ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿದ ಪತಿಗೆ ಜೀವಾವಧಿ ಶಿಕ್ಷೆ…

ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿದ ಪತಿಗೆ ಜೀವಾವಧಿ ಶಿಕ್ಷೆ…

  • Crime
  • August 4, 2022
  • No Comment
  • 129

ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿದ ಪತಿಗೆ ಜೀವಾವಧಿ ಶಿಕ್ಷೆ…

ಮೈಸೂರು,ಆಗಸ್ಟ್4,Tv10 ಕನ್ನಡ
ಪತ್ನಿಯನ್ನು ಕೊಂದು ನೇಣುಹಾಕಿದ ಪತಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮೈಸೂರಿನ ಐದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ಪಿರಿಯಾಪಟ್ಟಣದ ಚೌತಿ ಗ್ರಾಮದ ಕರಿಯಯ್ಯನ ಪುತ್ರ ಕೆ.ಬಸವರಾಜು ಶಿಕ್ಷೆಗೆ ಗುರಿಯಾದ ಪತಿರಾಯ. ತನ್ನ ಪತ್ನಿ ಮಮತ ಅವರನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.
ಸೋಮವಾರ ಪೇಟೆಯ ಭುವನಗಿರಿ ಗ್ರಾಮದ ಬಸವರಾಜು ಅವರ ಸೋದರಿ ಮಮತ ಅವರನ್ನು 2002 ರಲ್ಲಿ ಬಸವರಾಜು ವಿವಾಹವಾಗಿದ್ದ. ಮದುವೆ ಬಳಿಕ ವರದಕ್ಷಿಣಿ ತರುವಂತೆ ಪೀಡಿಸುತ್ತಿದ್ದ. ಪರ ಪುರುಷರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನದಿಂದ ಚಿತ್ರ ಹಿಂಸೆ ನೀಡುತ್ತಿದ್ದ.
2012 ರಲ್ಲಿ ಮಮತಗೆ ಬೆಂಕಿ ಹಚ್ಚಿ ಹಿಂಸೆ ನೀಡಿದ್ದ.ಗಾಯಗೊಂಡಿದ್ದ ಮಮತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. 2019 ರಲ್ಲಿ ಹಣದ ವಿಚಾರವಾಗಿ ಗಲಾಟೆ ಮಾಡಿದ ಬಸವರಾಜು, ಪತ್ನಿ ಮೇಲೆ ಹಲ್ಲೆ ನಡೆಸಿದಲ್ಲದೇ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದು ಕೊಟ್ಟಿಗೆಯಲ್ಲಿ ನೇಣು ಹಾಕುವ ಮೂಲಕ ಕೊಲೆ ಮಾಡಿದ್ದ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಠಾಣೆ ಪೊಲೀಸರು,ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅವರು,ಆರೋಪ ಸಾಬೀತಾದ ಹಿನ್ನಲೆಯಲ್ಲಿ ಈ ಶಿಕ್ಷೆ ವಿಧಿಸಿದ್ದಾರೆ.ಸರಕಾರದ ಪರವಾಗಿ ಅಭಿಯೋಜಕರಾದ ನಾಗಪ್ಪ ಸಿ. ನಾಕಮನ್ ವಾದ ಮಂಡಿಸಿದ್ದರು…

Spread the love

Related post

ಯದುವೀರ್ ರಿಂದ ಮತದಾನ…ತ್ರಿಷಿಕಾ,ಪ್ರಮೋದ ದೇವಿ ಒಡೆಯರ್ ಸಾಥ್…

ಯದುವೀರ್ ರಿಂದ ಮತದಾನ…ತ್ರಿಷಿಕಾ,ಪ್ರಮೋದ ದೇವಿ ಒಡೆಯರ್ ಸಾಥ್…

ಮೈಸೂರು,ಏ26,Tv10 ಕನ್ನಡ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ ಚಲಾಯಿಸಿದರು.ಅಗ್ರಹಾರದಲ್ಲಿರುವ ಶ್ರೀಕಾಂತ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.ಯದುವೀರ್ ಜೊತೆಗೆ ಪತ್ನಿ ತ್ರಿಷಿಕಾ…
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ವಿಷ್ಣುವರ್ಧನ್ ರಿಂದ ಮತದಾನ….

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ವಿಷ್ಣುವರ್ಧನ್ ರಿಂದ ಮತದಾನ….

ಲೋಸಭಾ ಚುನಾವಣೆ ಹಿನ್ನಲೆ ಚಿತ್ರರಂಗದ ಹಿರಿಯ ಕಲಾವಿದರು ತಮಗಮ ಹಕ್ಕನ್ನ ಚಲಾಯಿಸಿದ್ದಾರೆ.ಸಾಹಸ ಸಿಂಹ ದಿ.ಡಾ.ವಿಷ್ಣುವರ್ಧನ್ ರವರ ಧರ್ಮಪತ್ನಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್ ಹಾಗೂ…
ಸುತ್ತೂರು ಶ್ರೀಗಳಿಂದ ಮತದಾನ…ಕಡ್ಡಾಯವಾಗಿ ಮತ ಚಲಾಯಿಸುವಂತೆ ಕರೆ…

ಸುತ್ತೂರು ಶ್ರೀಗಳಿಂದ ಮತದಾನ…ಕಡ್ಡಾಯವಾಗಿ ಮತ ಚಲಾಯಿಸುವಂತೆ ಕರೆ…

ನಂಜನಗೂಡು,ಏ26,Tv10 ಕನ್ನಡ ವರುಣ ವಿಧಾನಸಭಾ ಕ್ಷೇತ್ರದ ಸುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು ಮತಚಲಾಯಿಸಿದರು.ನಂತರ ಮಾತನಾಡಿ ದೇಶದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನ…

Leave a Reply

Your email address will not be published. Required fields are marked *