ವಿದ್ಯಾಅರ್ಹತೆ ಇಲ್ಲದಿದ್ದರೂ ವೈದ್ಯಕೀಯ ವೃತ್ತಿ ಆರೋಪ ಸಾಬೀತು…ಆದಿತ್ಯಾ ನರ್ಸಿಂಗ್ ಹೋಂ ನ ಮೂವರು ಸಿಬ್ಬಂದಿಗಳ ಮೇಲೆ ಕ್ರಮ…

ವಿದ್ಯಾಅರ್ಹತೆ ಇಲ್ಲದಿದ್ದರೂ ವೈದ್ಯಕೀಯ ವೃತ್ತಿ ಆರೋಪ ಸಾಬೀತು…ಆದಿತ್ಯಾ ನರ್ಸಿಂಗ್ ಹೋಂ ನ ಮೂವರು ಸಿಬ್ಬಂದಿಗಳ ಮೇಲೆ ಕ್ರಮ…

ವಿದ್ಯಾಅರ್ಹತೆ ಇಲ್ಲದಿದ್ದರೂ ವೈದ್ಯಕೀಯ ವೃತ್ತಿ ಆರೋಪ ಸಾಬೀತು…ಆದಿತ್ಯಾ ನರ್ಸಿಂಗ್ ಹೋಂ ನ ಮೂವರು ಸಿಬ್ಬಂದಿಗಳ ಮೇಲೆ ಕ್ರಮ…

ಮೈಸೂರು,ಸೆ15,Tv10 ಕನ್ನಡ
ಅರ್ಹ ವಿದ್ಯಾರ್ಹತೆ ಇಲ್ಲದಿದ್ದರೂ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಮೈಸೂರಿನ ಆದಿತ್ಯಾ ನರ್ಸಿಂಗ್ ಹೋಂ ಮೂವರು ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆಯುಕ್ತರು ಸೂಚನೆ ಹೊರಡಿಸಿದ್ದಾರೆ.ಅರವಳಿಕೆ ತಜ್ಞರಾದ ಡಾ.ಚಂದ್ರಶೇಖರ್,ಶುಶ್ರೋಷಕ ದಿನೇಶ್ ಹಾಗೂ ನಕಲಿ ವೈದ್ಯ ಗಣೇಶ್ ವಿರುದ್ದ KPME ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.ಅರವಳಿಕೆ ತಜ್ಞರಲ್ಲದಿದ್ದರೂ ಡಾ.ಚಂದ್ರಶೇಖರ್ ರೋಗಿಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಿರುವುದು ಬೆಳಕಿಗೆ ಬಂದಿದೆ.ಇವರಿಗೆ ವಿದ್ಯಾರ್ಹತೆ ಇಲ್ಲದಿದ್ದರೂ ವೃತ್ತಿಯಲ್ಲಿ ತೊಸಗಿಸಿಕೊಂಡಿರುವುದು ಅಪರಾಧವಾಗುತ್ತದೆ ಆದ್ದರಿಂದ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ವಿಭಾಗೀಯ ನಿರ್ದೇಶಕರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.ಡಾ.ಚಂದ್ರಶೇಖರ್ ಪ್ರಾಧಿಕಾರಕ್ಕೆ ಮೊರೆ ಹೋಗಿ ಮೇಲ್ಮನವಿ ಸಲ್ಲಿಸಿದ್ದರು.ಪ್ರಾಧಿಕಾರವೂ ಸಹ ವೃತ್ತ ಮುಂದುವರೆಸದಂತೆ ಆದೇಶಿಸಿತ್ತು.ಇದೀಗ ಆರೋಗ್ಯ ಮತ್ತು ಕುಟುಂಬ ಇಲಾಖೆ ಆಯುಕ್ತರು ಡಾ.ಚಂದ್ರಶೇಖರ್ ರವರಿಗೆ ವೃತ್ತಿ ಮುಂದುವರೆಸದಂತೆ ಸೂಚನೆ ನೀಡಿದೆ.ಇದರ ಜೊತೆಗೆ ಆದಿತ್ಯ ನರ್ಸಿಂಗ್ ಹೋಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ದಿನೇಶ್ ಹಾಗೂ ಗಣೇಶ್ ಎಂ.ಎಸ್. ರವರಿಗೆ ವಿದ್ಯಾರ್ಹತೆ ಇಲ್ಲವೆಂದು ಸಾಬೀತು ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ…

Spread the love

Related post

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…

Leave a Reply

Your email address will not be published. Required fields are marked *