ಶ್ರೀಗಂಧದ ಮರಕ್ಕೆ ಕೊಡಲಿಪೆಟ್ಟು ಪ್ರಕರಣ…ಗುತ್ತಿಗೆದಾರನ ಮೇಲೆ FIR ದಾಖಲು…Tv10 ವರದಿ ಫಲಶೃತಿ…

ಶ್ರೀಗಂಧದ ಮರಕ್ಕೆ ಕೊಡಲಿಪೆಟ್ಟು ಪ್ರಕರಣ…ಗುತ್ತಿಗೆದಾರನ ಮೇಲೆ FIR ದಾಖಲು…Tv10 ವರದಿ ಫಲಶೃತಿ…

ಶ್ರೀಗಂಧದ ಮರಕ್ಕೆ ಕೊಡಲಿಪೆಟ್ಟು ಪ್ರಕರಣ…ಗುತ್ತಿಗೆದಾರನ ಮೇಲೆ FIR ದಾಖಲು…Tv10 ವರದಿ ಫಲಶೃತಿ…

ಮೈಸೂರು,ಸೆ23,Tv10 ಕನ್ನಡ
ರಸ್ತೆ ಅಭಿವೃದ್ದಿ ಕಾಮಗಾರಿ ವೇಳೆ ಶ್ರೀಗಂಧದ ಮರ ಹನನ ಮಾಡಿದ ಗುತ್ತಿಗೆದಾರನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲು ಮಾಡಿದ್ದಾರೆ.ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಎಸ್.ಎಲ್.ಜಿ.ಕನ್ಸ್ಟ್ರಕ್ಷನ್ಸ್ ನ ಮಾಲೀಕರಾದ ಲಕ್ಷ್ಮೇಗೌಡ ಮೇಲೆ ಪ್ರಕರಣ ದಾಖಲಾಗಿದೆ.ಮೈಸೂರಿನ ಮೇಟಗಳ್ಳಿ ಬಡಾವಣೆಯ ರೈಲ್ವೆ ಹಳಿ ಪಕ್ಕದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಯನ್ನ ಮೈಸೂರು ನಗರಾಭಿವೃದ್ದಿ ವತಿಯಿಂದ ಎಸ್.ಎಲ್.ಜಿ.ಕನ್ಸ್ಟ್ರಕ್ಷನ್ಸ್ ಗೆ ಗುತ್ತಿಗೆ ನೀಡಲಾಗಿತ್ತು.ಕಾಮಗಾರಿ ವೇಳೆ ಗುತ್ತಿಗೆದಾರನ ನಿರ್ಲಕ್ಷ್ಯತನಕ್ಕೆ ಶ್ರೀಗಂಧದ ಮರ ಹನನವಾಗಿತ್ತು.ಈ ಬಗ್ಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.ಜೊತೆಗೆ ಪರಿಸರವಾದಿ ಬಾನುಮೋಹನ್ ರವರು ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಈ ಸಂಭಂಧ Tv10 ಕನ್ನಡ ವಾಹಿನಿ ಸುದ್ದಿ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದಿತ್ತು.ಆರ್.ಎಫ್.ಓ.ಸುರೇಂದ್ರ,ಡಿ.ಆರ್.ಎಫ್.ಚಂದ್ರಶೇಖರ್,ಫಾರೆಸ್ಟ್ ಗಾರ್ಡ್ ಜಗದೀಶ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಮುಡಾ 5A ವಲಯದ AEE ರೂಪಶ್ರೀ ಹಾಗೂ AE ರವೀಂದ್ರ ರವರ ಬಳಿ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಇದೀಗ ಗುತ್ತಿಗೆದಾರನ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಇದು Tv10 ಕನ್ನಡ ಇಂಪ್ಯಾಕ್ಟ್ ಆಗಿದೆ…

Spread the love

Related post

ಸರ್ಕಾರಿ ಜಾಗದಲ್ಲಿ ಅಕ್ರಮ ಹೋಟೆಲ್ ನಿರ್ಮಾಣ ಆರೋಪ – ಜಿಲ್ಲಾಧಿಕಾರಿ ಗಮನ ಹರಿಸಲು ರೈತರ ಮನವಿ

ಸರ್ಕಾರಿ ಜಾಗದಲ್ಲಿ ಅಕ್ರಮ ಹೋಟೆಲ್ ನಿರ್ಮಾಣ ಆರೋಪ – ಜಿಲ್ಲಾಧಿಕಾರಿ ಗಮನ…

ಸರ್ಕಾರಿ ಜಾಗದಲ್ಲಿ ಅಕ್ರಮ ಹೋಟೆಲ್ ನಿರ್ಮಾಣ ಆರೋಪ – ಜಿಲ್ಲಾಧಿಕಾರಿ ಗಮನ ಹರಿಸಲು ರೈತರ ಮನವಿ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಸಮೀಪದ ಸರ್ವೇ ನಂ.218/1ಕ್ಕೆ ಸೇರಿದ ಸರ್ಕಾರಿ…
ಮೈಸೂರು, ಏಪ್ರಿಲ್ 13: ವಿಶ್ವಪ್ರಸಿದ್ಧ KRS Brindavan Gardens ನಲ್ಲಿ ಡಿಜಿಟಲ್ ಯುಗದಲ್ಲಿಯೂ “ಕ್ಯಾಶ್ ಮಾತ್ರ” ನಿಯಮ ಮುಂದುವರಿಯುತ್ತಿರುವುದು ಪ್ರವಾಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಮೈಸೂರು, ಏಪ್ರಿಲ್ 13: ವಿಶ್ವಪ್ರಸಿದ್ಧ KRS Brindavan Gardens ನಲ್ಲಿ ಡಿಜಿಟಲ್…

ಮೈಸೂರು, ಏಪ್ರಿಲ್ 13: ವಿಶ್ವಪ್ರಸಿದ್ಧ KRS Brindavan Gardens ನಲ್ಲಿ ಡಿಜಿಟಲ್ ಯುಗದಲ್ಲಿಯೂ “ಕ್ಯಾಶ್ ಮಾತ್ರ” ನಿಯಮ ಮುಂದುವರಿಯುತ್ತಿರುವುದು ಪ್ರವಾಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರವೇಶ ಟಿಕೆಟ್ ಪಡೆಯಲು ಬರುವವರಿಗೆ…
ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ ಬಯಲು…

ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ…

ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ ಬಯಲು… ನಂಜನಗೂಡು,ಏ12,Tv10 ಕನ್ನಡ ಯುವಕನೊಬ್ಬನನ್ನ ಕಿಡ್ನಾಪ್ ಮಾಡಿ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್ ಹಾಗೂ…

Leave a Reply

Your email address will not be published. Required fields are marked *