ಕುಡಿಯಲು ಹಣ ನೀಡದ ಯುವಕನ ತಲೆ ಕೂದಲು ಕತ್ತರಿಸಿ,ಬಸ್ಕಿ ಹೊಡೆಸಿ,ಕೊಲೆ ಬೆದರಿಕೆ…ಮೂವರ ವಿರುದ್ದ FIR…

ಕುಡಿಯಲು ಹಣ ನೀಡದ ಯುವಕನ ತಲೆ ಕೂದಲು ಕತ್ತರಿಸಿ,ಬಸ್ಕಿ ಹೊಡೆಸಿ,ಕೊಲೆ ಬೆದರಿಕೆ…ಮೂವರ ವಿರುದ್ದ FIR…

  • Crime
  • September 2, 2025
  • No Comment
  • 326

ಕುಡಿಯಲು ಹಣ ನೀಡದ ಯುವಕನ ತಲೆ ಕೂದಲು ಕತ್ತರಿಸಿ,ಬಸ್ಕಿ ಹೊಡೆಸಿ,ಕೊಲೆ ಬೆದರಿಕೆ…ಮೂವರ ವಿರುದ್ದ FIR…

ಮೈಸೂರು,ಸೆ2,Tv10 ಕನ್ನಡ

ಕುಡಿಯಲು ಹಣ ನೀಡದ ಯುವಕನ ಮೇಲೆ ಮೂವರ ತಂಡ ದಾಳಿ ನಡೆಸಿ ತಲೆ ಕೂದಲು ಕಟ್ ಮಾಡಿ ಬಸ್ಕಿ ಹೊಡೆಸಿ ಬಲವಂತವಾಗಿ ಜೇಬಿನಿಂದ ಒಂದು ಸಾವಿರ ಕಿತ್ತು ಕೊಲೆ ಬೆದರಿಕೆ ಹಾಕಿ ಪರಾರಿಯಾದ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಸ್ಜಿದ್ ಬ್ಲಾಕ್ ನ ಮೊಹಮದ್ ಸಾಕ್ಲೇನ್ ಹಣ ಕಳೆದುಕೊಂಡ ಯುವಕ.ನವಾಜ್,ಅಬ್ರಾರ್ ಹಾಗೂ ಸೇಠು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.

ಹೂವು ಕಟ್ಟುವ ಕೆಲಸ ಮಾಡುವ ಮಹಮದ್ ಸಾಕ್ಲೇನ್ ಕೆಲಸ ಮುಗಿಸಿ ರಾತ್ರಿ ಸುಮಾರು 11.30 ರಲ್ಲಿ ಮನೆಗೆ ತೆರಳುತ್ತಿದ್ದಾಗ ನವಾಜ್,ಅಬ್ರಾರ್ ಹಾಗೂ ಸೇಠ ಅಡ್ಡಗಟ್ಟಿ ಕುಡಿಯಲು ಹಣ ನೀಡುವಂತೆ ಧಂಕಿ ಹಾಕಿದ್ದಾರೆ.ಹಣ ನೀಡಲು ನಿರಾಕರಿಸಿದಾಗ ಇಬ್ಬರು ಮಹಮದ್ ಸಾಕ್ಲೇನ್ ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.ಮತ್ತೊಬ್ಬ ಬ್ಲೇಡ್ ತೆಗೆದು ಕೂದಲನ್ನ ಕಟ್ ಮಾಡಿ ನಂತರ ಬಲವಂತವಾಗಿ ಬಸ್ಕಿ ಹೊಡೆಸಿ ಜೇಬಿನಲ್ಲಿದ್ದ ಒಂದು ಸಾವಿರ ಹಣವನ್ನ ಕಸಿದು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಸಿ ಹಿಗ್ಗಮುಗ್ಗಾ ಥಳಿಸಿ ಪರಾರಿಯಾಗಿದ್ದಾರೆ.ಮೂವರು ಖದೀಮರಿಂದ ಬಿಡಿಸಿಕೊಂಡ ಮಹಮದ್ ಸಕ್ಲೇನ್ ಮನೆಗೆ ಬಂದು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಸಂಪೂರ್ಣ ಕೂದಲನ್ನ ತೆಗೆಸಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *