ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿದ ಪತಿಗೆ ಜೀವಾವಧಿ ಶಿಕ್ಷೆ…

ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿದ ಪತಿಗೆ ಜೀವಾವಧಿ ಶಿಕ್ಷೆ…

  • Crime
  • August 4, 2022
  • No Comment
  • 183

ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿದ ಪತಿಗೆ ಜೀವಾವಧಿ ಶಿಕ್ಷೆ…

ಮೈಸೂರು,ಆಗಸ್ಟ್4,Tv10 ಕನ್ನಡ
ಪತ್ನಿಯನ್ನು ಕೊಂದು ನೇಣುಹಾಕಿದ ಪತಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮೈಸೂರಿನ ಐದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ಪಿರಿಯಾಪಟ್ಟಣದ ಚೌತಿ ಗ್ರಾಮದ ಕರಿಯಯ್ಯನ ಪುತ್ರ ಕೆ.ಬಸವರಾಜು ಶಿಕ್ಷೆಗೆ ಗುರಿಯಾದ ಪತಿರಾಯ. ತನ್ನ ಪತ್ನಿ ಮಮತ ಅವರನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.
ಸೋಮವಾರ ಪೇಟೆಯ ಭುವನಗಿರಿ ಗ್ರಾಮದ ಬಸವರಾಜು ಅವರ ಸೋದರಿ ಮಮತ ಅವರನ್ನು 2002 ರಲ್ಲಿ ಬಸವರಾಜು ವಿವಾಹವಾಗಿದ್ದ. ಮದುವೆ ಬಳಿಕ ವರದಕ್ಷಿಣಿ ತರುವಂತೆ ಪೀಡಿಸುತ್ತಿದ್ದ. ಪರ ಪುರುಷರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನದಿಂದ ಚಿತ್ರ ಹಿಂಸೆ ನೀಡುತ್ತಿದ್ದ.
2012 ರಲ್ಲಿ ಮಮತಗೆ ಬೆಂಕಿ ಹಚ್ಚಿ ಹಿಂಸೆ ನೀಡಿದ್ದ.ಗಾಯಗೊಂಡಿದ್ದ ಮಮತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. 2019 ರಲ್ಲಿ ಹಣದ ವಿಚಾರವಾಗಿ ಗಲಾಟೆ ಮಾಡಿದ ಬಸವರಾಜು, ಪತ್ನಿ ಮೇಲೆ ಹಲ್ಲೆ ನಡೆಸಿದಲ್ಲದೇ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದು ಕೊಟ್ಟಿಗೆಯಲ್ಲಿ ನೇಣು ಹಾಕುವ ಮೂಲಕ ಕೊಲೆ ಮಾಡಿದ್ದ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಠಾಣೆ ಪೊಲೀಸರು,ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅವರು,ಆರೋಪ ಸಾಬೀತಾದ ಹಿನ್ನಲೆಯಲ್ಲಿ ಈ ಶಿಕ್ಷೆ ವಿಧಿಸಿದ್ದಾರೆ.ಸರಕಾರದ ಪರವಾಗಿ ಅಭಿಯೋಜಕರಾದ ನಾಗಪ್ಪ ಸಿ. ನಾಕಮನ್ ವಾದ ಮಂಡಿಸಿದ್ದರು…

Spread the love

Related post

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ…

ನಂಜನಗೂಡು,ಜು4,Tv10 ಕನ್ನಡ ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ…
BTL ವಿಧ್ಯಾಸಂಸ್ಥೆಗೆ ದ್ರೋಹ…30 ಲಕ್ಷ ವಂಚನೆ…ಕಾರ್ಯದರ್ಶಿ ವಿರುದ್ದ FIR…

BTL ವಿಧ್ಯಾಸಂಸ್ಥೆಗೆ ದ್ರೋಹ…30 ಲಕ್ಷ ವಂಚನೆ…ಕಾರ್ಯದರ್ಶಿ ವಿರುದ್ದ FIR…

ಮೈಸೂರು,ಜು2,Tv10 ಕನ್ನಡ ವಿದ್ಯಾಸಂಸ್ಥೆಗೆ 30 ಲಕ್ಷ ವಂಚಿಸಿ ದ್ರೋಹಬಗೆದ ಕಾರ್ಯದರ್ಶಿ ವಿರುದ್ದ ಎನ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿನ ಕೆಸರೆ ಬಡಾವಣೆಯಲ್ಲಿರುವ ಬಿಟಿಎಲ್ ವಿದ್ಯಾವಾಹಿನಿ ಸ್ಕೂಲ್ ಮತ್ತು ಕಾಂಪೋಸಿಟ್ ಪಿಯು…
ನಾಡದೇವ ಚಾಮುಂಡೇಶ್ವರಿ ದರುಶನ ಪಡೆದ ಹ್ಯಾಟ್ರಿಕ್ ಹೀರೋ…

ನಾಡದೇವ ಚಾಮುಂಡೇಶ್ವರಿ ದರುಶನ ಪಡೆದ ಹ್ಯಾಟ್ರಿಕ್ ಹೀರೋ…

ಮೈಸೂರು,ಜು2,Tv10 ಕನ್ನಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ನಾಡದೇವತೆ ಚಾಮುಂಡೇಶ್ವರಿ ದರುಶನ ಪಡೆದರು.ಪತ್ನಿ ಗೀತಾ ಜೊತೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.ದೇವಸ್ಥಾನದ ಪ್ರಧಾನ ಅರ್ಚಕರಾದ…

Leave a Reply

Your email address will not be published. Required fields are marked *