50 ಸಾವಿರ ಪೌಂಡ್ ಗಿಫ್ಟ್ ಆಮಿಷ…10.90 ಲಕ್ಷ ಕಳೆದುಕೊಂಡ ಯೋಗ ಶಿಕ್ಷಕಿ…

50 ಸಾವಿರ ಪೌಂಡ್ ಗಿಫ್ಟ್ ಆಮಿಷ…10.90 ಲಕ್ಷ ಕಳೆದುಕೊಂಡ ಯೋಗ ಶಿಕ್ಷಕಿ…

ಮೈಸೂರು,ಸೆ27,Tv10 ಕನ್ನಡ

50 ಸಾವಿರ ಪೌಂಡ್ ಗಿಫ್ಟ್ ಕಳಿಸುವುದಾಗಿ ಆಮಿಷ ಒಡ್ಡಿದ ಇಂಗ್ಲೆಂಡ್ ಶಿಷ್ಯ ಯೋಗ ಗುರುವಿಗೆ 10.90 ಲಕ್ಷಕ್ಕೆ ಉಂಡೆನಾಮ ಹಾಕಿದ್ದಾನೆ.ಮೈಸೂರಿನ ವಿವೇಕಾನಂದ ನಗರದ ನಿವಾಸಿ ಯೋಗಶಿಕ್ಷಕಿಯಾಗಿರುವ ಸವಿತಾ ಕುಮಾರಿ ಹಣ ಕಳೆದುಕೊಂಡವರು.ಯೋಗತರಬೇತಿ ಬಗ್ಗೆ ಸುನಿತಾ ಕುಮಾರಿ ರವರು YOU TUBE,FASE BOOK ನಲ್ಲಿ ಜಾಹಿರಾತು ನೀಡಿದ್ದಾರೆ.ಎರಡು ತಿಂಗಳ ತರಬೇತಿ ಪಡೆಯುವುದಾಗಿ ಇಂಗ್ಲೆಂಡ್ ನ TOMMY ALISON ಎಂಬ ವ್ಯಕ್ತಿ ಸಂಪರ್ಕಿಸಿ ಎರಡು ತಿಂಗಳ ತರಬೇತಿಗಾಗಿ ಸೇರ್ಪಡೆಯಾಗಿದ್ದಾನೆ.ತರಬೇತಿ ಶುಲ್ಕ ಕೇಳಿದಾಗ ತಾನು ಜರ್ಮಿನಿ ಪ್ರಜೆಯಾಗಿರುವುದರಿಂದ ಬೇರೆ ದೇಶದ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಗಿಫ್ಟ್ ಹಾಗೂ 50 ಸಾವಿರ ಪೌಂಡ್ ಕಳಿಸುತ್ತೇನೆ ಕಸ್ಟಂ ನಲ್ಲಿ ಸ್ವಲ್ಪ ಹಣ ಪಾವತಿಸಿ ಉಳಿದ ಹಣ ಪಡೆದುಕೊಳ್ಳುವಂತೆ ನಂಬಿಸಿದ್ದಾನೆ.ಹಣ ಪಡೆಯಲು ತೊಂದರೆ ಆದ್ರೆ ತಾನೇ ಇಂಡಿಯಾಗೆ ಬರುವುದಾಗಿ ತಿಳಿಸಿದ್ದಾನೆ.ಈತನ ಮಾತುಗಳನ್ನ ನಂಬಿದ ಸುನಿತಾ ಕುಮಾರಿ ಹಂತ ಹಂತವಾಗಿ 10.90 ಲಕ್ಷ ಹಣ ವರ್ಗಾಯಿಸಿದ್ದಾರೆ.ಮತ್ತಷ್ಟು ಹಣದ ಬೇಡಿಕೆ ಇಟ್ಟಾಗ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ತಾವು ಮೋಸ ಹೋಗಿರುವುದು ಖಚಿತವಾಗಿದೆ.ಈ ಬಗ್ಗೆ ಸುನಿತಾ ಕುಮಾರಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಗೋಕುಲಂ ನ ಕಿರಣ್ ಎಂಬುವರು ಆನ್ ಲೈನ್ ಟ್ರೇಡಿಂಗ್ ಕುರಿತಂತೆ ಇನ್ಸ್ಟಾಗ್ರಾಂ ನಲ್ಲಿ ಬಂದ ಜಾಹಿರಾತು ನಂಬಿ ಅವರು ನೀಡಿದ ಸಲಹೆ ಮೇರೆಗೆ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಂಡು ಟ್ರೇಡಿಂಗ್ ಮಾಡಿದ್ದಾರೆ.ಹಂತಹಂತವಾಗಿ 29.40 ಲಕ್ಷ ಹೂಡಿಕೆ ಮಾಡಿ ಕೊನೆಗೆ ತಾವು ಮೋಸ ಹೋಗಿರುವುದಾಗಿ ಖಚಿತಪಡಿಸಿಕೊಂಡು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಟಿ.ಕೆ.ಲೇಔಟ್ ನ ಬೀನಾ ಎಂಬುವರು ಮೂವಿಗಳಿಗೆ ರಿವ್ಯೂ ಹಾಗೂ ರೇಟಿಂಗ್ಸ್ ಕೊಡುವ ಆಮಿಷಕ್ಕೆ ಸಿಲುಕಿ 8,08,000/- ಹಣ ಕಳೆದುಕೊಂಡಿದ್ದಾರೆ.ಟೆಲಿಗ್ರಾಂ ಗ್ರೂಪ್ ಗೆ ಸೇರಿಸಿಕೊಂಡು ಆರಂಭದಲ್ಲಿ ರಿವ್ಯೂಗಳಿಗೆ 6000/- ನೀಡಿದ್ದಾರೆ.ಇದನ್ನ ನಂಬಿದ ಬೀನಾ ರವರು ಹಂತಹಂತವಾಗಿ 8 ಲಕ್ಷ ಹಣ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿದ್ದಾರೆ.ಈ ಸಂಭಂಧ ಬೀನಾ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು… ಮಂಡ್ಯ,ಜ21,Tv10 ಕನ್ನಡಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.ಆನೆಗೋಳ ಗ್ರಾಮದ ರೈತ…
ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ… ಮೈಸೂರು,ಜ19,Tv10 ಕನ್ನಡ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್…

Leave a Reply

Your email address will not be published. Required fields are marked *