹರಡಲು ಸಜ್ಜಾಗಿರುವ ಕಸದ ರಾಶಿ ಹೀಗೆ ಒಂದಲ್ಲ ಹತ್ತಾರು ಸಮಸ್ಯೆಗಳನ್ನ ಹೊತ್ತು ನಿಂತಿದೆ ನಂಜನಗೂಡು ತಾಲೂಕಿನಲ್ಲಿರುವ ಕಳಲೆ ಗ್ರಾಮದ ಲಕ್ಷ್ಮಿಕಾಂತಸ್ವಾಮಿ ದೇವಾಲಯ

ಶತಮಾನಗಳ ಇತಿಹಾಸವಿರುವ ದೇವಾಲಯ ಅಭಿವೃದ್ದಿಯನ್ನೇ ಕಂಡಿಲ್ಲ.ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆಡಳಿತದ ಉಸ್ತುವಾರಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯದ ಆಡಳಿತ ಮಂಡಳಿಗೆ ಸೇರಿದೆ.ನಂಜನಗೂಡು ದೇವಾಲಯಕ್ಕೆ ಪ್ರತಿತಿಂಗಳು ಕೋಟಿ ರೂಪಾಯಿ ಆದಾಯವಿದೆ.ಹೀಗಿದ್ದರೂ ಲಕ್ಷ್ಮಿಕಾಂತಸ್ವಾಮಿ ದೇವಾಲಯದ ಅಭಿವೃದ್ದಿ ಶೂನ್ಯ.ಈ

ದೇವಾಲಯಕ್ಕೆ ಬಣ್ಣ ಹೊಡೆದು ದಶಕಗಳೇ ಉರುಳಿ ಹೋಗಿದೆ.ಸ್ವಚ್ಛತೆ ಮರೀಚಿಕೆಯಾಗಿದೆ.ಈ ದೇವಾಲಯಕ್ಕೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲೇ ಬರುತ್ತಾರೆ.ಹುಂಡಿಗೆ ಸಾಕಷ್ಟು ಹಣವೂ ಸೇರುತ್ತದೆ.ಆದ್ರೆ ಅಭಿವೃದ್ದಿ ಮಾತ್ರ ಕಂಡಿಲ್ಲ.

ಗಂಗಾ ಹೊಯ್ಸಳರ ಕಾಲದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಪುರಾತತ್ವ ಇಲಾಖೆ ಹೇಳುತ್ತದೆ.ಪ್ರತಿ ವರ್ಷ ದಸರಾ ವೇಳೆ ಈ ದೇವಾಲಯದಿಂದ ಅರಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ವೇಳೆ ತೀರ್ಥ ಪ್ರಸಾದ ತಲುಪುತ್ತದೆ.ಶತಮಾನಗಳ ಇತಿಹಾಸವಿರುವ ಈ ದೇವಾಲಯಕ್ಕೆ ಕಾಯಕಲ್ಪದ

ಅಗತ್ಯವಿದೆ.ದೇವಾಲಯ ದಿನೇ ದಿನೇ ಅಳಿವಿನ ಅಂಚಿಗೆ ತಲುಪುತ್ತಿದ್ದರೂ ಮುಜರಾಯಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ಅವಸಾನದ ಅಂಚಿಗೆ ತಲುಪಿ ಭಕ್ತರಿಂದ ಕಡೆಗಣಿಸುವ ಮುನ್ನ ದೇವಾಲಯದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಮುಂದಾಗಲಿ…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *