ಸ್ನೇಹಿತರಿಬ್ಬರ ನಡುವೆ ಕಲಹ…ಓರ್ವನ ಕೊಲೆಯಲ್ಲಿ ಅಂತ್ಯ…
- TV10 Kannada Exclusive
- December 25, 2025
- No Comment
- 105

ಸ್ನೇಹಿತರಿಬ್ಬರ ನಡುವೆ ಕಲಹ…ಓರ್ವನ ಕೊಲೆಯಲ್ಲಿ ಅಂತ್ಯ…
ಮಂಡ್ಯ,ಡಿ25,Tv10 ಕನ್ನಡ
ಸ್ನೇಹಿತರಿಬ್ಬ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಹಳೇ ರೈಲ್ವೆ ಸೇತುವೆ ಮೇಲೆ ನಡೆದಿದೆ.ಬೆಂಗಳೂರು ಮೂಲದ ಸುರೇಶ್(26) ಕೊಲೆಯಾದ ವ್ಯಕ್ತಿ.
ಮಂಡ್ಯದ ನಿಖಿಲ್ ಕೊಲೆಗೈದ ಆರೋಪಿ.
ಸ್ನೇಹಿತ ಸುರೇಶ್ ನನ್ನು ಕೊಲೆಗೈದು ನಿಖಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೆಂಗಳೂರಿನಿಂದ ಸ್ನೇಹಿತ ಸುರೇಶ್ ನನ್ನು ಕರೆಸಿಕೊಂಡಿದ್ದ ನಿಖಿಲ್.
ಶ್ರೀರಂಗಪಟ್ಟಣಕ್ಕೆ ಬಂದಿದ್ದ ಇಬ್ಬರು ಹಳೇ ರೈಲ್ವೆ ಸೇತುವೆ ಮೇಲೆ ಮದ್ಯ ಸೇವನೆ ಮಾಡಿದ್ದಾರೆ.
ಈ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ.ಈ ವೇಳೆ ನಿಖಿಲ್ ಬಾಟಲಿಯಿಂದ ಸುರೇಶ್ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.
ಹತ್ಯೆ ಬಳಿಕ ಸ್ನೇಹಿತ ನಿಖಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಸಿಕ್ಕ ಮೃತನ ಮೊಬೈಲ್ ನಿಂದ ಆರೋಪಿ ನಿಖಿಲ್ ಬಗ್ಗೆ ಸುರೇಶ್ ಪೋಷಕರಉ ಮಾಹಿತಿ ನೀಡಿದ್ದಾರೆ.
ಕೊಲೆಗೈದು ಪರಾರಿಯಾಗಿರೋ ಆರೋಪಿ ನಿಖಿಲ್ ಗಾಗಿ ಬಲೆ ಬೀಸಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…