ಮದುವೆ ಆದ ಒಂದು ವರ್ಷಕ್ಕೆ ಕೈಕೊಟ್ಟ ಪತಿ…ಅತಂತ್ರಕ್ಕೆ ಸಿಲುಕಿದ ಪತ್ನಿ…ಗಂಡ ಸೇರಿದಂತೆ 16 ಮಂದಿ ವಿರುದ್ದ FIR ದಾಖಲು…

ಮದುವೆ ಆದ ಒಂದು ವರ್ಷಕ್ಕೆ ಕೈಕೊಟ್ಟ ಪತಿ…ಅತಂತ್ರಕ್ಕೆ ಸಿಲುಕಿದ ಪತ್ನಿ…ಗಂಡ ಸೇರಿದಂತೆ 16 ಮಂದಿ ವಿರುದ್ದ FIR ದಾಖಲು…

ಮದುವೆ ಆದ ಒಂದು ವರ್ಷಕ್ಕೆ ಕೈಕೊಟ್ಟ ಪತಿ…ಅತಂತ್ರಕ್ಕೆ ಸಿಲುಕಿದ ಪತ್ನಿ…ಗಂಡ ಸೇರಿದಂತೆ 16 ಮಂದಿ ವಿರುದ್ದ FIR ದಾಖಲು…

ಹುಣಸೂರು,ಸೆ23,Tv10 ಕನ್ನಡ
ಪ್ರೀತಿಸಿ ವಿವಾಹವಾದ ಜೋಡಿ ಒಂದು ವರ್ಷಕ್ಕೆ ಬೇರ್ಪಟ್ಟಿದೆ.ಹೆತ್ತವರು ಹಾಗೂ ಸಂಭಂಧಿಕರ ಚಿತಾವಣೆಯಿಂದ ಪತಿರಾಯ ಕೈಕೊಟ್ಟಿದ್ದಾನೆ.ಜಾತಿ ನಿಂದನೆ ಮಾಡಿ ಅಪಪ್ರಚಾರ ಮಾಡಿ ಕೊಲೆ ಬೆದರಿಕೆ ಹಾಕಿ ದಂಪತಿಯನ್ನ ದೂರ ಮಾಡಿದ ಹಿನ್ನಲೆ ವಂಚನೆಗೆ ಒಳಗಾದ ವಿವಾಹಿತೆ ನ್ಯಾಯಕ್ಕಾಗಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಗಂಡ ಸೇರಿದಂತೆ ಒಂದೇ ಕುಟುಂಬದ 16 ಮಂದಿ ಮೇಲೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಚಿತ್ರದುರ್ಗದ ಅಶ್ವಿನಿ(24) ಪತಿಯಿಂದ ವಂಚನೆಗೆ ಒಳಗಾದ ನತದೃಷ್ಟೆ.ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್ ನ ಅಶ್ವಿನಿ ಜೂನ್ 2021 ರಲ್ಲಿ ಪ್ರೀತಿಸಿ ಮದುವೆ ಆಗಿದ್ದಳು.ಇವರಿಬ್ಬರ ಪ್ರೀತಿಗೆ ಇಬ್ಬರ ಕುಟುಂಬಸ್ಥರೂ ಸಹ ಒಪ್ಪಿಗೆ ನೀಡಿದ್ದರು.ನಂತರದ ದಿನಗಳಲ್ಲಿ ಇಬ್ಬರನ್ನೂ ಬೇರ್ಪಡಿಸುವ ಪ್ರಯತ್ನ ನಡೆದಿದೆ.ಜಾತಿ ಕಾರಣ ನೀಡಿರುವುದಲ್ಲದೆ ಅಶ್ವಿನಿ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರೆ.ವಾಟ್ಸಾಪ್ ನಲ್ಲಿ ಬೆತ್ತಲೆ ಫೋಟೋ ಹಾಕುತ್ತಿದ್ದಾಳೆಂದು ಅಪಪ್ರಚಾರ ಮಾಡಿದ್ದಾರೆ.ಇದೇ ನೆಪ ಇಟ್ಟುಕೊಂಡು ಪತಿ ಅಭಿಷೇಕ್ ಗೆ ಮತ್ತೊಂದು ಮದುವೆಗೆ ಸಂಭಂಧ ಹುಡುಕುತ್ತಿರುವುದಾಗಿ ಅಶ್ವಿನಿ ದೂರಿನಲ್ಲಿ ಆರೋಪಿಸಿದ್ದಾರೆ.ದಲಿತ ಹುಡುಗಿ ಎಂದು ಕೊಟ್ಟಿಗೆಯಲ್ಲಿ ಇರಿಸಿದ್ದಾರೆ.ನ್ಯಾಯ ಕೇಳಲು ಹೋದ ಅಶ್ವಿನಿಗೆ ಅತ್ತೆ ಹಾಗೂ ಮಾವ ಹಲ್ಲೆ ಮಾಡಲು ಮುಂದಾಗಿದ್ದಾರೆ.ಗಂಡ ಹಾಗೂ ಮನೆಯವರಿಂದ ತ್ಯಜಿಸಲ್ಪಟ್ಟ ಅಶ್ವಿನಿ ಇದೀಗ ಅತಂತ್ರಕ್ಕೆ ಸಿಲುಕಿದ್ದಾರೆ.ಪ್ರೀತಿಸಿ ಮದುವೆ ಆದ ಗಂಡನಿಗಾಗಿ ಪೊಲೀಸ್ ಠಾಣೆ ಮೆಟ್ಟಲೇರಿರುವ ಅಶ್ವಿನಿಗೆ ನ್ಯಾಯ ದೊರೆಯಬೇಕಿದೆ.ಅಶ್ವಿನಿಯ ಹೆತ್ತವರು ಮಗಳ ಪರಿಸ್ಥಿತಿಗೆ ಕಣ್ಣೀರಿಡುತ್ತಿದ್ದಾರೆ…

Spread the love

Related post

ದೇವರಾಜ ಪೊಲೀಸರ ಕಾರ್ಯಾಚರಣೆ…ದ್ವಿಚಕ್ರ ವಾಹನ ಕಳ್ಳನ ಬಂಧನ…6.80 ಲಕ್ಷ ಮೌಲ್ಯದ 14 ವಾಹನ ವಶ…

ದೇವರಾಜ ಪೊಲೀಸರ ಕಾರ್ಯಾಚರಣೆ…ದ್ವಿಚಕ್ರ ವಾಹನ ಕಳ್ಳನ ಬಂಧನ…6.80 ಲಕ್ಷ ಮೌಲ್ಯದ 14…

ಮೈಸೂರು,ಮಾ27,Tv10 ಕನ್ನಡ ದೇವರಾಜ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ದ್ವಿಚಕ್ರವಾಹನ ಕಳ್ಳನನ್ನು ಬಂಧಿಸಿದ್ದು 6.80 ಲಕ್ಷ ಮೌಲ್ಯದ 14 ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.ಮಂಡ್ಯ ಜಿಲ್ಲೆ ಆರತಿ ಉಕ್ಕಡದ…
ಹುಣಸೂರು:ಕುಸಿದುಬಿದ್ದ ವೃದ್ದೆ ಸಾವು…

ಹುಣಸೂರು:ಕುಸಿದುಬಿದ್ದ ವೃದ್ದೆ ಸಾವು…

ಹುಣಸೂರು,ಮಾ25,Tv10 ಕನ್ನಡ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಅಜ್ಜಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ನಗರದ ಬಿಎಂ ರಸ್ತೆಯಲ್ಲಿ ಘಟನೆ ನಡೆದಿದೆ.ನೋಡುತ್ತಿದ್ದಂತೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ವೃದ್ದೆಯ ಗುರುತು ಪತ್ತೆಯಾಗಿಲ್ಲ.ಪತ್ತೆಗಾಗಿ ಪೊಲೀಸರು ಮನವಿ…
ಚುನಾವಣಾ ರಾಯಭಾರಿಗಳಾಗಿ ಕೃಪಾಕರ ಸೇನಾನಿ,ಮಾಡೆಲ್ ತನಿಷ್ಕಾ ಆಯ್ಕೆ…

ಚುನಾವಣಾ ರಾಯಭಾರಿಗಳಾಗಿ ಕೃಪಾಕರ ಸೇನಾನಿ,ಮಾಡೆಲ್ ತನಿಷ್ಕಾ ಆಯ್ಕೆ…

ಮೈಸೂರು,ಮಾ25,Tv10 ಕನ್ನಡ ಮೈಸೂರು ಜಿಲ್ಲೆಯ ಚುನಾವಣಾ ರಾಯಭಾರಿಗಳಾಗಿ ಜಿಲ್ಲಾಡಳಿತದಿಂದ ಆಯ್ಕೆಮಾಡೆಲಿಂಗ್ ಕ್ಷೇತ್ರದ ತನಿಷ್ಕಾ ಹಾಗೂ ಅಂತರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ – ಸೇನಾನಿ ಆಯ್ಕೆಯಾಗಿದ್ದಾರೆ.ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ರಾಯಭಾರಿಗಳುಮತದಾರರರಿಗೆ…

Leave a Reply

Your email address will not be published. Required fields are marked *