ನ್ಯಾಯಾಲಯವನ್ನೇ ಯಾಮಾರಿಸಿದ ಭೂಪ…ಒಂದೇ ಆಸ್ತಿ ಪ್ರತ್ಯೇಕ ಆಧಾರ್ ಕಾರ್ಡ್ ಬಳಸಿ ಆರೋಪಿಯ ಜಾಮೀನಿಗೆ ಬಳಕೆ…ಆಸ್ತಿ ಮಾಲೀಕನ ವಿರುದ್ದ FIR…

ನ್ಯಾಯಾಲಯವನ್ನೇ ಯಾಮಾರಿಸಿದ ಭೂಪ…ಒಂದೇ ಆಸ್ತಿ ಪ್ರತ್ಯೇಕ ಆಧಾರ್ ಕಾರ್ಡ್ ಬಳಸಿ ಆರೋಪಿಯ ಜಾಮೀನಿಗೆ ಬಳಕೆ…ಆಸ್ತಿ ಮಾಲೀಕನ ವಿರುದ್ದ FIR…

ಮೈಸೂರು,ಜು22,Tv10 ಕನ್ನಡ

ಒಂದೇ ಆಸ್ತಿಯನ್ನ ಬೇರೆ ಬೇರೆ ಆಧಾರ್ ಕಾರ್ಡ್ ಗಳನ್ನ ಬಳಸಿ ವಿವಿದ ನ್ಯಾಯಾಲಯಗಳಲ್ಲಿ ಆರೋಪಿಗಳ ಜಾಮೀನಿಗೆ ಬಳಸಿದ ಆರೋಪದ ಮೇಲೆ ಆಸ್ತಿ ಮಾಲೀಕನ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಹೆಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ವೀರಭದ್ರಶೆಟ್ಟಿ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ನ್ಯಾಯಾಲಯದ ಸಿಬ್ಬಂದಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದ ಆರೋಪಿ ಅಪ್ಸರ್ ಎಂಬಾತನಿಗೆ ಜಾಮೀನು ನೀಡಲು ವೀರಭದ್ರಶೆಟ್ಟಿ ತಮ್ಮ ಆಸ್ತಿಯನ್ನ ಒತ್ತೆಯಾಗಿ ಆಧಾರ್ ಕಾರ್ಡ್ ಸಮೇತ ಒದಗಿಸಿದ್ದರು.ಆದರೆ ಇದೇ ಆಸ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಗಳನ್ಮ ಬಳಸಿ ಬೇರೆ ಬೇರೆ ನ್ಯಾಯಾಲಯಗಳಲ್ಲೂ ಜಾಮೀನು ನೀಡಲು ಬಳಸಿರುವುದು ಕಂಡು ಬಂದ ಹಿನ್ನಲೆ ನ್ಯಾಯಾಧೀಶರ ಆದೇಶದಂತೆ ವಂಚನೆ ಪ್ರಕರಣ ದಾಖಲಿಸಲಾಗಿದೆ…

Spread the love

Related post

ಸಿಡಿಮದ್ದು ಸ್ಪೋಟ…ಮಹಿಳೆಗೆ ಗಾಯ…ಕವರ್ ಓಪನ್ ಮಾಡಿದಾಗ ಘಟನೆ…

ಸಿಡಿಮದ್ದು ಸ್ಪೋಟ…ಮಹಿಳೆಗೆ ಗಾಯ…ಕವರ್ ಓಪನ್ ಮಾಡಿದಾಗ ಘಟನೆ…

ಹುಣಸೂರು,ಜು25,Tv10 ಕನ್ನಡ ಮನೆ ಬಳಿ ದೊರೆತ ಕವರ್ ಒಂದು ಮಹಿಳೆಯೊಬ್ಬಳನ್ನ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ.ಕವರ್ ಓಪನ್ ಮಾಡಿದಾಗ ಸ್ಪೋಟಗೊಂಡು ಮಹಿಳೆಗೆ ಗಂಭೀರ ಗಾಯವಾಗಿದೆ.ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹುಳಿಯಾಳು…
ಮಧ್ಯರಾತ್ರಿ ಹುಟ್ಟುಹಬ್ಬ ಆಚರಣೆ…ರಸ್ತೆಯಲ್ಲಿ ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿದ ಯುವಕರು ಪೊಲೀಸರ ವಶಕ್ಕೆ…

ಮಧ್ಯರಾತ್ರಿ ಹುಟ್ಟುಹಬ್ಬ ಆಚರಣೆ…ರಸ್ತೆಯಲ್ಲಿ ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿದ ಯುವಕರು…

ಮೈಸೂರು,ಜು24,Tv10 ಕನ್ನಡ ಮಧ್ಯರಾತ್ರಿ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ ಯುವಕರನ್ಮ ಕೆ.ಆರ್.ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಮೈಸೂರಿನಬಸವೇಶ್ವರ ರಸ್ತೆಯ 10ನೇ ಕ್ರಾಸ್…
ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ…

ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ…

ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ… ಮೈಸೂರು,ಜು24,Tv10 ಕನ್ನಡ ಮೈಸೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳ 37 ಪಿಎಸ್ಸೈ ಗಳಿಗೆ ವರ್ಗಾವಣೆ ಮಾಡಲಾಗಿದೆ.ನಗರ…

Leave a Reply

Your email address will not be published. Required fields are marked *