
ಮತ್ತೆ ದನಗಾಹಿ ಮೇಲೆ ಹುಲಿ ದಾಳಿ…ಯುವಕ ಆಸ್ಪತ್ರೆಗೆ ದಾಖಲು…
- Uncategorized
- August 4, 2022
- No Comment
- 149
ಮತ್ತೆ ದನಗಾಹಿ ಮೇಲೆ ಹುಲಿ ದಾಳಿ…ಯುವಕ ಆಸ್ಪತ್ರೆಗೆ ದಾಖಲು…

ಹೆಚ್.ಡಿ.ಕೋಟೆ,ಆಗಸ್ಟ್4,Tv10 ಕನ್ನಡ
ದನ ಮೇಯಿಸುತ್ತಿದ್ದ ಯುವಕನ ಮೇಲೆ ಹುಲಿ ದಾಳಿ ನಡೆಸಿದೆ. ವ್ಯಾಘ್ರನ ಆರ್ಭಟ ಮತ್ತೆ ಮುಂದುವರೆದಿದೆ.ಸರಗೂರು ತಾಲೂಕಿನ ಹಾದನೂರು ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ.
ಪ್ರಸನ್ನಕುಮಾರ್ ಹುಲಿ ದಾಳಿಗೆ ಸಿಲುಕಿ ಗಾಯಗೊಂಡ ದನಗಾಹಿ.ಪ್ರಸನ್ನ ಕುಮಾರ ಚೀರಾಟ ಕೇಳಿ ಅಕ್ಕಪಕ್ಕದ ಜಮೀನಿನಲ್ಲಿದ್ದ ಕೃಷಿಕರು ಸಹಾಯಕ್ಕೆ ಧಾವಿಸಿದ್ದಾರೆ.ಈ ವೇಳೆ
ದನಗಾಹಿ ಬಿಟ್ಟ ಹುಲಿ ಹಸುವನ್ನ ಹೊತ್ತೊಯ್ದಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ದನಗಾಹಿಯೊಬ್ಬರ ಮೇಲೆರಗಿ ಕೊಂದಿದ್ದ ಹುಲಿಯ ಆರ್ಭಟ ಮತ್ತೆ ಮುಂದುವರೆದಿದೆ.
ಗಾಯಾಳು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಗ್ರಾಮದ ಜನತೆ ಮತ್ತಷ್ಟು ಭಯಭೀತರಾಗಿದ್ದಾರೆ.
ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ…