ಸರ್ವೆ ಸೂಪರ್ ವೈಸರ್ ಎಸ್.ಜಿ.ಮಂಜುನಾಥ್ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ…ವಿಜೇತರಿಗೆ ಬಹುಮಾನ ವಿತರಣೆ…

ಸರ್ವೆ ಸೂಪರ್ ವೈಸರ್ ಎಸ್.ಜಿ.ಮಂಜುನಾಥ್ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ…ವಿಜೇತರಿಗೆ ಬಹುಮಾನ ವಿತರಣೆ…

ಸರ್ವೆ ಸೂಪರ್ ವೈಸರ್ ಎಸ್.ಜಿ.ಮಂಜುನಾಥ್ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ…ವಿಜೇತರಿಗೆ ಬಹುಮಾನ ವಿತರಣೆ…

ಶ್ರೀರಂಗಪಟ್ಟಣ,ಜ11,Tv10 ಕನ್ನಡ

ಶ್ರೀರಂಗಪಟ್ಟಣ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಯಲ್ಲಿ ಪರ್ಯಾಯ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್ ಜಿ ಮಂಜುನಾಥ್ ರವರ ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಭೂದಾಖಲೆಗಳ ಸಹಾಯಕ ನಿರ್ದೇಶಕರಾಗಿರುವ ಮಹಮದ್ ಹುಸೇನ್ ರವರ ನೇತೃತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಒಳಗೊಂಡು ಮೂರು ತಂಡಗಳನ್ನು ರಚನೆ ಮಾಡಿ ಆ ಎಲ್ಲಾ ತಂಡಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ತಂಡದ ಉಸ್ತುವಾರಿಯನ್ನು ಕಚೇರಿಯ ಅಧೀಕ್ಷಕರಾದ ಮರಿಸ್ವಾಮಿ ನೆರವೇರಿಸಿದರು. ಕ್ರೀಡಾಂಗಣದ ಜವಾಬ್ದಾರಿಯನ್ನು ಕಚೇರಿಯ ಸಿಬ್ಬಂದಿಯಾದ ನಿತಿನ್ ಅವರು ವಹಿಸಿಕೊಂಡಿದ್ದರು. ದಿವಂಗತ ಎಸ್ ಜಿ ಮಂಜುನಾಥ್ ಅವರ ಧರ್ಮಪತ್ನಿ ಎಸ್ ಪವಿತ್ರ ರವರು ಜ್ಯೋತಿ ಬೆಳಗುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು. ಮೊಹಮ್ಮದ್ ಹುಸೇನ್ ರವರು ಮಾತನಾಡಿ ದಿವಂಗತ ಎಸ್ ಜಿ ಮಂಜುನಾಥ್ ರವರು ಕಚೇರಿಯಲ್ಲಿ ಎಲ್ಲರನ್ನೂ, ಕಚೇರಿಯ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ವಿಧಿ ಆಟ ಅವರ ಬಾಳಲ್ಲಿ ಬಿರುಗಾಳಿಯಂತೆ ಬಂದು ಅಕಾಲಿಕ ಮರಣ ಹೊಂದಿದರು.ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನ ಭರಿಸಲು ದೇವರು ಶಕ್ತಿ ಕೊಡಲಿ ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಅರವಿಂದ್, ದರ್ಶನ ನಾಯಕ್,ಸಂಜಯ್,ಪುನೀತ್, ಸುರೇಶ್ ಕುಮಾರ್, ನಂಜುಂಡೇಗೌಡ, ರಚನಾ, ಜಸ್ವಂತ್, ಜಯಬೋರೇಗೌಡ,ಪರಮೇಶ್, ನಂದೀಶ್,ಲೋಕೇಶ್ ಮತ್ತು ಇತರರು ರವರಿಗೆ ಕಪ್ ವಿತರಿಸಿದರು. ಕಾರ್ಯಕ್ರಮದಲ್ಲಿ ಭೂ ದಾಖಲೆಗಳ ಸಹಾಯಕರಾದ ಮಹಮದ್ ಹುಸೇನ್ ರವರು, ದಿವಂಗತ ಎಸ್ ಜಿ ಮಂಜುನಾಥ್ ರವರ ಧರ್ಮಪತ್ನಿ ಎಸ್ ಪವಿತ್ರ ಅದಿಕ್ಷಕರಾದ ಮರಿಸ್ವಾಮಿ,ಸೂಪರ್ವೈಸರ್, ಸುರೇಶ್, ಯೋಗರಾಜ್, ಅರವಿಂದ್, ನಿವೃತ್ತ ಮುಖ್ಯೋಪಾಧ್ಯಾಯರಾದ ಸೋಮೇಗೌಡ,ನಗುವನಹಳ್ಳಿ ಸೋಮೇಶ್ ರವರು ಭಾಗವಸಿದ್ದರು..

Spread the love

Related post

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಟಿ ಜಯಮಾಲಾ ಸ್ಪರ್ಧೆ…ಮೈಸೂರಿನಿಂದ ಪ್ರಚಾರ ಕಾರ್ಯ ಆರಂಭ…

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಟಿ ಜಯಮಾಲಾ ಸ್ಪರ್ಧೆ…ಮೈಸೂರಿನಿಂದ…

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಟಿ ಜಯಮಾಲಾ ಸ್ಪರ್ಧೆ…ಮೈಸೂರಿನಿಂದ ಪ್ರಚಾರ ಕಾರ್ಯ ಆರಂಭ… ಮೈಸೂರು,ಜ8,Tv10 ಕನ್ನಡ ಜನವರಿ 30 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ…
ಮೈಸೂರು: ರಾಷ್ಟ್ರಮಟ್ಟದ ಟ್ರೆಡಿಷನಲ್ ಫ್ಯಾಷನ್ ಶೋ ‘ಫ್ಯೂಚರ್ ಮಾಡಲ್ ಆಫ್ ಇಂಡಿಯಾ’ ಸೀಸನ್–6 ಯಶಸ್ವಿ

ಮೈಸೂರು: ರಾಷ್ಟ್ರಮಟ್ಟದ ಟ್ರೆಡಿಷನಲ್ ಫ್ಯಾಷನ್ ಶೋ ‘ಫ್ಯೂಚರ್ ಮಾಡಲ್ ಆಫ್ ಇಂಡಿಯಾ’…

ಮೈಸೂರು: ರಾಷ್ಟ್ರಮಟ್ಟದ ಟ್ರೆಡಿಷನಲ್ ಫ್ಯಾಷನ್ ಶೋ ‘ಫ್ಯೂಚರ್ ಮಾಡಲ್ ಆಫ್ ಇಂಡಿಯಾ’ ಸೀಸನ್–6 ಯಶಸ್ವಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು ಆವರಣದಲ್ಲಿರುವ ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ…
ಹುಲ್ಲಹಳ್ಳಿ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…ನಿರ್ಲಕ್ಷ್ಯಕ್ಕೆ ಒಳಗಾದ 11 ನೇ ಶತಮಾನದ ಇತಿಹಾಸ ಸುಪ್ರಸಿದ್ದ ದೇವಾಲಯ…

ಹುಲ್ಲಹಳ್ಳಿ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…ನಿರ್ಲಕ್ಷ್ಯಕ್ಕೆ ಒಳಗಾದ…

ಹುಲ್ಲಹಳ್ಳಿ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…ನಿರ್ಲಕ್ಷ್ಯಕ್ಕೆ ಒಳಗಾದ 11 ನೇ ಶತಮಾನದ ಇತಿಹಾಸ ಸುಪ್ರಸಿದ್ದ ದೇವಾಲಯ… ನಂಜನಗೂಡು,ಜ4,Tv10 ಕನ್ನಡ ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿ…

Leave a Reply

Your email address will not be published. Required fields are marked *