ಅಸಲಿ ಇದ್ದರೂ ನಕಲಿ ವ್ಯಕ್ತಿಗಳಿಂದ ಆಸ್ತಿ ಕಬಳಿಸಲು ಸಂಚು…ಐವರ ವಿರುದ್ದ ಹಿರಿಯ ಉಪನೊಂದಣಾಧಿಕಾರಿಗಳಿಂದ ಪ್ರಕರಣ ದಾಖಲು…

ಅಸಲಿ ಇದ್ದರೂ ನಕಲಿ ವ್ಯಕ್ತಿಗಳಿಂದ ಆಸ್ತಿ ಕಬಳಿಸಲು ಸಂಚು…ಐವರ ವಿರುದ್ದ ಹಿರಿಯ ಉಪನೊಂದಣಾಧಿಕಾರಿಗಳಿಂದ ಪ್ರಕರಣ ದಾಖಲು…

ಮೈಸೂರು,ಜು10,Tv10 ಕನ್ನಡ

ಅಸಲಿ ವ್ಯಕ್ತಿ ಇದ್ದರೂ ನಕಲಿ ವ್ಯಕ್ತಿಗಳು ಆಸ್ತಿಯನ್ನ ಕಬಳಿಸಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಮೈಸೂರು ಪೂರ್ವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.ಸಂಚು ರೂಪಿಸಿ ಸಿಕ್ಕಿಬಿದ್ದ ಐದು ಭೂಗಳ್ಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಉಪನೊಂದಣಾಧಿಕಾರಿ ಹೆಚ್.ಎಲ್.ನಾಗರಾಜು ರವರು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ನೆಹರೂ ನಗರದ ನಿವಾಸಿಗಳಾದ ಉಮೇರಾಖಾನಂ,ಸೈಯದ್ ಇರ್ಫಾನ್,ಸಲ್ಮಾ ಸುಲ್ತಾನ,ಅಕ್ರಮ್ ಹಾಗೂ ಜೋಹರ್ ಆಲಮ್ ವಿರುದ್ದ ಪ್ರಕರಣ ದಾಖಲಾಗಿದೆ.ಗಾಯಿತ್ರಿಪುರಂ ನಿವಾಸ ಉಮೇರಾಖಾನಂ ಎಂಬುವರ ಹೆಸರಿನಲ್ಲಿದ್ದ ಆಸ್ತಿ ಲಪಟಾಯಿಸಲು ಸಂಚು ರೂಪಿಸಿ ಸಿಕ್ಕಿಬಿದ್ದಿದ್ದಾರೆ.

ಮೈಸೂರು ತಾಲೂಕು ಕಸಬಾ ಹೋಬಳಿ ರಮ್ಮನಹಳ್ಳಿ ಗ್ರಾಮ ಸರ್ವೆ ನಂ.201/1 ರ 1 ಎಕ್ರೆ 7 ಗುಂಟೆ ಹಾಗೂ ರಮ್ಮನಹಳ್ಳಿ ಗ್ರಾಮ ಸರ್ವೆ ನಂ.210/4 ರ 1 ಎಕ್ರೆ 5 ಗುಂಟೆ ಜಮೀನಿನ ಮಾಲೀಕರು ಗಾಯಿತ್ರಿಪುರಂ ನ ಉಮೇರಾಖಾನಂ ರವರು.ಸದರಿ ಆಸ್ತಿಯನ್ನ ತಮ್ಮದೆಂದು ದಾಖಲೆ ಸೃಷ್ಟಿಸಿದ್ದ ನೆಹರೂ ನಗರದ ನಕಲಿ ಉಮೇರಾಖಾನಂ ರವರು ನಕಲಿ ಆಧಾರ್ ಕಾರ್ಡ್,ಪಾನ್ ಕಾರ್ಡ್ ಗಳನ್ನ ಸಲ್ಲಿಸಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ಮುದ್ರಾಂಕ ಶುಲ್ಕ ಹಾಗೂ ನೊಂದಣಿ ಶುಲ್ಕ ಪಾವತಿಸಿ ತಮ್ಮ ಮಗಳ ಹೆಸರಿನಲ್ಲಿ ಎರಡು ಪ್ರತ್ಯೇಕ ದಾನಪತ್ರ ಮಾಡಿ ನೊಂದಣಿ ಮಾಡಿಸಿದ್ದಾರೆ.ಈ ಬಗ್ಗೆ ದೂರು ಬಂದ ಆಧಾರದ ಮೇಲೆ ಹಿರಿಯ ಉಪನೊಂದಣಾಧಿಕಾರಿಗಳಾದ ನಾಗರಾಜು ರವರು ದಾಖಲೆಗಳನ್ನ ಪರಿಶೀಲಿಸಿದ್ದು ನಕಲಿ ಎಂದು ಖಚಿತವಾದ ಮೇಲೆ ಖುದ್ದಾಗಿ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಕಲಿ ವ್ಯಕ್ತಿ ಹಾಗೂ ಇದಕ್ಕೆ ಸಹಕರಿಸಿದವರು ಸೇರಿದಂತೆ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ….

Spread the love

Related post

ಸರ್ಕಾರಿ ಜಾಗದಲ್ಲಿ ಅಕ್ರಮ ಹೋಟೆಲ್ ನಿರ್ಮಾಣ ಆರೋಪ – ಜಿಲ್ಲಾಧಿಕಾರಿ ಗಮನ ಹರಿಸಲು ರೈತರ ಮನವಿ

ಸರ್ಕಾರಿ ಜಾಗದಲ್ಲಿ ಅಕ್ರಮ ಹೋಟೆಲ್ ನಿರ್ಮಾಣ ಆರೋಪ – ಜಿಲ್ಲಾಧಿಕಾರಿ ಗಮನ…

ಸರ್ಕಾರಿ ಜಾಗದಲ್ಲಿ ಅಕ್ರಮ ಹೋಟೆಲ್ ನಿರ್ಮಾಣ ಆರೋಪ – ಜಿಲ್ಲಾಧಿಕಾರಿ ಗಮನ ಹರಿಸಲು ರೈತರ ಮನವಿ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಸಮೀಪದ ಸರ್ವೇ ನಂ.218/1ಕ್ಕೆ ಸೇರಿದ ಸರ್ಕಾರಿ…
ಮೈಸೂರು, ಏಪ್ರಿಲ್ 13: ವಿಶ್ವಪ್ರಸಿದ್ಧ KRS Brindavan Gardens ನಲ್ಲಿ ಡಿಜಿಟಲ್ ಯುಗದಲ್ಲಿಯೂ “ಕ್ಯಾಶ್ ಮಾತ್ರ” ನಿಯಮ ಮುಂದುವರಿಯುತ್ತಿರುವುದು ಪ್ರವಾಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಮೈಸೂರು, ಏಪ್ರಿಲ್ 13: ವಿಶ್ವಪ್ರಸಿದ್ಧ KRS Brindavan Gardens ನಲ್ಲಿ ಡಿಜಿಟಲ್…

ಮೈಸೂರು, ಏಪ್ರಿಲ್ 13: ವಿಶ್ವಪ್ರಸಿದ್ಧ KRS Brindavan Gardens ನಲ್ಲಿ ಡಿಜಿಟಲ್ ಯುಗದಲ್ಲಿಯೂ “ಕ್ಯಾಶ್ ಮಾತ್ರ” ನಿಯಮ ಮುಂದುವರಿಯುತ್ತಿರುವುದು ಪ್ರವಾಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರವೇಶ ಟಿಕೆಟ್ ಪಡೆಯಲು ಬರುವವರಿಗೆ…
ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ ಬಯಲು…

ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ…

ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ ಬಯಲು… ನಂಜನಗೂಡು,ಏ12,Tv10 ಕನ್ನಡ ಯುವಕನೊಬ್ಬನನ್ನ ಕಿಡ್ನಾಪ್ ಮಾಡಿ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್ ಹಾಗೂ…

Leave a Reply

Your email address will not be published. Required fields are marked *