ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಪ್ರಕರಣ…ವಹಿವಾಟಿಗೆ ಬ್ರೇಕ್…ವಲಯ ಆಯುಕ್ತರಿಗೆ MAD ಆಯುಕ್ತ ಸೂಚನೆ…

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಪ್ರಕರಣ…ವಹಿವಾಟಿಗೆ ಬ್ರೇಕ್…ವಲಯ ಆಯುಕ್ತರಿಗೆ MAD ಆಯುಕ್ತ ಸೂಚನೆ…

ಮೈಸೂರು,ನ20,Tv10 ಕನ್ನಡ

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಹಿವಾಟು ನಡೆಸದಂತೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ವಲಯ ಕಚೇರಿ 4 ರ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಅಧಿಕಾರಿ ಹಾಗೂ ಓರ್ವ ನೌಕರ ಅಮಾನತಾಗಿದ್ದಾರೆ.ಸಸ್ಪೆಂಡ್ ಆದವರು ತಡೆಯಾಜ್ಞೆ ತಂದಿದ್ದಾರೆ.ಆದರೆ ಪ್ರಕರಣ ಸಂಬಂಧ ಇಲಾಖೆ ತನಿಖೆ ನಡೆಯುತ್ತಿದೆ.ತನಿಖೆ ಅಂತಿಮವಾಗುವವರೆಗೆ ಆಸ್ತಿಗೆ ಸಂಬಂಧ ಪಟ್ಟಂತೆ ಯಾವುದೇ ವಹಿವಾಟು ನಡೆಸದಂತೆ ಸೂಚನೆ ನೀಡಿದ್ದಾರೆ.

ಗೋಕುಲಂ 3 ನೇ ಹಂತ ನಿವೇಶನ ಸಂಖ್ಯೆ 867 ಲಿಲಿಯನ್ ಶಾರದಾ ಜೋಸೆಫ್ ಎಂಬುವರಿಗೆ ಮುಡಾದಿಂದ 2-1-1982 ರಲ್ಲಿ ಮಂಜೂರಾಗಿದೆ.3-12-1982 ರಲ್ಲಿ ಸ್ವಾಧೀನ ಪತ್ರ ನೀಡಲಾಗಿದೆ.3-09-1983 ರಲ್ಲಿ ಲಿಲಿಯನ್ ಶಾರದಾ ಜೋಸೆಫ್ ಮೃತಪಟ್ಟಿದ್ದಾರೆ.22-05-2008 ರಲ್ಲಿ ಪೌತಿದಾರರ ಕುಟುಂಬ ಜೀವಿತ ಪತ್ರದಂತೆ ಹಾಗೂ ನೊಂದಾಯಿತ ವಿಭಾಗ ಪತ್ರದಂತೆ ನವಿಲ್ ಮಾರ್ಕಸ್ ಜೋಸೆಫ್ ಎಂಬುವರಿಗೆ ಸೇರಿದೆ ಎಂದು ದಾಖಲೆಗಳನ್ನ ಸೃಷ್ಟಿಸಿ 06-04-2024 ರಂದು ವರ್ಗಾವಣೆ ಮಾಡಿ ಇದಕ್ಕೆ ಹೊಂದಿಕೊಂಡಂತಿರುವ ತುಂಡು ಜಾಗವನ್ನೂ ಸೇರಿ ಕ್ರಯಪತ್ರ ಮಾಡಿಕೊಡಲಾಗಿದೆ.ಸದರಿ ಕ್ರಯಪತ್ರ ನಿಯಮಬಾಹಿರವಾಗಿದೆ ಎಂದು ಆರೋಪಿಸಿ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ಸರ್ಕಾರಕ್ಕೆ ದೂರು ನೀಡಿದ್ದರು.ದೂರಿನ ಅನ್ವಯ ದಾಖಲೆಗಳನ್ನ ಪರಿಶೀಲಿಸಿದ ಅಧಿಕಾರಿಗಳು ಅಕ್ರಮ ಬೆಳಕಿಗೆ ಬಂದ ಹಿನ್ನಲೆ
MDA ವಿಶೇಷ ತಹಸೀಲ್ದಾರ್ ರಾಜಶೇಖರ್ ಹಾಗೂ ವ್ಯವಸ್ಥಾಪಕ ಸೋಮುಸುಂದ್ರ ಇಬ್ಬರನ್ನ ಸಸ್ಪೆಂಡ್ ಮಾಡಿತ್ತು.ಅಮಾನತನ್ನ ಪ್ರಶ್ನಿಸಿ ಸದರಿಯವರು ತಡೆಯಾಜ್ಞೆ ತಂದಿದ್ದಾರೆ.ಆದರೆ ಇನ್ನೂ ಇಲಾಖಾ ತೆನಿಖೆ ನಡೆಯುತ್ತಿದೆ.ತೆನಿಖೆ ಪೂರ್ಣವಾಗುವವರೆಗೆ ಸದರಿ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಹಿವಾಟು ನಡೆಸಬಾರದೆಂದು ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಕೆ.ಆರ್.ರಕ್ಷಿತ್ ರವರು ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ಆಯುಕ್ತರಿಗೆ ಪತ್ರ ಬರೆದಿದ್ದಾರೆ.ಬಿ.ಎನ್.ನಾಗೇಂದ್ರ ರವರು ನೀಡಿದ ದೂರು ಗಂಭೀರ ಪರಿಣಾಮ ಬೀರಿದೆ…

Spread the love

Related post

CAR ಮುಖ್ಯಪೇದೆ ಚೆನ್ನಕೇಶವ ಸಸ್ಪೆಂಡ್…ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ ವಂಚನೆ ಹಿನ್ನಲೆ ಅಮಾನತು…

CAR ಮುಖ್ಯಪೇದೆ ಚೆನ್ನಕೇಶವ ಸಸ್ಪೆಂಡ್…ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ ವಂಚನೆ ಹಿನ್ನಲೆ…

CAR ಮುಖ್ಯಪೇದೆ ಚೆನ್ನಕೇಶವ ಸಸ್ಪೆಂಡ್…ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ ವಂಚನೆ ಹಿನ್ನಲೆ ಅಮಾನತು… ಮೈಸೂರು,ನ20,Tv10 ಕನ್ನಡ ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ 7.45 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ…
ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಗೆ ಟಿಶ್ಯೂ ಪೇಪರ್ ಅಂಟಿಸಿ ಸಿಕ್ಕಿಬಿದ್ದ ಭೂಪ…

ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಗೆ ಟಿಶ್ಯೂ ಪೇಪರ್ ಅಂಟಿಸಿ ಸಿಕ್ಕಿಬಿದ್ದ…

ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಗೆ ಟಿಶ್ಯೂ ಪೇಪರ್ ಅಂಟಿಸಿ ಸಿಕ್ಕಿಬಿದ್ದ ಭೂಪ… ಮೈಸೂರು,ನ20,Tv10 ಕನ್ನಡ ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಮೇಲೆ ಟಿಶ್ಯೂ ಪೇಪರ್ ಅಂಟಿಸಿ ಬೈಕ್…
ರೌಡಿಶೀಟರ್ ಮಣಿಕಂಠರಾಜ್ ಗೌಡ ಗಡೀಪಾರು…ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ…

ರೌಡಿಶೀಟರ್ ಮಣಿಕಂಠರಾಜ್ ಗೌಡ ಗಡೀಪಾರು…ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ…

ರೌಡಿಶೀಟರ್ ಮಣಿಕಂಠರಾಜ್ ಗೌಡ ಗಡೀಪಾರು…ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ… ತಿ.ನರಸೀಪುರ,ನ19,Tv10 ಕನ್ನಡ ರೌಡಿಶೀಟರ್ ಮಣಿಕಂಠರಾಜ್ ಗೌಡ@ಮಣಿ ಎಂಬಾತನನ್ನ 6 ತಿಂಗಳುಗಳ ಕಾಲ ಗಡಿಪಾರು ಮಾಡಲಾಗಿದೆ.ಪೊಲೀಸ್ ಠಾಣಾಧಿಕಾರಿ ಇನ್ಸ್ಪೆಕ್ಟರ್ ಧನಂಜಯ ರವರು…

Leave a Reply

Your email address will not be published. Required fields are marked *