ಜಾಮೀನು ನೀಡಲು ಬಂದ ವ್ಯಕ್ತಿ ಮೇಲೆ ಹಲ್ಲೆ…ನ್ಯಾಯಾಲಯದ ಆವರಣದಲ್ಲೇ ಘಟನೆ…ಇಬ್ಬರು ವಕೀಲರು ಸೇರಿದಂತೆ ನಾಲ್ವರ ವಿರುದ್ದ FIR…

ಜಾಮೀನು ನೀಡಲು ಬಂದ ವ್ಯಕ್ತಿ ಮೇಲೆ ಹಲ್ಲೆ…ನ್ಯಾಯಾಲಯದ ಆವರಣದಲ್ಲೇ ಘಟನೆ…ಇಬ್ಬರು ವಕೀಲರು ಸೇರಿದಂತೆ ನಾಲ್ವರ ವಿರುದ್ದ FIR…

  • Crime
  • September 2, 2025
  • No Comment
  • 137

ಜಾಮೀನು ನೀಡಲು ಬಂದ ವ್ಯಕ್ತಿ ಮೇಲೆ ಹಲ್ಲೆ…ನ್ಯಾಯಾಲಯದ ಆವರಣದಲ್ಲೇ ಘಟನೆ…ಇಬ್ಬರು ವಕೀಲರು ಸೇರಿದಂತೆ ನಾಲ್ವರ ವಿರುದ್ದ FIR…

ಮೈಸೂರು,ಸೆ2,Tv10 ಕನ್ನಡ

ಜಾಮೀನು ನೀಡಲು ಬಂದ ವ್ಯಕ್ತಿ ಮೇಲೆ ನ್ಯಾಯಾಲಯದ ಆವರಣದಲ್ಲೇ ಹಲ್ಲೆ ನಡೆಸಿದ ಘಟನೆ ಕುರಿತಂತೆ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗದ್ದಿಗೆ ಬಳಿಯ ಮರಯ್ಯನಹುಂಡಿ ನಿವಾಸಿ ಕೆಂಡಗಣ್ಣಪ್ಪ ಎಂಬುವರೇ ಹಲ್ಲೆಗೆ ಒಳಗಾದವರು.ವಕೀಲರಾದ ರವಿ,ಸುರೇಶ್ ಹಾಗೂ ಇವರ ತಂದೆ ಶಿವಣ್ಣ ಹಾಗೂ ಸಹೋದರ ಕೆಂಡಗಣ್ಣ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.

ಮರಯ್ಯನಹುಂಡಿ ಗ್ರಾಮದ ನಾಗರಾಜ್ ಎಂಬುವರಿಗೆ ಜಾಮೀನು ನೀಡಲು ಕೆಂಡಗಣ್ಣಪ್ಪ ಹೊಸನ್ಯಾಯಾಲಯಕ್ಕೆ ಬಂದಿದ್ದರು.2 ನೇ ಜೆಎಂಎಫ್ ಸಿ ಬಾಗಿಲ ಬಳಿ ಜಯಣ್ಣ ಎಂಬುವರ ಜೊತೆ ನಿಂತಿದ್ದಾಗ ರವಿ ಹಾಗೂ ಸುರೇಶ್ ದಿಟ್ಟಿಸಿ ನೋಡಿದ್ದಾರೆ.ನಂತರ ಆವರಣದಲ್ಲೇ ಜೆರಾಕ್ಸ್ ಮಾಡುವ ಸ್ಥಳಕ್ಕೆ ಬಂದಾಗ ಎದುರಾದ ರವಿ ಹಾಗೂ ಸುರೇಶ್ ಜಾಮೀನು ನೀಡದಂತೆ ಒತ್ತಾಯಿಸಿದ್ದಲ್ಲದೆ ಏಕಾಏಕಿ ಕೆಂಡಗಣ್ಣಪ್ಪ ರವರ ಮೇಲೆ ಹಲ್ಲೆ ನಡೆಸಿದ್ದಾರೆ.ನಾವು ಲಾಯರ್ ಗಳು ಇದರಿಂದ ಹೊರಬರುವುದು ಗೊತ್ತು ಎಂದು ಧಂಕಿ ಹಾಕಿ ಹಲ್ಲೆ ನಡೆಸಿದ್ದಾರೆಂದು ಕೆಂಡಗಣ್ಣಪ್ಪ ದೂರಿನಲ್ಲಿ ದಾಖಲಿಸಿದ್ದಾರೆ.ಹಲ್ಲೆಗೆ ರವಿ ಹಾಗೂ ಸುರೇಶ್ ತಂದೆ ಶಿವಣ್ಣ ಹಾಗೂ ಸಹೋದರ ಕೆಂಡಗಣ್ಣ ಸಹಕರಿಸಿರುವುದಾಗಿ ಆರೋಪಿಸಿರುವ ಕೆಂಡಗಣ್ಣಪ್ಪ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *