ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ ಆದೇಶ…RTI ಕಾರ್ಯಕರ್ತ ನಾಗೇಂದ್ರ ನೀಡಿದ ದೂರು…

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ ಆದೇಶ…RTI ಕಾರ್ಯಕರ್ತ ನಾಗೇಂದ್ರ ನೀಡಿದ ದೂರು…

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ ಆದೇಶ…RTI ಕಾರ್ಯಕರ್ತ ನಾಗೇಂದ್ರ ನೀಡಿದ ದೂರು…

ಮೈಸೂರು,ಅ27,Tv10 ಕನ್ನಡ

ಕ್ರಮಬದ್ದವಲ್ಲದ ವ್ಯಕ್ತಿಗಳಿಗೆ ಅಕ್ರಮವಾಗಿ ಕ್ರಯಪತ್ರ ನೀಡಿದ ಆರೋಪ ಸಾಬೀತಾದ ಹಿನ್ನಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(MDA) ದ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ರವರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಾದ ಲತಾ ರವರ ಆದೇಶದ ಮೇರೆಗೆ ಮುಡಾ ಆಯುಕ್ತರು ಸಸ್ಪೆಂಡ್ ಆರ್ಡರ್ ಹೊರಡಿಸಿದ್ದಾರೆ.ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ನೀಡಿದ ದೂರಿನ ಅನ್ವಯದಂತೆ ದಾಖಲೆಗಳನ್ನ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.

ಮೈಸೂರಿನ ಗೋಕುಲಂ ಬಡಾವಣೆ 3 ನೇ ಹಂತ ಮನೆ ಸಂಖ್ಯೆ 867 ಕ್ಕೆ 02-04-1982 ರಂದು ಲಿಲಿಯನ್ ಶಾರದಾ ಜೋಸೆಫ್ w/o ಅನ್ನಿ ಜೋಸೆಫ್ ಎಂಬುವರಿಗೆ ಮುಡಾ ದಿಂದ 30*40 ವಿಸ್ತೀರ್ಣ ನಿವೇಶನ ಮಂಜೂರಾಗಿದೆ.ಇದಕ್ಕೆ ಕರಾರು ಪತ್ರ ಸಹ ನೀಡಲಾಗಿದೆ.03-09-1983 ರಲ್ಲಿ ಲಿಲಿಯನ್ ಜೋಸೆಫ್ ಮರಣ ಹೊಂದಿರುತ್ತಾರೆ.06-04-2024 ರ ವರೆಗೂ ಸದರಿ ಸ್ವತ್ತು ಯಾರಿಗೂ ವರ್ಗಾವಣೆ ಆಗಿರುವುದಿಲ್ಲ.ಆದರೆ 26-03-2024 ರಂದು ಕ್ರಮಬದ್ದ ವಾರಸುದಾರರಲ್ಲದವರಿಗೆ ಅಂದರೆ ನೆವಿಲ್ ಮಾರ್ಕಸ್ ಜೋಸೆಫ್ ರವರ ಹೆಸರಿಗೆ ಕ್ರಮಬದ್ದ ವಂಶವೃಕ್ಷ ಪಡೆಯದೆ ಪೌತಿಖಾತೆ ವರ್ಗಾವಣೆ ಮಾಡಿ ಜೊತೆಗೆ ತುಂಡು ಜಾಗವನ್ನೂ ಸಹ ಮಂಜೂರು ಮಾಡಿ ಹಕ್ಕುಪತ್ರ ನೀಡಲಾಗಿದೆ.ಈ ಅಕ್ರಮದ ಬಗ್ಗೆ ಆರ್.ಟಿ.ಐ.ಕಾರ್ಯಕರ್ತರಾದ ಬಿ.ಎನ್.ನಾಗೇಂದ್ರ ರವರು ದಾಖಲೆಗಳನ್ನ ಪಡೆದು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿ ದೂರು ನೀಡಿದ್ದರು.

