• August 22, 2022

ಮೊಟ್ಟೆ ಎಸೆದ ಪ್ರಕರಣ ಹಾದಿ ರಂಪ ಬೀದಿ ರಂಪ ಮಾಡಬೇಡಿ…ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಸಲಹೆ…

ಮೊಟ್ಟೆ ಎಸೆದ ಪ್ರಕರಣ ಹಾದಿ ರಂಪ ಬೀದಿ ರಂಪ ಮಾಡಬೇಡಿ…ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಸಲಹೆ…

ಮೊಟ್ಟೆ ಎಸೆದ ಪ್ರಕರಣ ಹಾದಿ ರಂಪ ಬೀದಿ ರಂಪ ಮಾಡಬೇಡಿ…ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಸಲಹೆ…

ಮೈಸೂರು,ಆಗಸ್ಟ್22,Tv10 ಕನ್ನಡ
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಹಳ್ಳಿಹಕ್ಕಿ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ಜೀವನದಲ್ಲಿ ಇದೆಲ್ಲಾ ಸಹಜ.ಆದರೆ ಮೊಟ್ಟೆ ಎಸೆದಿರುವುದು ಸರಿಯಲ್ಲ ಎಂದು
ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ.ಈ ಘಟನೆಯನ್ನ
ಸಿಎಂ, ಯಡಿಯೂರಪ್ಪ ಎಲ್ಲರೂ ಖಂಡಿಸಿದ್ದಾರೆ.
ಇದನ್ನು ಹಾದಿರಂಪ ಬೀದಿ ರಂಪ‌ ಮಾಡಬೇಡಿ.
ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ.
ಇಷ್ಟಾದ ಮೇಲೂ ಮಡಿಕೇರಿ ಶಕ್ತಿ ಪ್ರದರ್ಶನ ಸರಿಯಲ್ಲ.
ನಾಳೆ ಅನಾಹುತ ಸಂಭವಿಸಬಹುದು.
ಮೊರಾರ್ಜಿ ಅವರಿಗೆ ನಾಗಪುರದಲ್ಲಿ ಚಪ್ಪಲಿ ಎಸೆದಿದ್ದರು.
ಇಂದಿರಗಾಂಧಿ ಅವರಿಗೆ ಕಲ್ಲೇಟು ಬಿದ್ದಿತ್ತು.
ಹಾಸನ ಸಮಾವೇಶದಲ್ಲಿ ಹಾವು ಬಿಡಲಾಗಿತ್ತು.
ಜಯಲಲಿತಾ ಸಿಎಂ ಆಗಿ ಇಳಿದಾಗ ಸದನದಲ್ಲಿ ಅವಮಾನ ಆಗಿತ್ತು.
ಸಿದ್ದರಾಮಯ್ಯ ಇದನ್ನು ಮನಸ್ಸಿಗೆ ಹಚ್ಚಿಕೊಂಡು ಪ್ರತಿಯಾಗಿ ಮಾಡುವುದು ಸರಿಯಲ್ಲ.ರಾಜೀವ್ ಗಾಂಧಿ ಇಂದಿರಾಗಾಂಧಿಯನ್ನು ಕೊಂದರು.
ಸಾರ್ವಜನಿಕ ಜೀವನದಲ್ಲಿ ಇದು ಸಹಜ.ಆದರೆ ಇದು ಖಂಡನೀಯ ಯಾರು ಒಪ್ಪಲ್ಲ.ಸಿದ್ದರಾಮಯ್ಯ ಅವರಿಗೆ ವಿನಂತಿ. ದಯಮಾಡಿ ಮಡಿಕೇರಿ ಮುತ್ತಿಗೆ ಕಾರ್ಯಕ್ರಮವನ್ನು ಕೈ ಬಿಡಿ.ಚುನಾವಣಾ ವರ್ಷವಿದೆ ಏನೇನೋ‌ ಅನಾಹುತವಾಗಬಹುದು.ಸದನದಲ್ಲಿ ಇದನ್ನು ಖಂಡಿಸಿ ಅಲ್ಲಿ ಕಾನ್ಫೆಡೆನ್ಸ್ ಮೂವ್ ಮಾಡಿ.ಬಿ ಎಸ್ ಯಡಿಯೂರಪ್ಪ ಎಸ್ ಎಂ ಕೃಷ್ಣ ಮಧ್ಯಸ್ಥಿಕೆ ವಹಿಸಿ ಸಿದ್ದು ಜೊತೆ ಮಾತನಾಡಲಿ ಎಂದು ಸಲಹೆ ನೀಡಿದ್ದಾರೆ…

Spread the love

Leave a Reply

Your email address will not be published.