ಈ ಸಂಬಂಧ ಪರಿಶೀಲನೆ ನಡೆಸಿದಾಗ ಮುಡಾದ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಹಾಗೂ ವ್ಯವಸ್ಥಾಪಕ ಸೋಮಸುಂದ್ರು ರವರ ಕೈವಾಡ ಇರುವುದು ಬೆಳಕಿಗೆ ಬಂದಿದೆ.ಮುಡಾದಲ್ಲಿ ಯಾವುದೇ ಕ್ರಯಪತ್ರ ನೀಡುವ ಹಾಗೂ ಅನುಮೋದಿಸುವ ಅಧಿಕಾರ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿ ಆದೇಶವಾಗಿರುತ್ತದೆ.ಆದರೆ ಈ ಇಬ್ಬರು ಅಧಿಕಾರಿಗಳು ಕಾರ್ಯದರ್ಶಿಯವರಿಂದ ಅನುಮೋದನೆ ಪಡೆಯಲು ಕಡತಗಳನ್ನು ಮಂಡಿಸದೆ ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ಮಾಡಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.ಈ ಅಕ್ರಮದ ಹಿನ್ನಲೆ ಈಗಾಗಲೇ ವ್ಯವಸ್ಥಾಪಕರಾದ ಸೋಮಸುಂದ್ರ ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ.ವಿಶೇಷ ತಹಸೀಲ್ದಾರ್ ವಿರುದ್ದವೂ ಕ್ರಮ ಕೈಗೊಳ್ಳಬೇಕೆಂದು ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಸರ್ಕಾರಕ್ಕೆ ಮಾಡಿದ ಮನವಿಗೆ ಸ್ಪಂದನೆ ದೊರೆತಿದೆ.ಮುಡಾ ಕಾರ್ಯದರ್ಶಿಗಳು ಅಕ್ರಮ ನಡೆದಿರುವುದಾಗಿ ವರದಿಯನ್ನೂ ಸಹ ನೀಡಿದ್ದಾರೆ.

ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರ ಆದೇಶದಂತೆ ಮುಡಾ (MDA) ಆಯುಕ್ತರು ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ರವರನ್ನ ಅಮಾನತ್ತಿನಲ್ಲಿ ಇಡುವಂತೆ ಆದೇಶ ಹೊರಡಿಸಿದ್ದಾರೆ…

Spread the love

Related post

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಶುರುವಾಯ್ತು ಅಕ್ರಮ ಸಂಬಂಧ…ಪತಿ ಕೊಲೆಯಲ್ಲಿ ಅಂತ್ಯ…ನಿಗೂಢ ಕೊಲೆ ರಹಸ್ಯ ಭೇಧಿಸಿದ ನಂಜನಗೂಡು ಪೊಲೀಸರು…

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ…

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಶುರುವಾಯ್ತು ಅಕ್ರಮ ಸಂಬಂಧ…ಪತಿ ಕೊಲೆಯಲ್ಲಿ ಅಂತ್ಯ…ನಿಗೂಢ ಕೊಲೆ ರಹಸ್ಯ ಭೇಧಿಸಿದ ನಂಜನಗೂಡು ಪೊಲೀಸರು… ನಂಜನಗೂಡು,ಏ9,Tv10 ಕನ್ನಡ…
ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ: ಡಿಸಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್.

ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ: ಡಿಸಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್.

ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ: ಡಿಸಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್. ಮೈಸೂರು, ಏಪ್ರಿಲ್ 8: ಮೈಸೂರು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಕ್ಸ್‌ಕ್ಯೂಷನ್ ಕೇಸ್…
ಅಮೆರಿಕದ ವಿವಿ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ ನೇಮಕ…ಕೆಎಂಪಿಕೆ ಟ್ರಸ್ಟ್ ನಿಂದ ಸನ್ಮಾನ..

ಅಮೆರಿಕದ ವಿವಿ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ…

ಅಮೆರಿಕದ ವಿವಿ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ ನೇಮಕ…ಕೆಎಂಪಿಕೆ ಟ್ರಸ್ಟ್ ನಿಂದ ಸನ್ಮಾನ.. ಮೈಸೂರು,ಏ8,Tv10 ಕನ್ನಡ ಖ್ಯಾತ ಯೋಗ ಗುರು ಡಾಕ್ಟರ್ ರಾಘವೇಂದ್ರ ಪೈ…

Leave a Reply

Your email address will not be published. Required fields are marked *